ಐಪಿಎಲ್ 2022ರ ಕ್ವಾಲಿಫೈಯರ್ 2 ಶನಿವಾರ ಅಹಮದಾಬಾದ್ನ ಮೊಟೇರಾ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಜಯ ಗಳಿಸಿದ ತಂಡ ಭಾನುವಾರ ಇದೇ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು ಇಂದಿನ ಪಂದ್ಯ ರಣರೋಚಕ ಕದನವಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು, ಇಂದಿನ ಪಂದ್ಯದ ಕುರಿತು ಪ್ರತಿಕ್ರಿಹಿಸಿದ ರವಿ ಶಾಸ್ತ್ರಿ, ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ತಂಡ ಈವರೆಗೂ ಒಂದು ಬಾರಿಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ಗೆ ಪ್ರವೇಶಸಿದ್ದರೂ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿದೆ. ಹೀಗಾಗಿ ಕಳೆದ 14 ಆವೃತ್ತಿಗಳಲ್ಲಿ ಅಸಾಧ್ಯವಾಗಿರುವುದನ್ನು ಆರ್ಸಿಬಿ ಈ ಬಾರಿ ಸಾಧಿಸಲು ಹೊರಟಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಮತ್ತೊಮ್ಮೆ ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಆರ್ ತಂಡ ಕೂಡ 13 ವರ್ಷಗಳ ಟ್ರೋಫಿಯ ಬರವನ್ನು ನೀಗಿಸಲು ಪಣತೊಟ್ಟಿದೆ. ಈ ಕಾರಣದಿಂಧಾಗಿಯೇ ಈ ಪಂದ್ಯ ಅತ್ಯಂತ ರೋಚಕವಾಗಿ ಸಾಗಲಿದೆ ಎಂದಿದ್ದಾರೆ.
RCB vs RR ಐಪಿಎಲ್ ಇತಿಹಾಸ
IPL ಇತಿಹಾಸ ತಿರುವಿ ನೋಡಿದರೆ, ಕ್ವಾಲಿಫೈಯರ್ ಅಂಕಿ-ಅಂಶಗಳು ರಾಜಸ್ಥಾನ ರಾಯಲ್ಸ್ ಪರವಾಗಿವೆ. ಇದು RCB ತಂಡಕ್ಕೆ ಹಿನ್ನಡೆ ಎನ್ನಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ನ ಕ್ವಾಲಿಫೈಯರ್ 1ರಲ್ಲಿ ಸೋತಿರುವ ತಂಡವು ಕ್ವಾಲಿಫೈಯರ್ 2ರಲ್ಲಿ ಆಡಿದ 11 ಪಂದ್ಯಗಳಲ್ಲಿ ಎಂಟನ್ನು ಗೆದ್ದಿದೆ. ಅಂದರೆ ಗೆಲುವಿನ ಶೇಕಡಾವಾರು 72.73. ಈ ಅಂಕಿ-ಅಂಶಗಳು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಲ ತಂದುಕೊಡಲಿದೆ..
ಈ ಸ್ಟೇಡಿಯಂನಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಮತ್ತೊಂದು ನಿರ್ಣಾಯಕ ಅಂಶವೆಂದರೆ ಅದು ಟಾಸ್. 2021ರಲ್ಲಿ ಅಹಮದಾಬಾದ್ನಲ್ಲಿ ನಡೆದ ಟಿ20 ಪಂದ್ಯಗಳಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡಗಳು 170ಕ್ಕಿಂತ ಹೆಚ್ಚಿನ ಗುರಿಯನ್ನು ಹೊಂದಿದ್ದಾಗ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲವಾಗಿವೆ. 170ಕ್ಕಿಂತ ಕಡಿಮೆ ಗುರಿಯನ್ನು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ತಂಡವು ಆರು ಸಂದರ್ಭಗಳಲ್ಲಿ ಬೆನ್ನಟ್ಟಿದೆ.
ಏನೇ ಆಗಲಿ ಈ ರಣ ರೋಚಕ ಕ್ರಿಕೇಟ್ ಅನ್ನು ಕಣ್ತುಂಬಿಕೊಳ್ಳಲು ನಾಡಿನ ಜನ RCB RCB, ಈ ಸಲ ಕಪ್ ನಮ್ದೆ ಎಂಬ ಘೋಷ ವಾಕ್ಯದಿಂದ ಕಾಯುತ್ತಿದ್ದಾರೆ.