• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಇಡ್ಲಿ ಕ್ಯಾನ್ಸರ್​ಗೆ ಕಾರಣ ಆಗ್ತಿದೆ. ಬ್ಯಾನ್​ ಮಾಡಲು ಸರ್ಕಾರದ ನಿರ್ಧಾರ..

ಕೃಷ್ಣ ಮಣಿ by ಕೃಷ್ಣ ಮಣಿ
February 27, 2025
in ಕರ್ನಾಟಕ, ಜೀವನದ ಶೈಲಿ, ದೇಶ, ವಾಣಿಜ್ಯ, ಶೋಧ
0
Share on WhatsAppShare on FacebookShare on Telegram

ಹೋಟೆಲ್​ಗಲ್ಲಿ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್‌ ಕವರ್​ ಬಳಕೆ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇನ್ಮುಂದೆ ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಪೇಪರ್​ ಬಳಸುವಂತಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ನಿರ್ಧಾರ ತೆಗೆದುಕೊಂಡಿದ್ದು, ಒಂದೆರಡು ದಿನದಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದೆ.

ADVERTISEMENT

ಇಡ್ಲಿ ತಯಾರು ಮಾಡುವ ಪ್ಲೇಟ್​ಗಳ ಮೇಲೆ ಬಟ್ಟೆ ಬದಲು ಇತ್ತೀಚಿಗೆ ಪ್ಲಾಸ್ಟಿಕ್​ ಬಳಸಲಾಗ್ತಿತ್ತು. ಈ ಬಗ್ಗೆ ಬೆಂಗಳೂರಿನ 500 ಹೋಟೆಲ್​ಗಳಿಂದ ಇಡ್ಲಿ ಸ್ಯಾಂಪಲ್​ ಪಡೆದಿದ್ದ ಆಹಾರ ಇಲಾಖೆ ಪರೀಕ್ಷೆಗೆ ಒಳಪಡಿಸಿತ್ತು. ಆ 500 ಸ್ಯಾಂಪಲ್​ಗಳ ಪೈಕಿ ಸುಮಾರು 35 ಸ್ಯಾಂಪಲ್​ಗಳಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆ ಆಗಿದೆ. ಅದೇ ಕಾರಣದಿಂದ ಪ್ಲಾಸ್ಟಿಕ್​ ಬಳಸದಂತೆ ಆದೇಶ ಮಾಡಲು ಮುಂದಾಗಿದೆ.

ಸಾಮಾನ್ಯವಾಗಿ ಇಡ್ಲಿ ತಯಾರಿಯ ಪ್ಲೇಟ್​ಗಳ ಮೇಲೆ ಹತ್ತಿಯ ಶುಭ್ರವಾದ ಬಟ್ಟೆ ಹಾಕಲಾಗುತ್ತದೆ. ಆದರೆ ಇತ್ತೀಚಿಗೆ ಸುಲಭ ಉಪಾಯ ಎನ್ನುವಂತೆ ಬಟ್ಟೆ ಬದಲು ಪ್ಲಾಸ್ಟಿಕ್ ಕವರ್‌ ಬಳಕೆ ಮಾಡಲಾಗ್ತಿತ್ತು. ಇಡ್ಲಿ ಮಾಡುವಾಗ ಮಾತ್ರವಲ್ಲದೆ ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಮಾಡಲಾಗ್ತಿದೆ. ಬಿಸಿ ಆಹಾರ ತಯಾರಿ ಮತ್ತು ಪ್ಯಾಕಿಂಗ್​ ವೇಳೆ ಪ್ಲಾಸ್ಟಿಕ್​ ಬಳಸಿದರೆ ಪ್ಲಾಸ್ಟಿಕ್​ನ ಕೆಮಿಕಲ್​ ಆಹಾರ ಪದಾರ್ಥ ಸೇರುತ್ತದೆ ಎನ್ನುವುದು ಸಾಬೀತಾಗಿದೆ.

ಹೋಟೆಲ್​ ಮಾಲೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ಲಾಸ್ಟಿಕ್​ ಬಳಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಹಣ ಕೊಟ್ಟು ಆಹಾರ ಸೇವನೆ ಮಾಡುವ ಜನರು ಸ್ಟೀಲ್​ ಪಾತ್ರೆಯಲ್ಲಿ ಕೊಟ್ಟರೆ ಮಾತ್ರ ಊಟ ಮಾಡ್ತೇವೆ. ಪ್ಲಾಸ್ಟಿಕ್​ ಪೇಪರ್​ನ ಮೇಲೆ ಇಡ್ಲಿ ಮಾಡಿದ್ದೀರಾ..? ಹಾಗಿದ್ದರೆ ನಮಗೆ ಬೇಡ ಎಂದು ಹೇಳುವ ಮೂಲಕ ತಿರಸ್ಕಾರ ಮಾಡಬೇಕು. ಆಗ ಅನಿವಾರ್ಯವಾಗಿ ಹೋಟೆಲ್​ನವರು ಸಾಮಾನ್ಯ ಪದ್ಧತಿಗೆ ಬರುತ್ತಾರೆ. ಇಲ್ಲದಿದ್ದರೆ ಸರ್ಕಾರ ಬ್ಯಾನ್​ ಮಾಡಿದರೂ ನಡೆಯುವುದು ನಡೆಯುತ್ತಲೇ ಇರುತ್ತದೆ.

ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ವಿಚಾರದ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡಲ್ಲ. ನಾನ್ ಸ್ಟಿಕ್ ಪ್ಲೇಟ್, ಹಾಗೆ ಇಡ್ಲಿ ಮಾಡುವಾಗ ಬಟ್ಟೆ ಬಳಕೆ ಮಾಡ್ತೇವೆ. ಸದ್ಯ ಎಲ್ಲಾ ಹೋಟೆಲ್​ಗಳಲ್ಲಿ ಈ ರೂಲ್ಸ್ ಪಾಲನೆ ಆಗ್ತಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ಕೊಡಲಾಗಿದೆ ಎಂದಿದ್ದಾರೆ.

ಐಶಾರಾಮಿ ಹೋಟೆಲ್​ನಲ್ಲಿ ಎಲ್ಲವೂ ಸರಿಯಿದೆ. ಕೇವಲ ಬೀದಿಬದಿ ಹೋಟೆಲ್​​ನವರು ಮಾತ್ರ ತಪ್ಪು ಮಾಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಎಲ್ಲಿಯೇ ಆದರೂ ಆಹಾರದ ಜೊತೆಗೆ ಪ್ಲಾಸ್ಟಿಕ್​ ಬಳಕೆ ಮಾರಕ ಎನ್ನಬಹುದು. ಬಟ್ಟೆಗಳಲ್ಲಿ ಸುಟ್ಟುಹೋಗುವ ಪ್ರಮಾಣ ಕಡಿಮೆ ಇರುತ್ತದೆ. ಅದೇ ಕಾರಣಕ್ಕೆ ಬಟ್ಟೆ ಬಳಸಿದರೆ ಆರೋಗ್ಯ ಪೂರ್ಣ. ಇಲ್ಲದಿದ್ರೆ ಅನಾರೋಗ್ಯ ಗ್ಯಾರಂಟಿ.

Tags: can diabetic patient eat idliCancercancer awarenesscancer causing chemicals released cooking idlicancer causing foodscancer research updatescancer statisticshotel idlihotel idli dangeridliidli can cause canceridli danger for canceridli foods idli cancer newsidli recipeplastic paper idli that causes cancerusing plastic sheets to cook idlis can be causes cancerworld cancer dayyour favourite idli can cause cancer
Previous Post

ಗರ್ಭಿಣಿಯರು ಆಹಾರ ಸೇವಿಸಲು ಉತ್ತಮ ಸಮಯ ಯಾವುದು?

Next Post

ಪ್ರಯಾಣ ಮಾಡುವಾಗ ಪಾದಗಳು ಊದಿಕೊಳ್ಳುವ ಸಮಸ್ಯೆ ಇದ್ದರೆ, ಹೀಗೆ ಮಾಡಿ.!

Related Posts

“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು
ಕರ್ನಾಟಕ

“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು

by ಪ್ರತಿಧ್ವನಿ
June 8, 2026
0

ಕನಕಪುರ: "ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮತ್ತೊಬ್ಬ ಡಿ.ಕೆ. ಶಿವಕುಮಾರ್ ಅವರನ್ನು ಹುಟ್ಟುಹಾಕಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಸಾಧ್ಯವಿಲ್ಲ. ಈ ಸತ್ಯವನ್ನು ಆ ಪಕ್ಷಗಳ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು"...

Read moreDetails
“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

June 8, 2026
ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

June 8, 2026
ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

June 7, 2026
“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

June 7, 2026
Next Post
ಪ್ರಯಾಣ ಮಾಡುವಾಗ ಪಾದಗಳು ಊದಿಕೊಳ್ಳುವ ಸಮಸ್ಯೆ ಇದ್ದರೆ, ಹೀಗೆ ಮಾಡಿ.!

ಪ್ರಯಾಣ ಮಾಡುವಾಗ ಪಾದಗಳು ಊದಿಕೊಳ್ಳುವ ಸಮಸ್ಯೆ ಇದ್ದರೆ, ಹೀಗೆ ಮಾಡಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada