ಸಂಸತ್ತಿನ ಕಲಾಪಗಳನ್ನು ವರದಿ ಮಾಡುವ ಮಾಧ್ಯಮದವರಿಗೆ ವಿಧಿಸಲಾದ ನಿರ್ಬಂಧಗಳನ್ನು ವಿರೋಧಿಸಿ, ಪತ್ರಕರ್ತರ ದೊಡ್ಡ ಗುಂಪು ಡಿಸೆಂಬರ್ 2, ಗುರುವಾರ ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಿಂದ ಸಂಸತ್ ಭವನಕ್ಕೆ ಮೆರವಣಿಗೆ ನಡೆಸಿತು.
ಜಾರಿಯಲ್ಲಿರುವ ನಿರ್ಬಂಧಗಳು ಪತ್ರಕರ್ತರು ಪ್ರೆಸ್ ಗ್ಯಾಲರಿ, ಸೆಂಟ್ರಲ್ ಹಾಲ್ ಮತ್ತು ಸಂಸತ್ತಿನ ಕಟ್ಟಡದಲ್ಲಿನ ಕಾರ್ಯನಿರ್ವಾಹಕ ವಿಭಾಗಕ್ಕೆ ಪ್ರವೇಶಿಸುವುದನ್ನು ತಡೆಯುತ್ತದೆ. ನಿರ್ಬಂಧಗಳು ಇಲ್ಲದ ಸಂದರ್ಭದಲ್ಲಿ ಸಂಸದರೊಂದಿಗೆ ಮುಕ್ತವಾಗಿ ಸಂವಹನ ನಡೆಸಲು ಅವಕಾಶವಿತ್ತು.ಇದೀಗ ಬೆರಳೆಣಿಕೆಯಷ್ಟು ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಪತ್ರಕರ್ತರು ಆರೋಪಿಸಿದರು.
ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯಕ್ಕೆ ಒತ್ತಾಯಿಸುವ ಬ್ಯಾನರ್ಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಮುಖ್ಯ ಬ್ಯಾನರ್ನಲ್ಲಿ “ಸಂಸತ್ತಿನೊಳಗೆ ಮಾಧ್ಯಮ ಪ್ರವೇಶದ ಮೇಲಿನ ನಿರ್ಬಂಧಗಳ ವಿರುದ್ಧ ಪತ್ರಕರ್ತರಿಂದ ಪ್ರತಿಭಟನಾ ಮೆರವಣಿಗೆ” ಎಂದು ಬರೆಯಲಾಗಿತ್ತು. “ನಾವು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ”, “ಆಜಾದಿ ದೋ (ಸ್ವಾತಂತ್ರ್ಯ ನೀಡಿ)”, “ಸಂಸತ್ತಿಗೆ ಪತ್ರಕರ್ತರ ಪ್ರವೇಶವನ್ನು ಮರುಸ್ಥಾಪಿಸಿ” ಮತ್ತು ʼಈ ಕೋವಿಡ್ ಕಾಲದಲ್ಲಿ ಪತ್ರಕರ್ತರ ಮೇಲಿನ ನಿರ್ಬಂಧಗಳನ್ನು ನಿಲ್ಲಿಸಿ” ಮುಂತಾದ ಪ್ಲೇಕಾರ್ಡ್ಗಳಿದ್ದವು. ಮೆರವಣಿಗೆ ನಡೆಸಿದವರಲ್ಲಿ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಪದಾಧಿಕಾರಿಗಳು ಸೇರಿದ್ದಾರೆ.
ತಕ್ಷಣವೇ ಜಾರಿಗೆ ಬರುವಂತೆ ನಿರ್ಬಂಧಗಳನ್ನು ತೆಗೆದು ಹಾಕಬೇಕೆಂದು ಪತ್ರಕರ್ತರು ಒತ್ತಾಯಿಸಿದರು ಮತ್ತು ನಿರ್ಬಂಧಗಳನ್ನು “ನಿರಂಕುಶ” ಎಂದು ಕರೆದರು.
ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಪ್ರೆಸ್ ಅಸೋಸಿಯೇಷನ್, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಮತ್ತು ವರ್ಕಿಂಗ್ ನ್ಯೂಸ್ ಕ್ಯಾಮೆರಾಮನ್ ಅಸೋಸಿಯೇಷನ್ ಜಂಟಿಯಾಗಿ ಪ್ರತಿಭಟನೆಯನ್ನು ಆಯೋಜಿಸಿದ್ದವು.
ಐದು ಪ್ರಮುಖ ಬೇಡಿಕೆಗಳ ಪಟ್ಟಿಯೊಂದಿಗೆ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಯಿತು. ಸಂಸತ್ ಸಂಕೀರ್ಭ ಮತ್ತು ಪ್ರೆಸ್ ಗ್ಯಾಲರಿಯನ್ನು ಪುನಃಸ್ಥಾಪಿಸಲು ಒತ್ತಾಯಿಸಲಾಗಿತು. ಶಾಶ್ವತ ಪಾಸ್ ಹೊಂದಿರುವ ಎಲ್ಲಾ ಪತ್ರಕರ್ತರಿಗೆ ಪ್ರವೇಶ ನೀಡಬೇಕು ಎಂದು ಅದು ಕರೆ ನೀಡಿದೆ.
2021 ರ ಜುಲೈನಲ್ಲಿ ಲೋಕಸಭೆಯ ಸ್ಪೀಕರ್ ತೆಗೆದುಕೊಂಡ “ಹಿಂದಿನ ನಿರ್ಧಾರವನ್ನು ಜಾರಿಗೆ ತರಲು ಪತ್ರಕರ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು ಮತ್ತು ಶಾಶ್ವತ ಪಾಸ್ ಹೊಂದಿರುವ ಎಲ್ಲಾ ಪತ್ರಕರ್ತರನ್ನು ಸಂಸತ್ತಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.. ಸಂಸತ್ತಿನ ಸೆಂಟ್ರಲ್ ಹಾಲ್ಗೆ ಹಿರಿಯ ಪತ್ರಕರ್ತರ ಪ್ರವೇಶವನ್ನು ಪುನಃಸ್ಥಾಪಿಸಲು ಸಹ ಜ್ಞಾಪಕ ಪತ್ರದಲ್ಲಿ ಒತ್ತಾಯಿಸಲಾಗಿದೆ.
ವೃತ್ತಿಯಲ್ಲಿ ಅವರ ಸುದೀರ್ಘ ಸೇವೆಯನ್ನು ಗುರುತಿಸುವ ಗೌರವಾರ್ಥವಾಗಿ ಹಿರಿಯ ಪತ್ರಕರ್ತರಿಗೆ ಎಲ್ & ಡಿ ವರ್ಗವನ್ನು” ಮರುಸ್ಥಾಪಿಸಬೇಕು ಎಂದು ಅದು ಒತ್ತಾಯಿಸಿದೆ.
ಆದಷ್ಟು ಬೇಗ ಪತ್ರಿಕಾ ಸಲಹಾ ಸಮಿತಿಯನ್ನು ಪುನರ್ರಚಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯ ಅಗತ್ಯತೆಯ ಕುರಿತು ಮಾತನಾಡಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಉಮಾಕಾಂತ್ ಲಖೇರಾ, “ಅಧಿವೇಶನದ ಸಮಯದಲ್ಲಿ, ಸಂಸತ್ತು ಮಾಹಿತಿ ಮತ್ತು ಸುದ್ದಿಯ ಕೇಂದ್ರವಾಗುತ್ತದೆ. ಆದ್ದರಿಂದ, ನೀವು ಒಬ್ಬ ಪತ್ರಕರ್ತ ತನ್ನ ಕೆಲಸವನ್ನು ಮಾಡುವುದನ್ನು ತಡೆದರೆ, ನೀವು ಅವರ ಕರ್ತವ್ಯವನ್ನು ನಿರ್ವಹಿಸದಂತೆ ಅವರನ್ನು ನಿರ್ಬಂಧಿಸುತ್ತೀರಿ ಎಂದರ್ಥʼ ಎಂದು ಹೇಳಿದರು.
ಸಂಸತ್ತು ದೇಶದ ರಾಜಕೀಯ ಚಟುವಟಿಕೆಯ ಪ್ರಮುಖ ಕೇಂದ್ರವಾಗಿರುವುದರಿಂದ ಸದನದಲ್ಲಿ ಪ್ರಸ್ತಾಪಿಸಲಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಸಭೆಯಲ್ಲಿ ಸೂಚಿಸಲಾಯಿತು.
ಹಾಗಾಗಿ, ಪತ್ರಕರ್ತರಿಗೆ ಸಂಸತ್ತಿನ ಶಾಸಕಾಂಗ ಮತ್ತು ಕಾರ್ಯಕಾರಿ ಆವರಣಗಳಿಗೆ ಪ್ರವೇಶವನ್ನು ಒದಗಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ, ನವೆಂಬರ್ 31, 2021 ರಂದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಪತ್ರಕರ್ತರಿಗೆ ವಿಧಿಸಲಾದ ನಿರ್ಬಂಧಗಳನ್ನು ತೆರವುಗೊಳಿಸಿ ಎಂದು ಮನವಿ ಮಾಡಿದ್ದರು.
ಪತ್ರಕರ್ತರ ಪ್ರತಿಭಟನೆಗೆ ತೃಣಮೂಲ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಇತರ ಹಿರಿಯ ನಾಯಕರ ಒಗ್ಗಟ್ಟಿನ ಹೇಳಿಕೆಯನ್ನು ಪಕ್ಷದ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಡೆರೆಕ್ ಒ’ಬ್ರೇನ್ ಪ್ರೆಸ್ ಕ್ಲಬ್ ಅಧ್ಯಕ್ಷ ಉಮಾಕಾಂತ್ ಲಖೇರಾ ಮತ್ತು ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
“ಸಂಸತ್ತು ನಮ್ಮ ಪ್ರಜಾಪ್ರಭುತ್ವದ ಹೃದಯವಾಗಿದೆ ಮತ್ತು ಅದರ ಬಗ್ಗೆ ವರದಿ ಮಾಡುವುದು ಪಾಲಿಸಬೇಕಾದ ಪ್ರಜಾಪ್ರಭುತ್ವ ಸಂಪ್ರದಾಯವಾಗಿದೆ. ಮುಕ್ತ ಮತ್ತು ದೃಢವಾದ ಮಾಧ್ಯಮ ಸಂಸದೀಯ ಪ್ರಜಾಪ್ರಭುತ್ವದ ಆತ್ಮವಾಗಿದೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಿಂತನೆಯ ಹಕ್ಕು ರೋಮಾಂಚಕ ಪ್ರಜಾಪ್ರಭುತ್ವದ ಅಡಿಪಾಯ.
ಆದ್ದರಿಂದ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಂಸತ್ತಿನ ವರದಿ ಮಾಡಲು ಪತ್ರಕರ್ತರಿಗೆ ಎಲ್ಲಾ ಸೌಲಭ್ಯಗಳನ್ನು ತಕ್ಷಣವೇ ಮರುಸ್ಥಾಪಿಸಬೇಕು” ಎಂದು ಟಿಎಂಸಿ ಒತ್ತಾಯಿಸಿದೆ.
180 ದೇಶಗಳಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 142 ನೇ ಸ್ಥಾನದಲ್ಲಿದೆ ಎಂದು ಟಿಎಂಸಿ ಗಮನ ಸೆಳೆದಿದೆ. ಇದು ಮತ್ತಷ್ಟು ಕೆಳಕ್ಕೆ ಹೋಗುತ್ತಿದೆ. ಒಂದೆರಡು ವರ್ಷಗಳ ಹಿಂದೆ, ನಾವು 136 ಬೇ ಸೂಚ್ಯಂಕದಲ್ಲಿದ್ದೆವು, ಈಗ 142ಕ್ಕೆ ತಲುಪಿದ್ದೇವೆ ಎಂದು ಟಿಎಂಸಿ ಕಳವಳ ವ್ಯಕ್ತಪಡಿಸಿದೆ.