Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Director Anurag Kashyap : ತಮಿಳಿನ ಸ್ಟಾರ್ ನಟನ ಬಗ್ಗೆ ನಿರ್ದೇಶಕ ಅನುರಾಗ ಕಶ್ಯಪ್ ಬೇಸರ..!

ಪ್ರತಿಧ್ವನಿ

ಪ್ರತಿಧ್ವನಿ

May 22, 2023
Share on FacebookShare on Twitter

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಈಗ ಏನೇ ಮಾತನಾಡಿದರು ಸುದ್ದಿಯಲ್ಲಿ ಇರ್ತಾರೆ. ಸದ್ಯ ಈಗ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬ್ಯುಸಿಯಾಗಿರುವ ಅನುರಾಗ್ ಫ್ರಾನ್ಸ್‌ಲ್ಲಿದ್ದಾರೆ. ಇನ್ನು ಈ ಫಿಲಂ ಫೆಸ್ಟಿವಲ್‌ನಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಕೆನಡಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ ಕಶ್ಯಪ್ ಕಾಲಿವುಡ್ ಸ್ಟಾರ್ ನಟನ ಬಗ್ಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ

ಈ ಬಗ್ಗೆ ಮಾತನಾಡಿರುವ ಅವರು ಈ ಸಿನಿಮಾದ ಹೆಸರಿಗೂ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರಿಗೂ ಸಂಬಂಧವಿದೆ ಅಂತ ಹೇಳಿ ಎಲ್ಲರನ್ನ ಅಚ್ಚರಿಗೆ ದೂಡಿದ್ದಾರೆ. ಇದೇ ವೇಳೆ ವಿಕ್ರಮ್ ಅವರನ್ನ ಕೆನಡಿ ಅಂತ ಕರೆಯುತ್ತಾರೆ ಎಂದು ಅನುರಾಗ್ ತಿಳಿಸಿದ್ದಾರೆ.

ಇನ್ನು ಅನುರಾಗ್ ಕಶ್ಯಪ್ ಅವರ ನೇತೃತ್ವದಲ್ಲಿ ಮೂಡಿ ಬಂದಿರುವ ಕೆನಡಿ ಸಿನಿಮಾದಲ್ಲಿ ರಾಹುಲ್ ಭಟ್, ಸನ್ನಿ ಲಿಯೋನ್ ಮತ್ತು ಅಭಿಲಾಷ್ ಥಪ್ಲಿಯಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಿದ್ರಾಹೀನತೆಯ ಸಮಸ್ಯೆಯಲ್ಲಿ ಇರುವ ಮಾಜಿ ಪೋಲೀಸ್ ಸುತ್ತ ಸುತ್ತುವ ಕಥಾ ಹಂದರವನ್ನ ಈ ಸಿನಿಮಾ ಹೊಂದಿದೆ. ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ನಟ ರಾಹುಲ್ ಭಟ್ ಈ ಸಿನಿಮಾಗೆ ಮೊದಲ ಆಯ್ಕೆ ಆಗಿರಲಿಲ್ಲ ಎನ್ನುವ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ‘ನಾನು ಈ ಸಿನಿಮಾಗೆ ಸ್ಟ್ರಿಪ್ಟ್ ಮಾಡುವಾಗ ಒಬ್ಬ ಪ್ರಮುಖ ಸ್ಟಾರ್ ನಟನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಅದಕ್ಕಾಗಿಯೇ ಈ ಚಿತ್ರಕ್ಕೆ ಕೆನಡಿ ಎಂದು ಟೈಟಲ್ ಇಟ್ಟಿದ್ದು’ ಅಂತ ತಿಳಿಸಿದ್ದಾರೆ.

ಯಾವ ನಟ ನಿಮ್ಮ ಮೊದಲ ಆಯ್ಕೆ ಆಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅನುರಾಗ್ ಕಶ್ಯಪ್, ‘ಆ ಸ್ಟಾರ್ ನಟನ ನಿಕ್ ನೇಮ್ ಕೆನಡಿ. ಹಾಗಾಗಿ ಈ ಸಿನಿಮಾಗೆ ಕೆನಡಿ ಪ್ರಾಜೆಕ್ಟ್ ಅನ್ನೋ ಹೆಸರನ್ನ ಕೊಡಲಾಯಿತು. ಆ ಸ್ಟಾರ್ ನಟನ ಈಗಿನ ಹೆಸರು ಚಿಯಾನ್ ವಿಕ್ರಮ್. ಚಿಯಾನ್ ವಿಕ್ರಮ್ ಅವರ ನಿಜವಾದ ಹೆಸರು ಕೆನಡಿ. ಹೀಗಾಗಿ ಈ ಸಿನಿಮಾದ ಉದ್ದೇಶದಿಂದಾಗಿ ನಾನು ಅವರನ್ನು ಹಲವು ಬಾರಿ ಸಂಪರ್ಕಿಸಿದೆ. ಅವರು ಯಾವತ್ತೂ ನನಗೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಆಗ, ನಾನು ರಾಹುಲ್‌ರನ್ನು ಭೇಟಿ ಮಾಡಿದೆ. ನಾನು ಸ್ಟ್ರಿಪ್ಟ್ ಕೊಟ್ಟು ಓದಲು ಹೇಳಿದೆ. ಅವರ ಪ್ರತಿಕ್ರಿಯೆ ಉತ್ಸಾಹಭರಿತವಾಗಿತ್ತು. ಸ್ಕ್ರಿಪ್ಟ್ ಓದಿದ ಅವರು ಈ ಪಾತ್ರವನ್ನು ಯಾರು ಮಾಡುತ್ತಿದ್ದಾರೆ? ಎಂದು ಕೇಳಿದ್ರು, ಇದಕ್ಕೆ ನಾನು, ನೀವು ಅದನ್ನು ಮಾಡುತ್ತೀರಾ? ಎಂದು ಕೇಳಿದೆ, ನಾನಾ? ಎಂದು ಕೇಳಿದರು. ಹೌದು ಅಂತ ಹೇಳಿದೆ. ಹಾಗಾಗಿ ಈ ಸಿನಿಮಾ ಈಗ ಮೂಡಿ ಬಂದಿದೆ ಎಂದು ಹೇಳಿಕೆಯನ್ನ‌ ನೀಡಿದ್ದಾರೆ‌.

ಸದ್ಯದ ಮಟ್ಟಿಗೆ ಅನುರಾಗ ಕಶ್ಯಪ್ ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಬಗ್ಗೆ ಭಿನ್ನ ವಿಭಿನ್ನವಾದ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಾ ಇವೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

Save The Money : ಆಸ್ತಿ ಖರೀದಿ ಮಾಡುವ ವೇಳೆ ಹಣ ಉಳಿಸಬೇಕೆ? ಹಾಗಾದಲ್ಲಿ ಈ ಪ್ಲಾನ್​ ಟ್ರೈ ಮಾಡಿ ನೋಡಿ..!
Top Story

Save The Money : ಆಸ್ತಿ ಖರೀದಿ ಮಾಡುವ ವೇಳೆ ಹಣ ಉಳಿಸಬೇಕೆ? ಹಾಗಾದಲ್ಲಿ ಈ ಪ್ಲಾನ್​ ಟ್ರೈ ಮಾಡಿ ನೋಡಿ..!

by ಪ್ರತಿಧ್ವನಿ
May 28, 2023
Mango Mela in Mysore : ಮೈಸೂರಿನಲ್ಲಿ ಮಾವು ಮೇಳ ಆಯೋಜನೆ ; ಕೆಮಿಕಲ್ ಬಳಸದೆ ಬೆಳೆದ  ಹಣ್ಣಿಗೆ ಫುಲ್‌ ಡಿಮಾಂಡ್..!
Top Story

Mango Mela in Mysore : ಮೈಸೂರಿನಲ್ಲಿ ಮಾವು ಮೇಳ ಆಯೋಜನೆ ; ಕೆಮಿಕಲ್ ಬಳಸದೆ ಬೆಳೆದ ಹಣ್ಣಿಗೆ ಫುಲ್‌ ಡಿಮಾಂಡ್..!

by ಪ್ರತಿಧ್ವನಿ
May 26, 2023
NEW MINISTER : ನೂತನ ಕಾಂಗ್ರೆಸ್‌ ಸರ್ಕಾರದಲ್ಲಿ ಸಂಪೂರ್ಣ ಕ್ಯಾಬಿನೆಟ್‌..!
Top Story

NEW MINISTER : ನೂತನ ಕಾಂಗ್ರೆಸ್‌ ಸರ್ಕಾರದಲ್ಲಿ ಸಂಪೂರ್ಣ ಕ್ಯಾಬಿನೆಟ್‌..!

by ಕೃಷ್ಣ ಮಣಿ
May 27, 2023
CM Siddaramaiah Cabinet : ಸಚಿವ ಸಂಪುಟದಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯ ಎತ್ತಿ ಹಿಡಿದ CM ಸಿದ್ದರಾಮಯ್ಯ
Top Story

CM Siddaramaiah Cabinet : ಸಚಿವ ಸಂಪುಟದಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯ ಎತ್ತಿ ಹಿಡಿದ CM ಸಿದ್ದರಾಮಯ್ಯ

by ಪ್ರತಿಧ್ವನಿ
May 27, 2023
DCM DK Shivakumar | ಆಯುಧಪೂಜೆ ವೇಳೆ ಕೇಸರಿ ಹಾಕಿದ್ದ ಖಾಕಿಪಡೆ..! ಬಡ್ಡಿ ಸಮೇತ ಕೊಟ್ಟ ಡಿಸಿಎಂ..!
Top Story

DCM DK Shivakumar | ಆಯುಧಪೂಜೆ ವೇಳೆ ಕೇಸರಿ ಹಾಕಿದ್ದ ಖಾಕಿಪಡೆ..! ಬಡ್ಡಿ ಸಮೇತ ಕೊಟ್ಟ ಡಿಸಿಎಂ..!

by ಪ್ರತಿಧ್ವನಿ
May 24, 2023
Next Post
Congress leader Skydived  ;  70ರ ಹರೆಯದಲಿ ಸ್ಕೈ ಡೈವಿಂಗ್ ಮಾಡಿದ ಕಾಂಗ್ರೆಸ್ ನಾಯಕ..!

Congress leader Skydived ; 70ರ ಹರೆಯದಲಿ ಸ್ಕೈ ಡೈವಿಂಗ್ ಮಾಡಿದ ಕಾಂಗ್ರೆಸ್ ನಾಯಕ..!

ಅಧಿವೇಶನ ಆರಂಭಕ್ಕೂ ಮುನ್ನ ಗೋಮೂತ್ರ ಸಿಂಪಡಿಸಿ ವಿಧಾನಸೌಧ ಶುದ್ಧೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರು

ಅಧಿವೇಶನ ಆರಂಭಕ್ಕೂ ಮುನ್ನ ಗೋಮೂತ್ರ ಸಿಂಪಡಿಸಿ ವಿಧಾನಸೌಧ ಶುದ್ಧೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರು

DCM DK. Sivakumar | DCM ಡಿಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕ!

DCM DK. Sivakumar | DCM ಡಿಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist