ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಕಾರಿನ ಹಾರ್ನ್ಗಳು ತಬಲಾ ಮತ್ತು ಕೊಳಲಿನಂತೆ ಶಬ್ದ ಮಾಡಲು ಹೊಸ ನಿಯಮಗಳನ್ನು ರೂಪಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸಚಿವಾಲಯವು ಹೊಸ ನಿಯಮಗಳ ಮೇಲೆ ಕೆಲಸ ಮಾಡುತ್ತಿದೆ ಮತ್ತು ವಾಹನ ತಯಾರಕರು ಭಾರತೀಯ ಸಂಗೀತ ಉಪಕರಣಗಳ ಧ್ವನಿಯನ್ನು ಒಳಗೊಂಡಿರುವ 'ಸರಿಯಾದ ರೀತಿಯ ಹಾರ್ನ್' ಅನ್ನು ಬಳಸಲು ನಿರ್ದೇಶಿಸಲಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ನಾನು ನಾಗಪುರದಲ್ಲಿ 11 ನೇ ಮಹಡಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಪ್ರತಿದಿನ ಬೆಳಿಗ್ಗೆ 1 ಗಂಟೆ ಪ್ರಾಣಾಯಾಮ ಮಾಡುತ್ತೇನೆ. ಆದರೆ ಹಾರ್ನ್ ಶಬ್ದದಿಂದ ಬೆಳಗಿನ ನಿಶಬ್ದಕ್ಕೆ ಭಂಗ ತರುತ್ತದೆ. ಈ ತೊಂದರೆಯ ನಂತರ, ವಾಹನಗಳ ಹಾರ್ನ್ಗಳು ಸರಿಯಾದ ರೀತಿಯಲ್ಲಿರಬೇಕು ಎಂಬ ಆಲೋಚನೆ ನನ್ನ ಮನಸ್ಸಿಗೆ ಬಂದಿತು. ಕಾರಿನ ಹಾರ್ನ್ಗಳ ಸದ್ದು ಭಾರತೀಯ ವಾದ್ಯಗಳ ಶಬ್ದವಾಗಿರಬೇಕು ಎಂದು ನಾವು ಯೋಚಿಸಲು ಆರಂಭಿಸಿದ್ದೇವೆ ಮತ್ತು ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ತಬಲಾ, ತಾಳವಾದ್ಯ, ಪಿಟೀಲು, ಬಗ್ಲೆ, ಕೊಳಲು ಮುಂತಾದ ವಾದ್ಯಗಳ ಶಬ್ದವನ್ನು ಇನ್ನು ಮುಂದೆ ಹಾರ್ನ್ ಶಬ್ದದಲ್ಲಿ ಕೇಳಬಹುದು ಎಂದು ಅವರು ಹೇಳಿದ್ದಾರೆ ಈ ಸಂಬಂಧ ಕಾನೂನನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದರು. ಈ ನಿಯಮಗಳು ವಾಹನ ತಯಾರಕರಿಗೆ ಅನ್ವಯಿಸುತ್ತವೆ. ಆದ್ದರಿಂದ, ವಾಹನವನ್ನು ತಯಾರಿಸುವಾಗ, ಅದು ಸರಿಯಾದ ರೀತಿಯ ಹಾರ್ನ್ ಅನ್ನು ಹೊಂದಿರುತ್ತದೆ,ಎಂದು ಗಡ್ಕರಿಯವರು ಹೇಳಿದ್ದಾರೆ. ಏತನ್ಮಧ್ಯೆ, ಸೆಪ್ಟೆಂಬರ್ 2 ರಂದು ಗಡ್ಕರಿ ಅವರು 100 ಲಕ್ಷ ಕೋಟಿ ರೂಪಾಯಿಗಳ ಗತಿಶಕ್ತಿ ಯೋಜನೆಯು ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಕಾರ್ಯಕ್ರಮದ ಚೌಕಟ್ಟನ್ನು ಒದಗಿಸುತ್ತದೆ ಮತ್ತು ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಮತ್ತು ಪೂರೈಕೆ ಸರಪಳಿಗಳನ್ನು ಸುಧಾರಿಸುವ ಮೂಲಕ ಭಾರತೀಯ ಉತ್ಪನ್ನಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಹೇಳಿದ್ದಾರೆ.
ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ (AMCHAM) ಅನ್ನು ಉದ್ದೇಶಿಸಿ,ಗಡ್ಕರಿ ಅವರು ಅಮೆರಿಕದ ವಿಮೆ ಮತ್ತು ಪಿಂಚಣಿ ನಿಧಿಯಿಂದ ರಸ್ತೆ ವಲಯದಲ್ಲಿ ಹೂಡಿಕೆಗಳನ್ನು ಬಯಸಿದ್ದಾರೆ. ನಮ್ಮ ಸರ್ಕಾರ ಶೀಘ್ರದಲ್ಲೇ ರಾಷ್ಟ್ರೀಯ ಮಾಸ್ಟರ್ ಪ್ಲಾನ್(NMP) ಆರಂಭಿಸಲಿದೆ ಭಾರತದಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಗತಿಶಕ್ತಿ ಯೋಜನೆ ಅಡಿಯಲ್ಲಿ 100 ಲಕ್ಷ ಕೋಟಿ ರೂ ಮೀಸಲಿಡಲಾಗುವುದು ಎಂದು ಅವರು ಹೇಳಿದ್ದಾರೆ.
ಗತಿಶಕ್ತಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದರು. ಈ ಅಭಿಯಾನವನ್ನು ಈ ತಿಂಗಳು ಆರಂಭಿಸಲು ನಿರ್ಧರಿಸಲಾಗಿದೆ.
ಗಡ್ಕರಿ ಅವರ ಈ ತೀರ್ಮಾನ ಹೊರ ಬಿದ್ದ ಬೆನ್ನಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿದೆ.