ನಿವೃತ್ತ IPS ಅಧಿಕಾರಿ ಕೆಂಪಯ್ಯ ಅವರ ವಿರುದ್ಧ ದಶಕಗಳ ಹಿಂದೆ ನೀಡಲಾಗಿದ್ದಂತ ದೂರು, ಈಗ ಮತ್ತೆ ವಿಚಾರಣೆಗೆ ಬಂದಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್ ಹುದ್ದೆಗೇರಿದ ಬಗ್ಗೆ ದಾಖಲಿ ಸಹಿತ ವಿಚಾರಣೆಗೆ ಇಂದು ಹಾಜರಾಗುವಂತೆ DCRE ನೋಟಿಸ್ ನೀಡಿದೆ.
ಈ ಬಗ್ಗೆ ದೂರು ಆಧರಿಸಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಡಿಸಿಆರ್ ಇ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಿದೆ.
ಎನಿದು ಆರೋಪ?
ಕೆಂಪಯ್ಯ ಕುರುಬ ಸಮುದಾಯಕ್ಕೆ ಸೇರಿದ್ದರೂ, ಕಾಡು ಕುರುಬ ಎನ್ನುವಂತ ಪರಿಶಿಷ್ಟ ಪಂಗಡ ಜಾರಿ ಪ್ರಮಾಣ ಪತ್ರ ಪಡೆದು, ಐಪಿಎಸ್ ಹುದ್ದೆಗೆ ಏರಿರೋದಾಗಿ ದೂರು ಬಂದಿದೆ. ಈ ಸಂಬಂಧ ದಾಖಲೆಗಳ ಸಹಿತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಕುರಿತು ದಶಕಗಳ ಹಿಂದೆಯೇ ದೂರು ನೀಡಿದ್ದರೂ ತನಿಖೆಯಾಗಿರಲಿಲ್ಲ ಕಾರಣ ತನಿಖಾ ಫೈಲ್ ಮಿಸ್ ಆಗಿತ್ತು ಎಂಬ ಕಾರಣವಿತ್ತು ಆದರೀಗ ಫೈಲ್ ಮತ್ತೆ ಸಿಕಿದ್ದು ತನಿಖೆ ಶುರುವಾಗಿದೆ.