ಮಾಜಿ ಸಿಎಂ ಸಿದ್ದರಾಮಯ್ಯರ 75ನೇ ಜನ್ಮ ದಿನಾಚರಣೆಯನ್ನು ಆಚರಿಸಲು ಅವರ ಅಭಿಮಾನಿಗಳು, ಹಿತೈಷಿಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಗಿದ್ದಾರೆ. ಈ ಮಧ್ಯೆ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಕನಕಪುರದ ಬಂಡೆಗೆ ತೋಡಿರುವ ಗುಂಡಿಯೇ ಸಿದ್ದರಾಮೋತ್ಸವ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಮೇಲಿನ ಆಸೆ ಹೆಚ್ಚಾದಂತೆ ಕಾಣುತ್ತಿದೆ ಅವರ ಪಕ್ಷದ ಅಧ್ಯಕ್ಷರು ನೋಡಿದರೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳುತ್ತಿದ್ದಾರೆ. ಇತ್ತ ಸಿದ್ದರಾಮಯ್ಯನವರು ನಾನಿಲ್ಲದೆ ಕಾಂಗ್ರೆಸ್ ಪಕ್ಷವೇ ಇಲ್ಲ ಎಂಬ ಭ್ರಮೆಯಲ್ಲಿದ್ದಾರೆ ಆದರೆ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದೆ.
ಇದುವರೆಗು ಸಿದ್ದರಾಮಯ್ಯ ತಮ್ಮ ಹಿಂಬಾಲಕರ ಮೂಲಕ ತಾವೇ ಮುಂದಿನ ಸಿಎಂ ಎಂದು ಹೇಳಿಕೆ ಕೊಡಿಸುತ್ತಿದ್ದರು ಈಗ ನಾನು ಮುಖ್ಯಮಂತ್ರಿಯಾಗಬೇಕು ಎಂದು ನನ್ನ ರಾಜಕೀಯ ಗುರುಗಳ ಆಸೆಯಾಗಿತ್ತು ಎಂದು ಹೇಳುವ ಮೂಲಕ ತ್ಮ ಆಸೆಯನ್ನ ಹಂಚಿಕೊಂಡಿದ್ದಾರೆ.
ಹಾಗಾದರೆ ಬೆವರು ಹಾಗು ಬಂಡವಾಳವನ್ನ ಹೂಡುತ್ತಿರುವವರು ಏನು ಮಾಡಬೇಕು ಎಂದು ಪ್ರಶ್ನಿಸಿದೆ. ಸಿದ್ದರಾಮೋತ್ಸವ ಎಂಬುದು ತಾವೇ ನಿರ್ದೇಶಿಸುತ್ತಿರುವ ಚಿತ್ರವಾದ್ದರಿಂದ ಸಿದ್ದರಾಮಯ್ಯ ಆಚಿತ್ರಕ್ಕೆ ನಾಯಕನಾಗಲು ಹೊರಟ್ಟಿದ್ದಾರೆ. ಈ ಚಿತ್ರದ ಮೂಲಕ ತಾವೇ ಮುಂದಿನ ಸಿಎಂ ಎಂದು ಹೇಳಲು ಹೊರಟ್ಟಿದ್ದಾರೆ ಶ್ರಮ ಮಾತ್ರ ಡಿಕೆಶಿದ್ದು ಅಧಿಕಾರ ಮಾತ್ರ ಸಿದ್ದರಾಮಯ್ಯಗೆ ಎಂದು ಲೇವಡಿ ಮಾಡಿದೆ.
ಇತ್ತ ಕನಕಪುರದ ಬಂಡೆ ಪಕ್ಷ ಪೂಜೆಯೇ ಮುಖ್ಯ ವ್ಯಕ್ತಿ ಪೂಜೆಯಲ್ಲ ಎಂದು ಗುಡುಗುತ್ತಿದೆ. ಇತ್ತ ಬಂಡೆಗೆ ಡೈನಾಮೈಟ್ ಇಡಲು ಸಿದ್ದರಾಮಯ್ಯ ಸಜ್ಜಾಗುತ್ತಿದ್ದಾರೆ. ಸಿದ್ದರಾಮೋತ್ಸವ ಬಳಿಕ ಬಂಡೆ ಛಿದ್ರವಾಗಲಿದ್ದೆಯೇ ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷರ ವಿರೋಧದ ನಡುವೆಯೂ ಸಿದ್ದರಾಮೋತ್ಸವ ನಡೆಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರೆ ಅಧ್ಯಕ್ಷರ ಇದ್ದರು ಇಲ್ಲದಂತಾಗಿದೆ ಇದು ಅವರ ಜನ್ಮದಿನೋತ್ಸವವಲ್ಲ ಡಿಕೆಶಿ ರಾಜಕೀಯ ಬೆಳವಣಿಗೆಗೆ ತೋಡಿರುವ ಗುಂಡಿ ಎಂದು ಕಟುವಾಗಿ ಟೀಕಿಸಿದೆ.