ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ ವಿಶ್ವಗುರುವಾಗಲು ಎಲ್ಲರನ್ನೂ ತುಳಿದು ಹಿಂದೂಡಿ ಮುಂದೆ ಹೋಗಿ ಇನ್ನೊಬ್ಬರ ಸೋಲಿನಲ್ಲಿ ಸಂಭ್ರಮಿಸುವುದು ಕ್ರೌರ್ಯ… ಮತ್ತು ಕ್ರೌರ್ಯದ ದಲ್ಲಾಳಿಗಳು ಪ್ರತಿಪಾದಿಸುವ ಅಸಾಧ್ಯ , ಅಶಾಶ್ವತ ಮನೋವಿಕೃತಿ ಎಂದು ಬಹುಭಾಷಾ ನಟ ಕಿಶೋರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸಕಲ ವೈವಿಧ್ಯತೆಯನ್ನು ಉಳಿಸಿಕೊಳ್ಳುವ, ಆ ವಿವಿಧತೆಯಲ್ಲೂ ಒಂದಾಗಿ ಬದುಕುವ ಶಾಂತಿ ಸೌಹಾರ್ದದ ಭಾರತೀಯತೆಯ ಸಾರ್ಥಕತೆಯಲ್ಲಿ ನಾವಾಗಲೇ ವಿಶ್ವಕ್ಕೆ ಮಾದರಿ.
ಎಲ್ಲರಿಗಿಂತ ನಾನು ದೊಡ್ಡವನಾಗುವುದಕ್ಕಿಂತ ಎಲ್ಲರೊಳಗೆ ನಾನು ಆಗುವುದು ನಿಜವಾಗಿ ವಸುದೈವ ಕುಟುಂಬಕಂನ ಹಿಂದೂ ಧರ್ಮದ ಮೂಲಸಾರ. ಆ ಸತ್ಯವನ್ನು ಅರಿಯುವ, ಮೆರೆಯುವ. ಇಡೀ ವಿಶ್ವವನ್ನು ಜೋಡಿಸುವ. ನಾಳೆಯನ್ನು ಹಸನಾಗಿಸುವ ಎಂದು ನಟ ಕಿಶೋರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.