ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 13-15ರವರೆಗೆ ಪ್ರತಿ ಮನೆ ಮೇಲೂ ಧ್ವಜ ಹಾರಿಸುವಂತೆ ದೇಶದ ಜನರಲ್ಲಿ ವಿನಂತಿಸಿದ್ದರು.
ಜನರು ತಮ್ಮ ಮನೆಗಳ ಮೇಲೆ ಹಾರಿಸಿರುವ ಧ್ವಜಗಳನ್ನು ಕೂಡಲ್ಲೇ ತೆರವುಗೊಳಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಗೋವಾ ಸರ್ಕಾರ ನಿಯಮಾನುಸಾರ ಜನರು ತಮ್ಮ ಮನೆಗಳ ಮೇಲೆ ಹಾರಿಸಿರುವ ದ್ವಜಗಳನ್ನು ಈ ಕೂಡಲ್ಲೇ ತೆರವುಗೊಳಿಸಬೇಕು ಮತ್ತು ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನಿಭಾಯಿಸಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೋವಾ ಮುಖ್ಯಮಂತ್ರಿ ಸಾವಂತ್ ಪ್ರಧಾನಿ ಕರೆ ನೀಡಿದ್ದ ಅಭಿಯಾನಕ್ಕೆ ಓಗೊಟ್ಟು ಜನರು ತಮ್ಮ ತಮ್ಮ ಮನೆಗಳ ಮೇಲೆ ಬಾವುಟಗಳನ್ನು ಹಾರಿಸಿದ್ದರು. ಅಭಿಯಾನ ಮುಗಿದರು ಸಹ ಮನೆಗಳ ಧ್ವಜ ಹಾರುತ್ತಿರುವುದರಿಂದ ಅದು ಧ್ವಜ ಸಂಹಿತೆಗೆ ವಿರುದ್ದವಾದ್ದರಿಂದ ಈ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.