• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಧ್ಯಂತರ ಜಾಮೀನು ಅವಧಿ ವಿಸ್ತರಣೆ, ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌

ಪ್ರತಿಧ್ವನಿ by ಪ್ರತಿಧ್ವನಿ
December 9, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಂತರ ಜಾಮೀನು ಪಡೆದುಕೊಂಡು ನಟ ದರ್ಶನ್ ಬಿಡುಗಡೆಯಾಗಿದ್ದಾರೆ. ಆದರೆ 6 ವಾರ ಕಳೆದರೂ ಕೂಡ ಅವರು ಬೆನ್ನು ನೋವಿನ ಸಮಸ್ಯೆಗೆ ಸರ್ಜರಿ ಮಾಡಿಸಿಲ್ಲ. ಡಿಸೆಂಬರ್ 11ರಂದು ಅವರ ಮಧ್ಯಂತರ ಜಾಮೀನು ಅವಧಿ ಅಂತ್ಯವಾಗಲಿದೆ.

ADVERTISEMENT

ಹಾಗಾಗಿ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಬಳಿಕ ನ್ಯಾಯಮೂರ್ತಿಗಳಾದ ಎಸ್ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದರು.

ಈಗಾಗಲೆ ಬೆನ್ನು ನೋವಿನ ಸಮಸ್ಯೆ ತಿಳಿಸಿ ನಟ ದರ್ಶನ್ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 11ರಂದು ಅವರ ಮಧ್ಯಂತ ಜಾಮೀನು ಅವಧಿ ಮುಕ್ತಾಯವಾಗಲಿದೆ. ಹಾಗಾಗಿ ಕಳೆದ 5 ವಾರಗಳಿಂದ ಅವರು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಯಾವುದೇ ಬೆನ್ನುನೋವಿನ ಶಸ್ತ್ರ ಚಿಕಿತ್ಸೆಗೂ ಕೂಡ ಅವರು ಒಳಗಾಗಿಲ್ಲ. ಹೀಗಾಗಿ ಇದೀಗ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದ ಬಳಿಕ ಅರ್ಜಿಯ ಆದೇಶವನ್ನು ಕಾಯ್ದಿರಿಸಿ ಅದೇಶಿಸಿದರು.

ವಿಚಾರಣೆ ಆರಂಭವಾದಾಗ ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಬಹಳ ಸುಧೀರ್ಘವಾಗಿ ವಾದ ಮಂಡನೆ ಮಾಡಿದರು. ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸುತ್ತಿದ್ದಾರೆ. ರೇಣುಕಾಸ್ವಾಮಿ ಅಪಹರಣದ ಜೊತೆಗೆ ರಾಬರಿ ಕೂಡ ಮಾಡಿದ್ದಾರೆ. ರೇಣುಕಾ ಸ್ವಾಮಿ ದೇಹದ ಮೇಲಿನ ಕರಡಿಗೆ ಕಿತ್ತುಕೊಂಡಿದ್ದರು. ಅಪಹರಣಕ್ಕೆ ಪೂರಕವಾಗಿ ಹೈಕೋರ್ಟ್ ನಲ್ಲಿ ತೀರ್ಪು ಉಲ್ಲೇಖಿಸಿ, ಪಾನಿಪುರಿ ಕಿಟ್ಟಿ, ದುನಿಯಾ ವಿಜಯ್ ಕೇಸ್ ನಲ್ಲಿ ಇದೆ ಕೋರ್ಟ್ ವಜಾ ಗೊಳಿಸಿದೆ ಎಂದು ವಾದಿಸಿದರು.

ಈ ವೇಳೆ ಪ್ರಸನ್ನ ಕುಮಾರ್ ಪ್ರತ್ಯಕ್ಷ ದೃಶ್ಯ ಸಾಕ್ಷಿಯನ್ನು ಓದಿದರು. ಪವನ್ A3 ಊಟ ತರುತ್ತಾನೆ. ಉಳಿದವರು ಊಟ ಮಾಡುತ್ತಾರೆ. ಧನರಾಜ್ ತಂದಿದ್ದ ಯಂತ್ರದಲ್ಲಿ ರೇಣುಕಾಸ್ವಾಮಿಗೆ ಶಾಕ್ ಕೊಡುತ್ತಾನೆ. ಆಗ ರೇಣುಕಾಸ್ವಾಮಿ ವಾಹನದ ಬಳಿ ಬಿದ್ದಿದ್ದ. ದರ್ಶನ್ ಕಾರಿನಿಂದ ಬಂದವರೇ ರೇಣುಕಾ ಸ್ವಾಮಿಗೆ ಒದ್ದರು. ಪವಿತ್ರ ಗೌಡ ಚಪ್ಪಲಿಯಿಂದ ಹೊಡೆಯುತ್ತಾಳೆ. ನಂತರ ಆ ಚಪ್ಪಲಿ ತೆಗೆದುಕೊಂಡು ನಟ ದರ್ಶನ್ ಕೂಡ ಹಲ್ಲೆ ಮಾಡುತ್ತಾರೆ.ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯಾ ಎಂದು ಹೇಳಿ ಹಲ್ಲೆ ಮಾಡುತ್ತಾರೆ.

ದರ್ಶನ್ ರೇಣುಕಾ ಸ್ವಾಮಿಯ ಎದೆಯ ಭಾಗಕ್ಕೆ ತುಳಿಯುತ್ತಿದ್ದರು. ಪ್ಯಾಂಟನ್ನು ಬಿಚ್ಚಿ ಪವನ್ ಕೈಯಲ್ಲಿ ಮೆಸೇಜ್ ಓದಿಸಿದರು. ನಂತರ ಪ್ಯಾಂಟ್ ಬಿಚ್ಚಿಸಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ದರ್ಶನ್ ಒದ್ದರು. ಬಳಿಕ ಪವಿತ್ರಗೌಡಳನ್ನು ಬಿಟ್ಟು ಬರುವಂತೆ ಪುನೀತ್ ಗೆ ಸೂಚಿಸಿದರು. ಅವರನ್ನ ಬಿಟ್ಟು ಬಂದಾಗಲೂ ದರ್ಶನ್ ರೇಣುಕಾಸ್ವಾಮಿಗೆ ಹೊಡೆಯುತ್ತಿದ್ದರು. ನಂತರ ದರ್ಶನ್ ಜೊತೆಗೆ ಆರೋಪಿಗಳು ಫೋಟೋ ತೆಗೆಸಿಕೊಳ್ಳುತ್ತಾರೆ. ಸಾಕ್ಷಿಯ ಮೊಬೈಲ್ನಲ್ಲಿ ಫೋಟೋ ತೆಗೆಸಿಕೊಳ್ಳುತ್ತಾರೆ ಆ ಫೋಟೋ ಸಾಕ್ಷಿಯ ಮೊಬೈಲ್ನಲ್ಲಿ ರಿಕವರಿ ಆಗಿದೆ ಎಂದು ವಾದಿಸಿದರು.

A2, A7, A8 ತೆಗೆಸಿಕೊಂಡಿರುವ ಫೋಟೋ ಇದೆ. ಇದೇ ಶೂ ಮತ್ತು ಬಟ್ಟೆಗಳನ್ನು ರಿಕವರಿ ಮಾಡಲಾಗಿದೆ. A8 ಡ್ರೈವರ್ ಪ್ಯಾಂಟ್ ಮಾತ್ರ ಬದಲಾಗಿದೆ. ಬಾಡಿ ಶಿಫ್ಟ್ ಮಾಡುವ ಉದ್ದೇಶದಿಂದ ಪ್ಯಾಂಟ್ ಬದಲಿಸಿದ್ದಾನೆ. ಇದಕ್ಕೆ ಪೂರಕವಾಗಿ A8 ಹೇಳಿಕೆ ದಾಖಲಾಗಿದೆ. ನಂತರ ಈ ಫೋಟೋಗಳನ್ನು ಆರೋಪಿಗಳಿಗೆ ಕಳುಸಿರುತ್ತೇನೆ. ನಂತರ ಬಾಡಿ ಅನ್ನು ಹಾಲ್ ನಲ್ಲಿ ಮಲಗಿಸಿ ರುತ್ತಾರೆ ಹಾಲ್ ನಲ್ಲಿ ರೇಣುಕಾ ಸ್ವಾಮಿಯ ಬ್ಲಡ್ ಸ್ಕ್ವಾಬ್ ಸಿಕ್ಕಿದೆ. ಬಾಸ್ ಹೊಡೆದ ಜಾಗದಲ್ಲಿ ಬ್ಲಡ್ ಬರುತ್ತಿರುವುದಾಗಿ ಸಹ ಆರೋಪಿ ಹೇಳಿದ್ದಾನೆ.ನೀರು ಕೊಟ್ಟರೆ ಕೊಡುತ್ತಿಲ್ಲವೆಂದು ಸಹ ಆರೋಪಿ ಹೇಳಿದ್ದಾನೆ. ಎಲ್ಲ ಪ್ರತ್ಯಕ್ಷ ಸಾಕ್ಷಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ ರೇಣುಕಾ ಸ್ವಾಮಿ ಸತ್ತಿದ್ದನು ಇಲ್ಲವೋ ಎಂದು ಹೇಳಲು ವೈದ್ಯರು ಇರಲಿಲ್ಲ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಎದೆ ಮೂಳೆಮುರಿದ ಮಾಹಿತಿ ಇದೆ. ರೇಣುಕಾ ಸ್ವಾಮಿಯ ಒಟ್ಟು 17 ಮೂಳೆಗಳು ಮುರಿದಿವೆ. ದರ್ಶನ್ ಮತ್ತು ಆರೋಪಿಗಳ ಉಪಸ್ಥಿತಿಗೆ ಫೋಟೋಗಳ ಸಾಕ್ಷಿ ಇದೆ ಶೆಡ್ನಲ್ಲೇ ಈ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಶೆಡ್ನಲ್ಲಿದ್ದ ವಾಹನಗಳು ಫೋಟೋದಲ್ಲಿ ಕಾಣಬಹುದು. 2.5 × 1 ಸೆಂಟಿಮೀಟರ್ ಗಾಯದ ಮಾರ್ಕ್ ಅಷ್ಟೇ ಇದೆ ಎಂದು ವಾದಿಸಿದ್ದಾರೆ ಅದರಲ್ಲಿ ಇಷ್ಟೊಂದು ರಕ್ತ ಬರುವುದಿಲ್ಲವೆಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ. ಆದರೆ ದೇಹದಲ್ಲಿ 13 ರಕ್ತ ಗಾಯಗಳಿವೆ ಎಂದು ಪೋಸ್ಟ್ ಮಾರ್ಟಂ ವರದಿ ಇದೆ ಎಂದು ಅವರು ವಾದಿಸಿದರು.

ಡಿಸೆಂಬರ್​ 11ಕ್ಕೆ ದರ್ಶನ್ ಅವರ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿ ಆಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಆದ್ದರಿಂದ ಅವರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ರೆಗ್ಯುಲರ್​ ಬೇಲ್ ವಿಚಾರಣೆಯ ವಾದ-ಪ್ರತಿವಾದ ಮುಗಿದಿದ್ದು, ಆದೇಶವನ್ನು ಹೈಕೋರ್ಟ್​ ಕಾಯ್ದಿರಿಸಿದೆ. ಆದೇಶ ಬರುವವರೆಗೂ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Tags: actor darshan arrested in murder caseActor Darshan BailArgumentsbail period has been extendedDarshan's surgery is scheduledDecember 11.high court
Previous Post

ರೈತರ ಪ್ರತಿಭಟನಾ ಸ್ಥಳಕ್ಕೆ ಸಚಿವರ ಭೇಟಿ.. ಸಚಿವರಿಗೆ ಘೇರಾವ್..

Next Post

ಬಾಲೀಶ ಬಾಲಕ.. ಬೆಳಗಾವಿ ಕೇಂದ್ರಾಡಳಿತ ಪ್ರದೇಶ.. ಯಾರು ಏನಂದ್ರು..?

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
Next Post
ಬಾಲೀಶ ಬಾಲಕ.. ಬೆಳಗಾವಿ ಕೇಂದ್ರಾಡಳಿತ ಪ್ರದೇಶ.. ಯಾರು ಏನಂದ್ರು..?

ಬಾಲೀಶ ಬಾಲಕ.. ಬೆಳಗಾವಿ ಕೇಂದ್ರಾಡಳಿತ ಪ್ರದೇಶ.. ಯಾರು ಏನಂದ್ರು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada