ರಾಜ್ಯದಲ್ಲಿ ಕರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದಂತೆ ಮಹಾರಾಷ್ಟ್ರ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವಂತ ಪ್ರಯಾಣಿಕರಿಗೆ, ರಾಜ್ಯ ಸರ್ಕಾರ RT-PCR ಕರೋನ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ.
ಈ ಕುರಿತಂತೆ ಮಾಹಿತಿ ನೀಡಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಸೋಂಕು ಇಬ್ಬರಿಗೆ ತಗುಲಿರೋದು ದೃಢಪಟ್ಟಿದೆ. ಈ ಸಂಬಂಧ ಈಗಾಗಲೇ 600ಕ್ಕೂ ಹೆಚ್ಚು ಜನರ ಸ್ಯಾಂಪಲ್ ಸಂಗ್ರಹಿಸಿ ಜಿನೋಮಿಕ್ ಸ್ವೀಕ್ಸಿಂಗ್ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದರು.
ರಾಜ್ಯದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಂತ ಕರೋನ ಆತಂಕವಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ, ಕೇರಳದಿಂದ ರಾಜ್ಯಕ್ಕೆ ಬರೋರಿಗೆ ಕರೋನ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ರಾಜ್ಯಗಳಿಂದ ಬರೋರಿಗೆ ಪರೀಕ್ಷೆ ಮಾಡೋದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಹಲವು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಕರೋನ ವ್ಯಾಪಕವಾಗಿ ಹರಡುತ್ರಿರುವ ಮುನ್ಸೂಚನೆ ಕಾಣುತ್ತಿದ್ದು ಇದೆ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಆತಂಕವು ಇದೆ. ಇದನ್ನು ಸಂಪೂರ್ಣ ತಡೆಯಲು ಈತರದ ಕ್ರಮಗಳನ್ನು ಸರ್ಕಾರ ಜರುಗಿಸುವುದು ಸೂಕ್ತ.