ಶಿವಸೇನೆ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ಗೆ ಜಾರ ನಿರ್ದೇಶನಾಲಯ ವಿಚಾರಣೆಗೆ ನೋಟಿಸ್ ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಾವುತ್ ತಮ್ಮ ತಲೆ ತೆಗೆದರು ಸಹ ತಾವು ಗುವಾಹಟಿಯ ದಾರಿ ಹಿಡಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಪತ್ರ ಛಾಲ್ ಭೂ ಹಗರಣ ಸಂಬಂಧ ನಡೆದಿದೆ ನ್ನಲಾದ 1,034 ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜೂನ್ 28ರಂದು ವಿಚಾರಣೆಗೆ ಹಾಜರಾಗುವಂತೆ ಈಡಿ ನೋಟಿಸ್ ನೀಡಿದೆ. ಈಗಾಗಲೇ ಸಂಜಯ್ ಆಪ್ತ ಪ್ರವೀನ್ ಹಾಗು ಅವರ ವರ್ಷಾಗೆ ಸೇರಿದ 9 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ಮಹಾರಾಷ್ಟ್ರದಲ್ಲಿ ಸದು ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾವು ಶಿವಸೈನಿಕರು ದೊಡ್ಡ ಹೋರಾಟದಲ್ಲಿ ತೊಡಗಿದ್ದೇವೆ ನಮ್ಮನ್ನು ತಡೆಯಲು ನಡೆಸಿರುವ ರಾಜಕೀಯ ಪಿತೂರಿ ನೀವು ನನ್ನ ತಲೆ ತೆಗೆದರು ಸಹ ನಾನು ಗುವಾಹಟಿಯ ಕಡೇ ಮುಖ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಿವಸೇನೆ ನಾಯಕಿ ಪ್ರಿಯಾಂಕ ಚರ್ತುವೇದಿ ಬಿಜೆಪಿ ಬಗೆಗಿನ ನಿಜವಾದ ಭಕ್ತಿಯನ್ನ ಈಡಿ ತೋರುತ್ತಿದೆ ಎಂದು ಟೀಕಿಸಿದ್ದಾರೆ.