ಭಾನುವಾರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಶುರುವಾದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಮಸೀದಿ ಇದ್ದ ಸ್ಥಳವನ್ನ ಹೊಡೆದು ಹಾಕಿ ಹನುಮ ದೇವಸ್ಥಾನವನ್ನ ನಿರ್ಮಾಣ ಮಾಡುತ್ತೇವೆ ಎಂದು ಹಿಂದೂ ಜಾಗರಾಣ ವೇದಿಕೆ ಸದಸ್ಯರು ಹೇಳಿದ್ದಾರೆ.
ಭಾನುವಾರ ನಡೆದ ಕಾರ್ಯಕ್ರಮ ಹಲವು ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದು ಭಾನುವಾರ ಯಾತ್ರೆಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತನೋರ್ವ ಗಂಜಾಂ ಬಳಿ ಮುಸ್ಲಿಮರ ಮೆಯ ಮೇಲಿದ್ದ ಹಸಿರು ಬಾವುಟವನ್ನ ತೆಗೆದು ಹಾಕಿ ಕೇಸರಿ ಧ್ವಜವನ್ನ ನೆಟ್ಟಿದ್ದಾನೆ. ಈ ವೇಳೆ ಕಾರ್ಯಕರ್ತನನ್ನು ಪೊಲೀಸರು ಹಿಡಿಯಲು ಯತ್ನಿಸಿದ್ದರು ಆತ ಸ್ಥಳದಿಂದ ಪರಾರಿಯಾಗಿದ್ದ.
ಇನ್ನು ಯಾತ್ರೆ ಶ್ರೀರಂಗಪಟ್ಟಣ್ಣ ತಲ್ಲುಪುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಜೈ ಶ್ರೀರಾಮ್ ಗೋಷಣೆಗಳನ್ನು ಮೊಳಗಿಸಿದ್ದರು ಮತ್ತು ಟಿಪ್ಪು ಸುಲ್ತಾನ್ ನಿರ್ಮಿಸಿದ್ದ ಮಸೀದಿಯನ್ನ ಹೊಡೆದು ಹಾಕಿ ಹನುಮನ ಗುಡಿ ಕಟ್ಟಿವುದಾಗಿ ಪ್ರತಿಜ್ಷೆ ಮಾಡಿದ್ದಾರೆ.
ನಾವು ಮಸೀದಿ ಇದ್ದ ಜಾಗದಲ್ಲಿ ಹನುಮ ಮಂದಿರ ನಿರ್ಮಿಸಲು ನ್ಯಾಯಾಲಯದಲ್ಲಿ ಹೋರಾಟ ಮಾಡಲಿದ್ದೇವೆ ಅಯೋಧ್ಯೆ ಮಾದರಿ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದು ಸಂಘಟನೆಯ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಳೇ ಮೈಸೂರು ಭಾಗಗಳಾದ ಮೇಲುಕೋಟೆ, ಕೊಡಗು, ಭಾಗದಲ್ಲಿ ಟಿಪ್ಪು ಸುಲ್ತಾನ ಹಿಂದೂಗಳಿಗೆ, ಮೈಸೂರು ಅರಸ ವಂಶಕ್ಕೂ ಇನ್ನಿಲ್ಲಿದ ಕಿರುಕುಳ ನೀಡಿದ್ದಾನೆ. ಕನ್ನಡ ಭಾಷೆಯನ್ನು ಕಡೆಗಣಿಸಿ ಪರ್ಶಿಯನ್ ಭಾಷೆಯನ್ನು ಹೇರಲು ಯತ್ನಿಸಿದ್ದು ಸುಳ್ಳಾ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.