ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕೊರೋನಾ ತಹಬದಿಗೆ ಬಂದಿದ್ದರೂ ಕೊರೋನಾ ಎಚ್ಚರಿಕೆಯಿಂದಲೇ ಸಾಗಬೇಕಿದೆ. ಇದರ ನಡುವೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೀ ಹಾಗೂ ಚಿಕುನ್ ಗುನ್ಯ ಪ್ರಕರಣಗಳು ಏಕಾಏಕಿಯಾಗಿ ಏರಿಕೆಯಾಗಿದೆ. ಇದು ಈಗ ಆತಂಕ ಉಂಟು ಮಾಡಿದೆ.
ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಚಳಿಯೂ ಮೈ ಕೊರೆಯುವಂತ ಅನುಭವವನ್ನು ಜನರಿಗೆ ನೀಡುತ್ತಿದೆ. ನಿನ್ನೆ ಕೂಡ ಬೆಂಗಳೂರಿನಾದ್ಯಂತ ಧಾರಕಾರ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಸದ್ಯ ಕಳೆದ ಹತ್ತು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಡೆಂಘೀ ಹಾಗೂ ಚಿಕುನ್ ಗುನ್ಯ ಕೇಸ್ ಗಳ ಸಂಖ್ಯೆ ಹೆಚ್ಚಾಗಿದೆ.
10 ದಿನದ ಅಂತರದಲ್ಲಿ ಡೆಂಘೀ ಹಾಗೂ ಚಿಕುನ್ ಗುನ್ಯ ಕೇಸ್ ಹೆಚ್ಚಳವಾಗಿದೆ. ರಾಜ್ಯದಲ್ಲಿ ಒಟ್ಟು 5,185 ಡೆಂಘೀ ಕೇಸ್, 1621 ಚಿಕುನ್ ಗುನ್ಯ ಕೇಸ್ ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 1048 ಡೆಂಘೀ ಕೇಸ್ ಹಾಗೂ ಚಿಕುನ್ ಗುನ್ಯ 53 ಕೇಸ್ ಗಳು ಕಂಡುಬಂದಿವೆ.
ಬೆಂಗಳೂರಿನಲ್ಲಿ ವಲಯವಾರು ಪತ್ತೆಯಾಗಿರುವ ಡೆಂಘೀ ಕೇಸ್.!!
ವಲಯ | ಟೆಸ್ಟಿಂಗ್ | ಡೆಂಘೀ ಕೇಸ್ |
ಬೊಮ್ಮನಹಳ್ಳಿಯಲ್ಲಿ | 2623 | 64 |
ದಾಸರಹಳ್ಳಿ | 129 | 29 |
ಪೂರ್ವವಲಯದಲ್ಲಿ | 13970 | 401 |
ಮಹದೇವಪುರದಲ್ಲಿ | 4095 | 142 |
ಆರ್ ಆರ್ ನಗರದಲ್ಲಿ | 2332 | 92 |
ದಕ್ಷಿಣವಲಯದಲ್ಲಿ | 8267 | 102 |
ಪಶ್ಚಿಮವಲಯದಲ್ಲಿ | 4825 | 80 |
ಯಲಹಂಕದಲ್ಲಿ | 2102 | 138 |
ಬೆಂಗಳೂರಿನಲ್ಲಿ ವಲಯವಾರು ಪತ್ತೆಯಾಗಿರುವ ಚಿಕುನ್ ಗುನ್ಯ ಕೇಸ್.!!
ವಲಯ | ಟೆಸ್ಟಿಂಗ್ | ಚಿಕುನ್ ಗುನ್ಯ |
ಬೊಮ್ಮನಹಳ್ಳಿಯಲ್ಲಿ | 115 | 6 |
ದಾಸರಹಳ್ಳಿ | 19 | 2 |
ಪೂರ್ವವಲಯದಲ್ಲಿ | 570 | 12 |
ಮಹದೇವಪುರದಲ್ಲಿ | 87 | 2 |
ಆರ್ ಆರ್ ನಗರದಲ್ಲಿ | 63 | 5 |
ದಕ್ಷಿಣವಲಯದಲ್ಲಿ | 272 | 15 |
ಪಶ್ಚಿಮವಲಯದಲ್ಲಿ | 249 | 10 |
ಯಲಹಂಕದಲ್ಲಿ | 59 | 1 |
ಮಳೆ ನೀರು ಶೇಖರಣೆ ಬಗ್ಗೆ ಎಚ್ಚರವಹಿಸಿ ಎಂದ ಬಿಬಿಎಂಪಿ.!!
ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಹಾಗೂ ಚಿಕುನ್ ಗುನ್ಯಾ ಕೇಸ್ ಹೆಚ್ಚುತ್ತಿರುವ ವಿಚಾರವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ಅಲ್ದೆ ಮಳೆ ನೀರು ಅಥವಾ ಇತರೆ ನೀರು ತಂಗಿನಿಲ್ಲುವಂತೆ ಮಾಡಬೇಡಿ ಎಂದು ಬಿಬಿಎಂಪಿ ಬೆಂಗಳೂರಿನ ಜನರಲ್ಲಿ ಮನವಿ ಮಾಡಿಕೊಂಡಿದೆ. ಮನೆಯ ಸುತ್ತ ಮುತ್ತ ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದು ಲಾರ್ವಾ ಬ್ರೀಡ್ ಆಗುವ ಸಮಯ. ಹೀಗಾಗಿ ಸೊಳ್ಳೆಗಳ ಹುಟ್ಟಿಗೆ ದಾರಿ ಮಾಡಬೇಡಿ. ಈಗಾಗಲೇ ಬಿಬಿಎಂಪಿ ಆಂಟಿ ಲಾರ್ವಾ ಸಿಂಪಡಿಕೆ ಮಾಡುವ ಕೆಲಸ ಶುರು ಮಾಡಿದೆ. ಆದರೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿದ್ದಾರೆ.
ಒಟ್ಟು ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ 20% ರಷ್ಟು ಕೇಸ್ ಗಳು ಏರಿಕೆಯಾಗಿದೆ. ಹೆಚ್ಚಿನದಾಗಿ ಮಕ್ಕಳಲ್ಲಿ ಡೆಂಘೀ ಕೇಸ್ ಗಳು ಏರಿಕೆಯಾಗುತ್ತಿವೆ. ಹೀಗಾಗಿ ಬಿಬಿಎಂಪಿಯಿಂದ ಡೋರ್ ಟು ಡೋರ್ ಸರ್ವೆ ಮಾಡಿ ಮಾಹಿತಿ ಕಲೆಹಾಕುತ್ತಿದೆ. ಗುಣಲಕ್ಷಣಗಳಿರುವರಿಗೆ ಟೆಸ್ಟಿಂಗ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಕೊರೋನಾ ತಹಬದಿಗೆ ಬರುವ ಹೊತ್ತಿಗೆ ವರುಣಾರ್ಭಟ ಹೆಚ್ಚಾಗಿ ನಗರದಲ್ಲಿ ಡೆಂಘೀ ಹಾಗೂ ಚಿಕುನ್ ಗುನ್ಯಾ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ಆದಷ್ಟು ಶುಚಿತ್ವ ಕಾಪಾಡಿಕೊಳ್ಳುವ ಅಗತ್ಯವಿದೆ.