ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವಸಂತಗಳು ತುಂಬಿದ ಹಿನ್ನೆಲೆಯಲ್ಲಿ ಶನಿವಾರ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಮಾವೇಶವನ್ನು ಟೀಕಿಸಿರುವ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿಯನ್ನ ಕುಟುಕಿದೆ.
ಇನ್ನು ಸಮಾವೇಶಕ್ಕೆ ಆಗಮಿಸಿದವರಿಗೆ ಮನರಂಜನೆ ನೀಡಲು ವಿಜಯ್ ಪ್ರಕಾಶ್ ಮತ್ತವರ ತಂಡದಿಂದ ವಾಧ್ಯಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಇನ್ನು ಸತ್ಯ ಹರಿಶ್ಚಂದ್ರ ಹಾಡಿಗೆ ಹೆಜ್ಜೆ ಸಚಿವ ಎಂ.ಟಿ.ಬಿ.ನಾಗರಾಜು ಹಾಗೂ ಶಾಸಕ ವಿಶ್ವನಾಥ್ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ, ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನೆರೆ ಬಂದಾಗ ಕಾಣೆಯಾಗಿದ್ದ ಶಾಸಕ ಸಚಿವರೆಲ್ಲರೂ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ಸಮಾವೇಶದಲ್ಲಿ ಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಲೇವಡಿಯಾಡಿದೆ.
ಶೇ.40ರಷ್ಟು ಕಮಿಷನ್ ಹಣದಲ್ಲಿ ಜನಸ್ಪಂದನ ಸಮಾವೇಶಕ್ಕೆ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ ಸಮಾವೇಶದ ವೇದಿಕೆಯ ಅಲಂಕಾರಕ್ಕೆ ಮಾಡಿರುವ ಖರ್ಚಿನಲ್ಲಿ ಮೃತ ಅಂಕಿತಾಳ ಕುಟುಂಬದವರಿಗೆ ಪರಿಹಾರ ನೀಡಬಹುದಿತ್ತು ಹಾಡು ನೃತ್ಯಕ್ಕೆ ಖರ್ಚು ಮಾಡಿರುವ ಹಣವನ್ನ ನೆರೆ ಸಂತ್ರಸ್ತರಿಗೆ ನೀಡಬಹುದಿತ್ತು ರಸ್ತೆ ಗುಡಂಇಗಳಿಗೆ ಬಲಿಯಾದವರಿಗೆ ಕೊಡಬಹುದಿತ್ತು ಎಂದು ಸರಣಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.