ರಾಜ್ಯದಲ್ಲಿ ಜಾತಿ ಜನಗಣತಿ (Caste census) ವರದಿ ಕುರಿತು ರಾಜಕೀಯವಾಗಿ ಮತ್ತು ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಯುತ್ತಿದ್ದು ಈಗಾಗಲೇ ಹಲವು ಮಠಾಧೀಶರು ಈ ವರದಿಯನ್ನು ವಿರೋಧಿಸಿದ್ದು ಮತ್ತೊಮ್ಮೆ ಗಣತಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಈ ಸಾಲಿಗೆ ಸಿದ್ದಗಂಗಾ ಮಠದ (Sidda Ganga matt) ಶ್ರೀಗಳು ಸೇರ್ಪಡೆಯಾಗಿದ್ದಾರೆ.

ಹೌದು ಜಾತಿ ಗಣತಿ ವರದಿ ಬಿಡುಗಡೆಗೆ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು (Siddalinga sri) ವಿರೋಧ ವ್ಯಕ್ತಪಡಿಸಿದ್ದಾರೆ.10 ವರ್ಷದ ಹಿಂದಿನ ವರದಿಯನ್ನು ಈಗ ಪ್ರಕಟ ಮಾಡುವ ಕ್ರಮ ನ್ಯಾಯೋಚಿತವಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಜಾತಿಗಣತಿಯನ್ನು ಪರಾಮರ್ಶೆಗೆ ಒಳಪಡಿಸಿ, ಮತ್ತೊಮ್ಮೆ ವೈಜ್ಞಾನಿಕವಾಗಿ ಗಣತಿ ಮಾಡಿ ಎಲ್ಲರನ್ನೂ ಈ ಬಗ್ಗೆ ಅಭಿಪ್ರಾಯ ಕೇಳಲಿ. ಹೀಗಾಗಿ ಹೊಸ ಸಮೀಕ್ಷೆ ಮಾಡಿದರೆ ಒಳ್ಳೆಯದು ಅಂತ ಸಿದ್ದಲಿಂಗ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.