ಮುಖ್ಯಮಂತ್ರಿಯಾಗಿ ಮೊದಲ ಸಚಿವ ಸಂಪುಟ ಸಭೆ ವೇಳೆ ಏಕನಾಥ್ ಶಿಂಧೆ ತನ್ನ ಇಬ್ಬರು ಮಕ್ಕಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಸಚಿವ ಸಂಪುಟ ಸಭೆಯ ವೇಳೆ ಮಾತನಾಡಿದ ಅವರು, ಈ ಹಿಂದಿನ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷದ ಸರಕಾರ ರಚನೆ ವೇಳೆಯೂ ನನ್ನನ್ನು ಮುಖ್ಯಮಂತ್ರಿಯಾಗಿ ಪರಿಗಣಿಸಲಾಗಿತ್ತು. ಆದರೆ ಪಕ್ಷದಲ್ಲೇ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಕೈ ತಪ್ಪಿತು ಎಂದರು.
ಶಿವಸೇನೆ ಮುಖ್ಯಸ್ಥರ ವಿರುದ್ಧ ತಿರುಗಿಬಿದ್ದಿರುವ ಬಗ್ಗೆ ಕುಟುಂಬದಲ್ಲಿ ಏರ್ಪಟ್ಟಿರುವ ಸನ್ನಿವೇಶ ವಿವರಿಸಿದ ಅವರು, 2000ರಲ್ಲಿ ದೋಣಿ ದುರಂತದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದನ್ನು ನೆನೆದು ಕಣ್ಣೀರಿಟ್ಟರು.
ನಾನು ಈಗ ಮುಖ್ಯಮಂತ್ರಿಯಾಗಿದ್ದೇನೆ. ನಾನು ಇಡೀ ಜೀವನದಲ್ಲಿ ಕುಟುಂಬಕ್ಕೆ ಸಮಯವನ್ನೇ ನೀಡಲಿಲ್ಲ. ನನ್ನ ತಂದೆ ಈಗಲೂ ಇದ್ದಾರೆ. ಆದರೆ ತಾಯಿ ಇಲ್ಲ. ನಾನು ಕೆಲಸಕ್ಕೆ ಹೋಗುವಾಗ ಇಬ್ಬರು ಮಲಗಿರುತ್ತಿದ್ದರು. ನಾನು ವಾಪಸ್ಸು ಬರುವಾಗ ಮಲಗಿರುತ್ತಿದ್ದರು. ಹಾಗಾಗಿ ಅವರಿಗೆ ಸಮಯ ನೀಡಲು ಸಾಧ್ಯವಾಗಲಿಲ್ಲ. ನಂತರ ನನ್ನ ಮಗ ಶ್ರೀಕಾಂತ್ ಮತ್ತು ಮಗಳು ಈಗ ಇಲ್ಲ. ಇದೆಲ್ಲಾ ನೋಡಿದ ಮೇಲೆ ನನಗೆ ಅನ್ನಿಸಿದ್ದು, ಏನೆಲ್ಲಾ ಗಳಿಸಿದರೆ ಏನು ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಲಿಲ್ಲ ಅಂದರೆ ಎಂದು ಗದ್ಗಿತರಾದರು.
ನಾನು ಈ ಹಿಂದೆ ಮುಖ್ಯಮಂತ್ರಿ ಆದಾಗ ಶರದ್ ಪವಾರ್ ವಿರೋಧಿಸಿದರು. ನಂತರ ಪ್ರಶ್ನಿಸಿದಾಗ ನಿಮ್ಮಿಂದ ನನಗೆ ಏನೂ ತೊಂದರೆ ಇಲ್ಲ. ಆದರೆ ನಿಮ್ಮ ಪಕ್ಷದವರಿಗೆ ಇಷ್ಟವಿಲ್ಲ ಎಂದರು.