ಮಹಾರಾಷ್ಟ್ರದಲ್ಲಿ ಸದು ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು ಈ ಮಧ್ಯೆ ಬಂಡಾಯ ಶಾಸಕರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಶಾಸಕರು ಹಾಗು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ ನಾನು ಮುಖ್ಯಮಂತ್ರಿ ಬಂಗಲೆಯನ್ನು ತೊರೆದಿರಬಹುದು ಆದರೆ ನನ್ನ ನಿರ್ಧಾರ ಅಚಲವಾಗಿದೆ ಎಂದು ರೆಬೆಲ್ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಪಕ್ಷವು ಈ ತರಹದ ಎಷ್ಟೋ ಬಮಡಾಯಗಳನ್ನು ಎದುರಿಸಿ ಅಧಿಕಾರದ ಚುಕ್ಕಾಣಿಯನ್ನ ಹಿಡಿದಿದೆ. ನಾನು ವರ್ಷಾವನ್ನು ಬಿಟ್ಟು ಹೋಗಿರಬಹುದು ಆದರೆ, ನನ್ನ ದೃಢ ಸಂಕಲ್ಪವನ್ನಲ್ಲಾ ಎಂದಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಕೋವಿಡ್-19 ಹಾಗು ಅನಾರೋಗ್ಯದ ನಡುವೆ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಇದರ ಲಾಭ ಪಡೆದ ವಿರೋಧಿಗಳು ನನ್ನ ಬಿರುದ್ದ ಮೀಸೆ ತಿರುವುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.