ಕೋಲ್ಕತ್ತಾ:ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಮರಳಲು ಸುಪ್ರೀಂ ಕೋರ್ಟ್ Supreme Court)ನಿರ್ದೇಶನದ ಹೊರತಾಗಿಯೂ, ಅತ್ಯಾಚಾರ ಮತ್ತು ಹತ್ಯೆಗೀಡಾದ ಆರ್ಜಿ ಕರ್ ಆಸ್ಪತ್ರೆಯ RG Kar Hospital)ವೈದ್ಯರಿಗೆ ನ್ಯಾಯಕ್ಕಾಗಿ ಒತ್ತಾಯಿಸಲು (demand justice for doctors)ಪಶ್ಚಿಮ ಬಂಗಾಳದಲ್ಲಿ ಧರಣಿ ನಿರತ ಕಿರಿಯ ವೈದ್ಯರು ಸೋಮವಾರ ಸಂಜೆ ತಮ್ಮ ‘ಕೆಲಸವನ್ನು ನಿಲ್ಲಿಸುವುದಾಗಿ’ ಹೇಳಿದ್ದಾರೆ.ರಾಜ್ಯದ ಆರೋಗ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಶಿಕ್ಷಣ ನಿರ್ದೇಶಕ (ಡಿಎಚ್ಇ) DHE ರಾಜೀನಾಮೆಗೆ ಒತ್ತಾಯಿಸಿ ಮುಷ್ಕರ strike ನಿರತ ವೈದ್ಯಾಧಿಕಾರಿಗಳು Medical Officers)ಮಂಗಳವಾರ ಮಧ್ಯಾಹ್ನ ಸಾಲ್ಟ್ ಲೇಕ್ನಲ್ಲಿರುವ ಆರೋಗ್ಯ ಇಲಾಖೆಯ ಪ್ರಧಾನ ಕಛೇರಿಯಾದ ಸ್ವಾಸ್ಥ್ಯ ಭವನಕ್ಕೆ ರ್ಯಾಲಿಯನ್ನು ಸಹ ನಡೆಸಲಿದ್ದಾರೆ ಎಂದು ಹೇಳಿದರು.
“ನಮ್ಮ ಬೇಡಿಕೆಗಳು ಈಡೇರಿಲ್ಲ ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಲ್ಲ. ನಾವು ನಮ್ಮ ಆಂದೋಲನದ ಜೊತೆಗೆ ಕೆಲಸ ನಿಲುಗಡೆ ಯನ್ನು ಮುಂದುವರಿಸುತ್ತೇವೆ. ಆರೋಗ್ಯ ಕಾರ್ಯದರ್ಶಿ ಮತ್ತು ಡಿಹೆಚ್ಇ ರಾಜೀನಾಮೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ. ಮಂಗಳವಾರ ಮಧ್ಯಾಹ್ನ ನಾವು ಸ್ವಾಸ್ಥ್ಯಕ್ಕೆ ರ್ಯಾಲಿ ನಡೆಸುತ್ತೇವೆ.” ಎಂದು ಪ್ರತಿಭಟನಾನಿರತ ವೈದ್ಯರಲ್ಲಿ ಒಬ್ಬರು ಆಡಳಿತ ಮಂಡಳಿ ಸಭೆಯ ನಂತರ ಪಿಟಿಐಗೆ ತಿಳಿಸಿದರು.
ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಗಾಯದ ಗುರುತುಗಳೊಂದಿಗೆ ಸ್ನಾತಕೋತ್ತರ ತರಬೇತಿಯ ಮೃತದೇಹ ಪತ್ತೆಯಾಗಿತ್ತು.ಕರ್ತವ್ಯದಲ್ಲಿದ್ದಾಗಲೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.
ಕಿರಿಯ ವೈದ್ಯರು ಸುಮಾರು ಒಂದು ತಿಂಗಳಿನಿಂದ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿಲುಗಡೆ ಮಾಡಿ ಪ್ರತಿಭಟನೆ ನಡೆಸುತಿದ್ದಾರೆ.ರಾಜ್ಯ ಸರ್ಕಾರದ ಶಿಸ್ತು ಕ್ರಮಗಳನ್ನು ತಪ್ಪಿಸಲು ಮಂಗಳವಾರ ಸಂಜೆ 5 ಗಂಟೆಯೊಳಗೆ ತಮ್ಮ ಕರ್ತವ್ಯವನ್ನು ಪುನರಾರಂಭಿಸುವಂತೆ ಮುಷ್ಕರ ನಿರತ ವೈದ್ಯಾಧಿಕಾರಿಗಳಿಗೆ ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.ಪ್ರತಿಭಟನಾನಿರತ ವೈದ್ಯರು ಮತ್ತೆ ಕೆಲಸ ಆರಂಭಿಸಿದರೆ ಅವರ ವಿರುದ್ಧ ಶಿಕ್ಷಾರ್ಹ ವರ್ಗಾವಣೆ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಭರವಸೆ ನೀಡಿದ ಬಳಿಕ ನ್ಯಾಯಾಲಯ ಈ ನಿರ್ದೇಶನ ನೀಡಿದೆ.