ಸಿದ್ದರಾಮಯ್ಯ ಒಬ್ ಜನನಾಯಕ ರಾಜ್ಯದಲ್ಲಿ ಅವರಿಗೆ ಆದ ಒಂದು ದೊಡ್ಡ ಅಭಿಮಾನಿ ಬಳಗವಿದೆ ಅವರೆಲ್ಲರು ಜತೆಗೂಡಿ ಸಿದ್ದರಾಮೋತ್ಸವ ನಡೆಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಎಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡವರಲ್ಲ ಅದು ಅವರಿಗೆ ಇಷ್ಟವಾಗುವುದಿಲ್ಲ ಎಲ್ಲರು ಒಳಗೊಂಡಂತೆ ಒಂದು ದೊಡ್ಡ ಸಮಾವೇಶವನ್ನ ಮಾಡಲಾಗುವುದು ಮೊದಲು ಇದರ ಬಗ್ಗೆ ಅವರ ಒಪ್ಪಿಗೆ ಪಡೆಯುತ್ತೇವೆ ನಂತರ ಆ ಬಳಿಕ ಕಾರ್ಯಕ್ರಮದ ಬಗ್ಗೆ ತಿಳಿಯಲಿದೆ ಎಂದಿದ್ದಾರೆ.
ಅವರು ಜನರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಈಗಲೂ ಸಹ ಜನರು ಅದನ್ನು ನೆನಪಿಸಿಕೊಳ್ಳುತ್ತಾರೆ ಇದು ಚುನಾವಣಾ ವರ್ಷ ಅವರ ಅವಧಿಯ ಜನಪರ ಯೋಜನೆಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.