ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನ್ಯಾಯಾಧೀಶರೊಬ್ಬರು ವೈದ್ಯಾಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲಾ ನ್ಯಾಯಾಧೀಶೆ ನಳಿನಿ ಕುಮಾರ್ ಕೆ.ಆರ್ಪೇಟೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಔಷಧಿ ಸ್ಟೋರೇಜ್ನ ಅವ್ಯವಸ್ಥೆ ಕಂಡು ಕೆಂಡಮಂಡಲರಾದರೂ ಮತ್ತು ಅವಧಿ ಮೀರಿದ ಔಷಧಿ ಡಿಸ್ಪೋಜ್ ಮಾಡದೆ ಇರುವುದಕ್ಕೆ ಕಿಡಿಕಾರಿದ್ದಾರೆ.
ಯಾಕೆ ಇಷ್ಟು ದಿನ ಔಷಧಿ ಇಟ್ಟುಕೊಂಡಿದ್ದೀರಿ ರೋಗಿಗಳಿಗೆ ಔಷಧಿ ನೀಡುವ ಸ್ಥಳದಲ್ಲಿ ಅವಧಿ ಮೀರಿದ ಔಷಧಿ ಇದ್ರೆ ನಿಮ್ಮ ವಿರುದ್ದ ಕೇಸ್ ಆಗುತ್ತೆ ಈ ಕೂಡಲೇ ಸ್ಟೋರೇಜ್ನಲ್ಲಿರುವ ಅವಧಿ ಮೀರಿದ ಔಷಧಿಗಳನ್ನ ವಾಪಸ್ಸು ಕಳುಹಿಸಿ ಎಂದು ವ್ಯದ್ಯಾಧಿಕಾರಿಗಳಗೆ ಸೂಚನೆ ನೀಡಿದ್ದಾರೆ.
ಆಸ್ಪತ್ರೆಯ ಹೆರಿಗೆ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ ಸೇರಿದಂತೆ ಆಸ್ಪತ್ರೆ ದಾಖಲಾತಿ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ ನ್ಯಾಯಾಧೀಶೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದ ನ್ಯಾಯಧೀಶೆಯ ಕ್ರಮಕ್ಕೆ ಎಲ್ಲರೂ ಬೇಷ್ ಎಂದು ಹೇಳುತ್ತಿದ್ದಾರೆ.