ಸದಾ ಒಂದಲ್ಲ ಒಂದು ವಿವಾದಾತ್ಮಕ ವಿಚಾರಗಳಿಂದಲೇ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಕೇರಳ ಸ್ಟೋರಿ ಯ ವಿಚಾರದ ಕುರಿತು ಮಾತನಾಡಿದ್ದಾರೆ ಅವರು ಬಾಲಿವುಡ್ನ್ನು ಟಾರ್ಗೆಟ್ ಮಾಡಿದ್ದಾರೆ.

ಈಗಾಗಲೇ ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಬಹುದೊಡ್ಡ ವಿವಾದ ಹಾಗೂ ಸಂಚಲನವನ್ನು ಮೂಡಿಸಿದೆ. ಈ ಸಿನಿಮಾ ಕುರಿತು ಪರ-ವಿರೋಧದ ಚರ್ಚೆಗಳು ಕೂಡ ನಡೆಯುತ್ತಿವೆ. ಜೊತೆಗೆ ಸಾಕಷ್ಟು ಮಂದಿ ಈ ಚಿತ್ರ ಕೋಮುಸೌಹಾರ್ದತೆಯನ್ನು ಕೆಡಿಸುವ ಉದ್ದೇಶದಿಂದ ಮಾಡಲಾಗಿದೆ ಎಂಬ ಆರೋಪವನ್ನು ಕೂಡ ಮಾಡಿದ್ದಾರೆ.


ಆದರೂ ಕೂಡ ಈ ಚಿತ್ರ ಯಾವುದೇ ಅಡೆ-ತಡೆ ಇಲ್ಲದೆ ಮುನ್ನುಗ್ಗುತಿದೆ. ಇನ್ನು ಈ ಚಿತ್ರಕ್ಕೆ ಸಾಕಷ್ಟು ಪರ ವಿರುದ್ಧವಾದ ವಿಮರ್ಶೆಗಳು ಕೂಡ ಬಂದಿದೆ ಇದೀಗ ಈ ಚಿತ್ರದ ಬಗ್ಗೆ ನಿರ್ದೇಶಕ ರಾಮಗೋಪಾಲ್ ವರ್ಮ ತಮ್ಮದೇ ಆದ ಅಭಿಪ್ರಾಯವನ್ನ ಟ್ವಿಟರ್ನಲ್ಲಿ ಹೊರ ಹಾಕಿದ್ದಾರೆ.

ರಾಮ್ ಗೋಪಾಲ್ ವರ್ಮ ಸಿನಿಮಾ ನಿರ್ದೇಶನದ ಜೊತೆಗೆ ಚಿತ್ರರಂಗದಲ್ಲಿನ ಆಗುಹೋಗುಗಳ ಬಗೆಯು ಕೂಡ ಆಗಾಗ ಮಾತನಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ವಿವಾದಗಳನ್ನು ಕೂಡ ಸೃಷ್ಟಿಸುತ್ತಾರೆ. ಇದೀಗ ಕೇರಳ ಸ್ಟೋರಿ ಚಿತ್ರದ ಬಗ್ಗೆ ಮಾತನಾಡುತ್ತಾ ಬಾಲಿವುಡ್ ನ ನಿಲುವಿನ ಬಗ್ಗೆ ಅಪಸ್ವರವನ್ನು ಎತ್ತಿದ್ದಾರೆ
ಈ ಕುರಿತು ಟ್ವಿಟ್ ಮಾಡಿರುವ ಅವರು ನಮಗೆ ಮತ್ತು ಪರರಿಗೆ ನಾವು ಮಿತ್ಯವನ್ನ ಹೇಳಿಕೊಡುತ್ತೇವೆ. ಯಾರಾದರೂ ಕೊಂಚ ಮುಂದೆ ಹೋಗಿ ಸತ್ಯವನ್ನು ತೋರಿಸಿದಾಗ ನಾವು ಅಚ್ಚರಿ ಮತ್ತು ಆಘಾತಕ್ಕೆ ಒಳಗಾಗುತ್ತೇವೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಕೇರಳ ಸ್ಟುಡಿಯೋ ಸಕ್ಸಸ್ ವಿಚಾರದ ಬಗ್ಗೆ ಮೌನ ಆವರಿಸಿದೆ. ಸುಳ್ಳನ್ನ ನಕಲು ಮಾಡೋದು ತುಂಬಾ ಸುಲಭ ಆದರೆ ಸತ್ಯವನ್ನ ನಕಲು ಮಾಡೋದಕ್ಕೆ ಕಷ್ಟವಾಗುತ್ತದೆ ಅಂತ ಟ್ವಿಟ್ ಮಾಡುವ ಮೂಲಕ ಬಾಲಿವುಡ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ರಾಮ್ ಗೋಪಾಲ್ ವರ್ಮ ಅವರ ಈ ಟ್ವೀಟಿಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಾ ಇವೆ. ಸದ್ಯಕ್ಕೆ ವಿವಾದಗಳಿಂದಲೇ ಸುದ್ದಿಯಲ್ಲಿರುವ ರಾಮ ಗೋಪಾಲ್ ವರ್ಮಾ ಅವರಿಗೆ ಈ ವಿವಾದದ ಅವಶ್ಯಕತೆ ಇತ್ತಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ












