ಬೆಂಗಳೂರು:
ಐಪಿಎಲ್ (Indian Premier League 2026) ಆರಂಭದ ಅಂಗವಾಗಿ ಇಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ಜನಸ್ತೋಮ ಕಂಡುಬಂದಿತು. ಆರ್.ಸಿ.ಬಿ (Royal Challengers Bangalore) ಹಾಗೂ ಸನ್ ರೈಸರ್ ಹೈದರಾಬಾದ್ (Sunrisers Hyderabad) ನಡುವಿನ ಉದ್ಘಾಟನಾ ಪಂದ್ಯ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಮೈದಾನಕ್ಕೆ ಹರಿದು ಬಂದರು.ಮೈದಾನದ ಸುತ್ತಮುತ್ತ “ಆರ್ಸಿಬಿ… ಆರ್ಸಿಬಿ” ಘೋಷಣೆಗಳು ಮೊಳಗಿದರೆ, ಕೆಂಪು ಜರ್ಸಿ ತೊಟ್ಟ ಅಭಿಮಾನಿಗಳು ನಗರದ ವಾತಾವರಣವನ್ನು ಕ್ರಿಕೆಟ್ ಹಬ್ಬದಂತೆ ಮಾಡಿದರು.

ಪಂದ್ಯಕ್ಕೂ ಮುನ್ನವೇ ಕ್ರೀಡಾಂಗಣದ ಹೊರಭಾಗದಲ್ಲಿ ದಟ್ಟ ಜನಸ್ತೋಮ ಕಂಡುಬಂದಿದ್ದು, ಟ್ರಾಫಿಕ್ ನಿಯಂತ್ರಣಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿತ್ತು.ಭದ್ರತೆ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಮೈದಾನವನ್ನು ಬಹುಪದರ ಭದ್ರತೆಯ ವಲಯವನ್ನಾಗಿ ರೂಪಿಸಲಾಗಿದೆ. ಅಭಿಮಾನಿಗಳು ಸಮಯಕ್ಕಿಂತ ಮುಂಚೆಯೇ ಆಗಮಿಸಿ, ತಮ್ಮ ತಂಡಕ್ಕೆ ಬೆಂಬಲ ಸೂಚಿಸಿದರು.

ಪಂದ್ಯ ಆರಂಭಕ್ಕೂ ಮುನ್ನ ಕಳೆದ ವರ್ಷದ ದುರಂತದಲ್ಲಿ ಮೃತಪಟ್ಟ ಅಭಿಮಾನಿಗಳ ಸ್ಮರಣಾರ್ಥ ಮೈದಾನದಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಈ ಕ್ಷಣ ಅಭಿಮಾನಿಗಳಲ್ಲಿ ಭಾವನಾತ್ಮಕ ವಾತಾವರಣವನ್ನು ಮೂಡಿಸಿತು. ಐಪಿಎಲ್ 2026 ಆರಂಭದ ಮೊದಲ ದಿನವೇ ಬೆಂಗಳೂರಿನಲ್ಲಿ ಕ್ರಿಕೆಟ್ ಜ್ವರ ಗರಿಷ್ಠ ಮಟ್ಟ ತಲುಪಿದ್ದು, ಅಭಿಮಾನಿಗಳ ಸಂಭ್ರಮ ಮತ್ತು ಉತ್ಸಾಹ ಕ್ರೀಡಾಂಗಣದ ಎಲ್ಲೆಡೆ ಕಂಗೊಳಿಸಿತು.







