ಗುರುವಾರ ನಡೆದ ಚೆನೈ ಸೂಪರ್ ಕಿಂಗ್ಸ್ ಹಾಗು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಬಳಿಕ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬೈ ತಂಡದ ಯುವ ಆಟಗಾರರಿಗೆ ತಮ್ಮ ಸಹಿಯಿರುವ ಜೆರ್ಸಿ ಹಾಗು ಆಟದ ಬಗ್ಗೆ ಸಲಹೆಯನ್ನ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆದಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಸಿಎಸ್ಕೆ ತಂಡ 97 ರನ್ಗಳಿಗೆ ಆಲೌಟ್ ಆಗಿತ್ತು ಸಾಧಾರಣ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ 14.5 ಒವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 98 ರನ್ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತ್ತು.
ಪಂದ್ಯ ಮುಗಿದ ಬಳಿಕ ಧೋನಿ ತಮ್ಮ ಸಹಿ ಹಾಕಿರುವ ಜೆರ್ಸಿಯನ್ನು ಯುವ ಆಟಗಾಗರಿಗೆ ನೀಡುವ ಮೂಲಕ ಹುರಿದುಂಬಿಸಿದ್ದಾರೆ. ಇದೀಗ ಈ ವಿಡಿಯೋ ಹಾಗು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು ಎಲ್ಲರು ಎಂ.ಎಸ್.ಡಿ ಮಾಡಿದ ಕೆಲಸಕ್ಕೆ ಅಭಿಮಾನಿಗಳು ಬಹುಪರಾಕ್ ಎನ್ನುತ್ತಿದ್ದಾರೆ.