ಇಸ್ರೇಲಿನ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟಿದ್ದು, ಪ್ರಧಾನಿ ನಿವಾಸದ ಮುಂದೆ ಉದ್ರಿಕ್ತ ಪ್ರತಿಭಟನಾಕಾರರು ಗಲಭೆ ನಡೆಸಿದ್ದಾರೆ. ಪ್ರಧಾನಿ ಬಂಧನಕ್ಕೆ ಆಗ್ರಹ ತೀವ್ರವಾಗುತ್ತಿದ್ದಂತೆ ನೆತನ್ಯಾಹು ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನೆತನ್ಯಾಹು ನೇತೃತ್ವದ ಸರ್ಕಾರ ತರಲು ಉದ್ದೇಶಿಸಿದ ಹೊಸ ಕಾನೂನಿನ ವಿರುದ್ಧ ಇಸ್ರೇಲಿಗರು ಬೀದಿಗೆ ಬಂದಿದ್ದಾರೆ. ಸರ್ಕಾರ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ನಡುವೆ, ಹೊಸ ಕಾನೂನನ್ನು ಪ್ರಶ್ನಿಸಿರುವ ವಿದೇಶಾಂಗ ಸಚಿವನನ್ನು ಸಚಿವ ಸಂಪುಟದಿಂದ ಹೊರ ಹಾಕಿರುವುದು ಏಕಾಏಕಿ ಪ್ರತಿಭಟನೆ ತೀವ್ರಗೊಳ್ಳಲು ಕಾರಣವಾಗಿದೆ. ಇಸ್ರೇಲಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದ, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ನ್ಯಾಯಾಂಗ ಸುಧಾರಣೆಯ ಹೊಸ ಕಾನೂನನ್ನು ತಂದಿರುವುದು ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. . ನ್ಯಾಯಾಂಗ ಸುಧಾರಣೆಯನ್ನು ಖಂಡಿಸಿ ಸಾವಿರಾರರು ಜನರು ಇಸ್ರೇಲ್ ರಾಜಧಾನಿ ಟೆಲ್ ಅವೀವ್ನ ಬೀದಿಗೆ ಇಳಿದಿದ್ದಾರೆ. ಇಸ್ರೇಲ್ ದೇಶದ ಧ್ವಜಗಳನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಗಳಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತರಲು ಉದ್ದೇಶಿಸಿರುವ ನ್ಯಾಯಾಂಗ ಸುಧಾರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವೈದ್ಯರು, ಶಿಕ್ಷಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಇಸ್ರೇಲ್ನ ವಿಮಾನ ನಿಲ್ದಾಣ ಸಿಬ್ಬಂದಿಗಳೂ ಮುಷ್ಕರದಲ್ಲಿ ತೊಡಗಿದ್ದಾರೆ, ಪರಿಣಾಮ ಒಂದೇ ಒಂದು ವಿಮಾನ ಹೊರಹೋಗಲು ಸಾಧ್ಯವಾಗುತ್ತಿಲ್ಲ.
ಇಸ್ರೇಲ್ನಲ್ಲಿ ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗಳು ಸೋಮವಾರ ಮತ್ತೆ ತೀವ್ರ ಸ್ವರೂಕ್ಕೆ ಇಳಿದಿದೆ. ನೆತನ್ಯಾಹು ಅವರು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಸಚಿವ ಸ್ಥಾನದಿಂದ ಭಾನುವಾರ ವಜಾಗೊಳಿಸಿದ್ದಾರೆ. ದೇಶದ ನ್ಯಾಯಾಂಗವನ್ನು ದುರ್ಬಲಗೊಳಿಸಲು ತಂದಿರುವ ಮಸೂದೆ ಸೇನೆಯಲ್ಲೂ ಒಡಕು ಉಂಟು ಮಾಡುತ್ತಿದೆ ಎನ್ನಲಾಗಿದೆ.