Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ದ್ವೇಷ ಭಾಷಣ, ಹಿಂಸಾಚಾರದ ಸಮರ್ಥನೆ: ಮೋಹನ್ ಭಾಗವತ್ ಹೇಳಿಕೆಯ ಮತ್ತೊಂದು ಮುಖ

Shivakumar A

Shivakumar A

January 17, 2023
Share on FacebookShare on Twitter

“ಹಿಂದೂ ಸಮಾಜ ಯುದ್ಧದ ಪರಿಸ್ಥಿತಿಯಲ್ಲಿದೆ” ಇದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ನೀಡಿರುವ ಹೇಳಿಕೆ. ಇದು ಬಲಪಂಥೀಯ ಸಂಘಟನೆಯೊಂದರ ಮುಖ್ಯಸ್ಥ ನೀಡುವ ಸಾಮಾನ್ಯ ಹೇಳಿಕೆ ಎಂದು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ. ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಪ್ರತಿಯೊಂದು ದೌರ್ಜನ್ಯಗಳನ್ನು ಸಮರ್ಥಿಸಿಕೊಳ್ಳುವ, ಮೂಲಭೂತ ಹಿಂದುತ್ವವಾದಿಗಳ ದ್ವೇಷ ಭಾಷಣಗಳನ್ನು  ಸಮರ್ಥಿಸಿಕೊಳ್ಳುವ ಅತ್ಯಂತ ದುರದೃಷ್ಟಕರ ಹೇಳಿಕೆ ಎಂದರೆ ತಪ್ಪಾಗಲಾರದು.

ಹೆಚ್ಚು ಓದಿದ ಸ್ಟೋರಿಗಳು

ಬ್ರಾಹ್ಮಣ ಮುಖ್ಯಮಂತ್ರಿಯ ಕುರಿತು ಕುಮಾರಸ್ವಾಮಿ ಹುಟ್ಟುಹಾಕಿರುವ ಚರ್ಚೆ

ಟಾಂಗ್ ಗೆ ವ್ಯಂಗ್ಯವಾಗಿ ಟಾಂಗ್ ಕೊಟ್ಟ ಗುಡುಗಿದ ಮೋದಿ..!

ಬ್ರಾಹ್ಮಣ ಸ್ವಾಮೀಜಿಗೆ ಪ್ರಾಣ ಬೆದರಿಕೆ ಹಾಕಿದ್ಯಾರು..!? ಕೇಂದ್ರ ಮಾಡಿದ್ದೇನು..?

ಭಾಗವತ್ ಅವರ ಮಾತುಗಳನ್ನೇ ನೋಡುವುದಿದ್ದರೆ, ಹಿಂದೂ ಸಮಾಜ ಕಳೆದ ಸಾವಿರ ವರ್ಷಗಳಿಂದ ಯುದ್ಧ ಮಾಡುತ್ತಲೇ ಬಂದಿದೆ. ಈ ಯುದ್ಧ ಇಂದಿಗೂ ನಿಂತಿಲ್ಲ. ಮೊದಲು ವಿದೇಶಿಯರ ವಿರುದ್ಧ, ನಂತರ ವಿದೇಶಿ ಪ್ರಭಾವದ ವಿರುದ್ಧ ಅವೆಲ್ಲದ್ದಕ್ಕಿಂತ ಮಿಗಿಲಾಗಿ ದೇಶದಲ್ಲಿರುವ ಶತ್ರುಗಳ ವಿರುದ್ಧ ಹಿಂದೂ ಸಮಾಜ ಯುದ್ದ ಮಾಡುತ್ತಲೇ ಬಂದಿದೆ. ಇಂತಹ ಸುದೀರ್ಘ ಯುದ್ಧಗಳನ್ನು ಮಾಡುತ್ತಲೇ ಬಂದಿರುವವರಿಂದ ನೀವು ವಿನಮ್ರತೆಯನ್ನು ಎದುರು ನೋಡಲು ಸಾಧ್ಯವೇ ಎಂದು ಭಾಗವತ್ ಪ್ರಶ್ನಿಸಿದ್ದಾರೆ.

ದೇಶದ ಮುಸ್ಲೀಮರು ಮತ್ತು ಕ್ರೈಸ್ತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಹಾಗೂ ದ್ವೇಷಭಾಷಣಗಳನ್ನು ಸಮರ್ಥಿಸಿಕೊಂಡವರು ಭಾಗವತ್ ಒಬ್ಬರೇ ಅಲ್ಲ. ಈ ಹಿಂದೆಯೂ, ಈಗಲೂ ಹಲವರು ತಲೆ ಕಡೆಯಿರಿ, ಕಾಲುಕಡಿಯಿರಿ, ಅಸ್ತ್ರಗಳನ್ನು ಮನೆಯಲ್ಲಿಡಿ ಎಂಬಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದಕ್ಕೂ ಮಿಗಿಲಾಗಿ, ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಹೊಂದಬೇಕು ಎಂದು ನೀಡಿರುವ ಹೇಳಿಕೆ ಸಮುದಾಯದ ಸಂಪ್ರದಾಯ ಮತ್ತು ನೈತಿಕತೆಯನ್ನು ಹೆಚ್ಚಿಸುವಂತದ್ದು ಎಂದು ದೆಹಲಿ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಸಮಜಾಯಿಷಿ ಕೂಡಾ ನೀಡಿದ್ದಾರೆ. 

ಮೋಹನ್ ಭಾಗವತ್ ಒಬ್ಬ ʼದೊಡ್ಡʼ ವ್ಯಕ್ತಿ. ಅವರು ನೇರವಾಗಿ ಹಿಂದೂ ಸಮುದಾಯವನ್ನು ಹಿಂಸೆಗೆ ಪ್ರಚೋದಿಸಿಲ್ಲದಿರಬಹುದು. ಆದರೆ, ಪ್ರಸ್ತುತ ಹಿಂದೂ ಸಮುದಾಯದ ʼಯುದ್ದʼದ ಪರಿಸ್ಥಿತಿಯನ್ನು ಅವರು ಆನಂದಿಸುತ್ತಿರುವುದಂತೂ ಸತ್ಯ. 

ಮೋಹನ್ ಭಾಗವತ್ ದ್ವೇಷವನ್ನು ಮಾತ್ರ ಇಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಈ ಹಿಂದೆ, ಮುಸ್ಲೀಂ ಮಹಿಳೆಯರ ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಹತ್ಯಾಕಾಂಡ, ವ್ಯಾಪಾರ ನಿಷೇಧದಂತಹ ಹಲವು ಹೇಳಿಕೆಗಳನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ. ಯುದ್ದದಲ್ಲಿ ಎಲ್ಲವೂ ಸಾಮಾನ್ಯ ಅಲ್ಲವೇ? ಅದು ಅತ್ಯಾಚಾರವಾದರೇನು? ಹತ್ಯಾಕಾಂಡವಾದರೇನು?

ಭಾಗವತ್ ಹೇಳಿಕೆ ಪ್ರಕಾರ, ಮುಸ್ಲೀಮರಲ್ಲಿ ಒಳ್ಳೆಯವರೂ ಇದ್ದಾರೆ. ಆದರೆ, ಯುದ್ಧ ಮಾಡುತ್ತಿರುವ ಓರ್ವ ಹಿಂದೂ ಒಳ್ಳೆಯ ಮುಸ್ಲೀಂ ಮತ್ತು ಕೆಟ್ಟ ಮುಸ್ಲಿಂ ಎಂಬ ವ್ಯತ್ಯಾಸವನ್ನು ಗಮನಿಸಬಲ್ಲನೇ? ನಿಜಕ್ಕೂ ಒಳ್ಳೆಯ ಮುಸ್ಲೀಮರು ಎಂದರೆ ಯಾರು? ಅಥವಾ Everything is fair in love and war ಎಂಬ ಆಂಗ್ಲ ಗಾದೆಯನ್ನು ಮುಂದಿಟ್ಟು, ಎಲ್ಲಾ ಮುಸ್ಲೀಮರ ಮೇಲಿನ ದೌರ್ಜನ್ಯವನ್ನು ಮೋಹನ್ ಭಾಗವತ್ ಸಮರ್ಥಿಸಿಕೊಂಡರೇ?

ಗುಜರಾತ್ನ ಗೋದ್ರಾ ಹತ್ಯಾಕಾಂಡದ ಬಳಿಕ ಹೇಳಿಕೆ ನೀಡಿದ ವಿಹೆಚ್ಪಿ ಮುಖಂಡ ಕೆ ಕೆ ಶಾಸ್ತ್ರಿ, ಯುವಕರು ಹಲವು ಬಾರಿ ತಮ್ಮ ಎಲ್ಲೆಯನ್ನು ಮೀರಿ ಅತಿರೇಕದ ವರ್ತನೆ ತೋರಿದ್ದಾರೆ. ಅದು ಸರಿ ಎಂದು ನಾನು ಹೇಳುವುದಿಲ್ಲ. ಆದರೆ, ಅದನ್ ತಪ್ಪೆಂದು ನಾನು ಹೇಳು ಆಗುವುದಿಲ್ಲ. ಏಕೆಂದರೆ ಅವರು ನಮ್ಮ ಯುವಕರು. ನಮ್ಮ ಮನೆಯ ಹುಡುಗರು ಏನಾದರೂ ಮಾಡಿದರೆ ಅದನ್ನು ತಪ್ಪೆಂದು ಹೇಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಮೋಹನ್ ಭಾಗವತ್ ಹೇಳಿಕೆ ಸರಿಸುಮಾರು ಇದೇ ಧಾಟಿಯಲ್ಲಿದೆ. ಯುದ್ಧದಲ್ಲಿ ಅತಿರೇಕ ಎನ್ನುವುದು ಸಾಮಾನ್ಯ ಅಲ್ಲವೇ?

ಹಿಂದಿನಿಂದಲೂ ಮುಸ್ಲೀಂ ಹಾಘೂ ಕ್ರೈಸ್ತ ವಿರೋಧಿ ಧೋರಣೆಯಿಂದಲೇ ಬೆಳೆದು ಬಂದಿರುವ ಆರ್ಎಸ್ಎಸ್, ಈಗ ತನ್ನ ಧೋರಣೆಯನ್ನು ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ. ಯುದ್ದದಲ್ಲಿರುವ ಹಿಂದೂ ಸಮಾಜ (ಸಂಘಪರಿವಾರ?) ಯಾವ ರೀತಿಯ ಕುಕೃತ್ಯಗಳನ್ನು ಮಾಡಿದರೂ ಅದಕ್ಕೆ ಬೆಂಬಲವಿದೆ ಎಂಬ ಸಂದೇಶವನ್ನು ಭಾಗವತ್ ರವಾನಿಸಿದ್ದಾರೆ.

ಒಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ಈ ಯುದ್ಧವು ದೇಶದ ಮುಸ್ಲೀಮರಿಗೆ ಮತ್ತು ಕ್ರೈಸ್ತರಿಗೆ ಮಾರಕವಾಗಿ ಪರಿಣಮಿಸಲಿದೆ. ಯುದ್ದದ ವೇಳೆ ನಡೆಯುವ ʼಅತಿರೇಕʼದ ಕೃತ್ಯಗಳು ಸರ್ವೇ ಸಾಮಾನ್ಯವಾಗಲಿವೆ ಎಂಬ ಪರೋಕ್ಷವಾದ ಎಚ್ಚರಿಕೆಯನ್ನು ಮೋಹನ್ ಭಾಗವತ್ ರವಾನಿಸಿದ್ದಾರೆ.

ReplyForward
RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಕಾಂಗ್ರೆಸ್ನಲ್ಲಿ ಸಿಎಂ ಕೂಗು ಮತ್ತೆ ಜೋರಾಗಿದೆ.
ರಾಜಕೀಯ

ಕಾಂಗ್ರೆಸ್ನಲ್ಲಿ ಸಿಎಂ ಕೂಗು ಮತ್ತೆ ಜೋರಾಗಿದೆ.

by ಪ್ರತಿಧ್ವನಿ
February 2, 2023
ಕಾಂತಾರ 100 ಡೇಸ್‌ ಸೆಲೆಬ್ರೆಷನ್ ಶಿವ ಲೀಲಾ ಮಿಂಚಿಗ್. #pratidhvanidigital #kantara #kantaramovie #100days
ಸಿನಿಮಾ

ಕಾಂತಾರ 100 ಡೇಸ್‌ ಸೆಲೆಬ್ರೆಷನ್ ಶಿವ ಲೀಲಾ ಮಿಂಚಿಗ್. #pratidhvanidigital #kantara #kantaramovie #100days

by ಪ್ರತಿಧ್ವನಿ
February 7, 2023
ಚೆನ್ನೈನಲ್ಲಿ ಅದ್ದೂರಿಯಾಗಿ ಮುಹೂರ್ತ ಮುಗಿಸಿದ ದಳಪತಿ 67ಚಿತ್ರದ ಬಹುತೇಕ ತಾರಾಬಳಗದ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ
ಸಿನಿಮಾ

ಚೆನ್ನೈನಲ್ಲಿ ಅದ್ದೂರಿಯಾಗಿ ಮುಹೂರ್ತ ಮುಗಿಸಿದ ದಳಪತಿ 67
ಚಿತ್ರದ ಬಹುತೇಕ ತಾರಾಬಳಗದ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ

by ಪ್ರತಿಧ್ವನಿ
February 3, 2023
Siddaramaiah ಕೋಲಾರ ಕ್ಷೇತ್ರ ಬಿಟ್ಟು ನೀವು ಬೇರೆ ಕ್ಷೇತ್ರ ನೋಡಿಕೊಂಡರೆ ಸೇಫ್ . #pratidhvaninews #kolar #bjp
ರಾಜಕೀಯ

Siddaramaiah ಕೋಲಾರ ಕ್ಷೇತ್ರ ಬಿಟ್ಟು ನೀವು ಬೇರೆ ಕ್ಷೇತ್ರ ನೋಡಿಕೊಂಡರೆ ಸೇಫ್ . #pratidhvaninews #kolar #bjp

by ಪ್ರತಿಧ್ವನಿ
February 7, 2023
Siddarmaiah:ಬಾದಾಮಿನಲ್ಲಿ 200% ಗೆಲ್ತಿನಿ.. ಆದ್ರೂ ಕ್ಷೇತ್ರ ಚೇಂಜ್ ಮಾಡ್ತೀನಿ. #pratidhvaninews #siddaramaiah
ರಾಜಕೀಯ

Siddarmaiah:ಬಾದಾಮಿನಲ್ಲಿ 200% ಗೆಲ್ತಿನಿ.. ಆದ್ರೂ ಕ್ಷೇತ್ರ ಚೇಂಜ್ ಮಾಡ್ತೀನಿ. #pratidhvaninews #siddaramaiah

by ಪ್ರತಿಧ್ವನಿ
February 7, 2023
Next Post
ಸರ್ಕಾರಗಳ ಮುಸ್ಲಿಂ ದ್ವೇಷ: ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ HRW ವರದಿ

ಸರ್ಕಾರಗಳ ಮುಸ್ಲಿಂ ದ್ವೇಷ: ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ HRW ವರದಿ

ದಿಕ್ಕುತಪ್ಪುತ್ತಿರುವ ಯುವ ಸಮೂಹಕ್ಕೆ ದಾರಿಯಾವುದಯ್ಯಾ ?

ದಿಕ್ಕುತಪ್ಪುತ್ತಿರುವ ಯುವ ಸಮೂಹಕ್ಕೆ ದಾರಿಯಾವುದಯ್ಯಾ ?

N Cheluvarayaswamy : ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದು ನಾನು | Pratidhvani

N Cheluvarayaswamy : ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದು ನಾನು | Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist