ಭ್ರಷ್ಟ ಅಧಿಕಾರಿಗಳು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಭ್ರಷ್ಟಾಚಾರ ಮಟ್ಟ ಹಾಕುವುದು ಅಸಾಧ್ಯ. ಭ್ರಷ್ಟ ಅಧಿಕಾರಿಗಳು ಆಯಕಟ್ಟಿನ ಜಾಗವನ್ನು ಆಕ್ರಮಿಸಿಕೊಂಡು ಜನರನ್ನು ವಂಚಿಸುತ್ತಲೇ ಇದ್ದಾರೆ.
ಬಿಡಿಎ ಕೆಐಎಡಿಬಿ, ಬಿಎಂಆರ್ ಡಬ್ಲೂ, ಬಿಬಿಎಂಪಿ.. ಹೀಗೆ ಎಲ್ಲೆಡೆ ಭ್ರಷ್ಟಾಚಾರ ಅನ್ನುವುದು ಮಾಮೂಲಾಗಿದೆ. ಆದರೆ ಇಲ್ಲೊಬ್ಬ ಅಧಿಕಾರಿ ಒಂದು ಗುಂಪಿನ ಜೊತೆ ಸೇರಿಕೊಂಡು ನಕಲಿ ಸಹಿ ಮಾಡಿಸಿ 84 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ಕೆಐಎಡಿಬಿಯಲ್ಲಿ ಭೂಸ್ವಾಧೀನ ಅಧಿಕಾರಿ ನಕಲಿ ಸಹಿ ಮಾಡಿಸಿ ಜಮೀನು ಭೂ ಸ್ವಾಧೀನ ಮಾಡಿಕೊಂಡಿದ್ದು, ಸರಕಾರದಿಂದ ಬಂದ ಪರಿಹಾರ ಮೊತ್ತವನ್ನು ತಾವೇ ಹಂಚಿಕೊಂಡು ನಿಜವಾದ ವಾರಸುದಾರರಿಗೆ ಸಿಗಬೇಕಾದ ಹಣವನ್ನು ವಂಚಿಸಿದ್ದಾರೆ.\
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಲ್ಕಾಪುರ ಗ್ರಾಮದ ನಿವಾಸಿಯಾದ ಗಂಗಾಧರ್ ನಕಲಿ ಸಹಿ ಹಾಕಿ ತಮ್ಮ ಜಮೀನು ಮಾರಿ ತಮಗೆ ಬರಬೇಕಾದ ೮೪ ಲಕ್ಷ ರೂ. ವಂಚಿಸಿದ್ದಾರೆ ಎಂದು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗಲೇ ಕೆಐಎಡಿಬಿ ಭೂಸ್ವಾಧೀನಾಧೀಕಾರಿ ವಿಜಯ್ ಕುಮಾರ್ ಜೊತೆ ಸೇರಿಕೊಂಡ ಸಂಬಂಧಿಕರಾದ ಹನುಮಂತರಾಯಪ್ಪ ಸಹೋದರಿ ನಾರಾಯಣಮ್ಮ, ವಕೀಲ ನವೀನ್ ಕುಮಾರ್ ಪಿತ್ರಾರ್ಜಿತ ಆಸ್ತಿಯನ್ನು ಅಕ್ರಮವಾಗಿ ಕೆಐಎಡಿಬಿಯಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.