ರಾಮ ಜನ್ಮಭೂಮಿ ಉತ್ತರಪ್ರದೇಶದಲ್ಲಿ ಮಾನವೀಯತೆಯ ಮರೆಯಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಒಂದು ಘಟತೆ ನಡೆದಿದ್ದು, ಈ ಮೇಲಿನ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ.
ಹೌದು, ಇಬ್ಬರು ದಲಿತ ಅಪ್ರಾಪ್ತ ಬಾಲಕಿಯರನ್ನು ಅವರ ಶಿಕ್ಷಕರೇ ನಗ್ನಗೊಳಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶ ರಾಜ್ಯದ ಹಾಪುರ್ ಜಿಲ್ಲೆಯ ಉದಯಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹಾಪುರದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕಿಯರು ಸುನೀತಾ ಮತ್ತು ವಂದನಾ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಬಳಿ ಬಂದು, ಬೇರೆ ಇಬ್ಬರು ವಿದ್ಯಾರ್ಥಿಗಳ ಸಮವಸ್ತ್ರ ದರಿಸಿಲ್ಲ, ಪೋಟೋ ತೆಗೆಯಲು ಸಮವಸ್ತ್ರ ಬೇಕಾಗಿದೆ ನಿಮ್ಮ ಬಟ್ಟೆ ಬಿಚ್ಚಿಕೊಡಿ ಎಂದು ಕೇಳಿದ್ದಾರೆ. ವಿದ್ಯಾರ್ಥಿನಿಯರು ಇದನ್ನು ನಿರಾಕರಿಸಿದ್ದಾರೆ. ಆದರೆ ಶಿಕ್ಷಕಿಯರು ಬಲವಂತವಾಗಿ ಅವರ ಬಟ್ಟೆಯನ್ನು ಬಿಚ್ಚಿಸಿಕೊಂಡ ಹೋಗಿದ್ದಾರೆ. ಈ ಹುಡಿಗಿಯರ ಹೇಳಿಕೆಯ ಪ್ರಕಾರ, ಸುಮಾರು ಒಂದು ಗಂಟೆಗಳ ಕಾಲ ಬೆತ್ತಲೆಯಾಗಿಯೇ ಇದ್ದಾರೆ ಮತ್ತು ತಮ್ಮ ಒಳ ಉಡುಪು ಕೂಡ ಇಲ್ಲದೆ ಇದ್ದರು ಎಂದು ವರದಿಯಾಗಿದೆ. ಇದಲ್ಲದೇ ಈ ವಿಷಯವನ್ನು ಯಾರಿಗಾದರೂ ಅಥವಾ ನಿಮ್ಮ ಮಬೆಗೆ ತಿಳಿಸಿದರೆ ಶಾಲೆಯಿಂದ ಹೊರಹಾಕುತ್ತೇವೆ ಎಂದು ಶಿಕ್ಷಕರು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಈ ಆರೋಪಗಳು ಕೇಳಿಬಂದ ನಂತರ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ.
ಜುಲೈ 11 ರಂದು ಶಿಕ್ಷಕರಾದ ಸುನೀತಾ ಮತ್ತು ವಂದನಾ ಇಬ್ಬರೂ 4ನೇ ತರಗತಿಯ ಸುಮಾರು ಎಂಟು ಮತ್ತು ಒಂಬತ್ತು ವರ್ಷ ವಯಸ್ಸಿನ ಈ ಇಬ್ಬರು ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಬಟ್ಟೆಗಳನ್ನು ಬೇರೆ ವಿದ್ಯಾರ್ಥಿಗಳಿಗೆ ಪೋಟೋ ತೆಗೆಯುವುದಕ್ಕಾಗಿ ಬಿಚ್ಚಿಸಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸರ್ವೇಶ್ ಮಿಶ್ರಾ ಹೇಳಿದ್ದಾರೆ.
ಬಾಲಕಿಯರ ಪೋಷಕರ ಪ್ರಕಾರ, ಸಾಮಾನ್ಯ ಬಟ್ಟೆಯಲ್ಲಿ ಛಾಯಾಚಿತ್ರಕ್ಕಾಗಿ ಬಂದ ಇತರ ಇಬ್ಬರು ಹುಡುಗಿಯರಿಗೆ ನೀಡಲು ಶಿಕ್ಷಕರು ತಮ್ಮ ಮಕ್ಕಳ ಸಮವಸ್ತ್ರವನ್ನು ಕೇಳದ್ದಾರೆ. ಹುಡುಗಿಯರು ಇದಕ್ಕೆ ನಿರಾಕರಿಸಿದಾಗ, ಅವರನ್ನು ಥಳಿಸಿ ಶಿಕ್ಷಕರು ಬಲವಂತವಾಗಿ ಅವರ ಸಮವಸ್ತ್ರವನ್ನು ಬಿಚ್ಚಿಸಿಕೊಂಡಿದ್ದಾರೆ. ಜಾತಿಯ ಕಾರಣದಿಂದ ಮಕ್ಕಳ ವಿರುದ್ಧ ತಾರತಮ್ಯ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ಬಾಲಕಿಯರ ಪೋಷಕರ ದೂರಿನ ಮೇರೆಗೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಉದ್ದೇಶಪೂರ್ವಕ ಅವಮಾನ), 166 (ಸಾರ್ವಜನಿಕ ಅವಮಾನ) ಅಡಿಯಲ್ಲಿ ಕಪುರ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸೇವಕ ಕಾನೂನನ್ನು ಉಲ್ಲಂಘಿಸುವುದು), ಮತ್ತು 505 (ಸಾರ್ವಜನಿಕ ಕಿಡಿಗೇಡಿತನ), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸರ್ವೇಶ್ ಮಿಶ್ರಾ ಹೇಳಿದರು.
ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು, ಈ ಬಗ್ಗೆ ಶಿಕ್ಷಣಾಧಿಕಾರಿಯಿಂದ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲ ಶಿಕ್ಷಾಣಾಧಿಕಾರಿ ಅರ್ಚನಾ ಗುಪ್ತಾ ತಿಳಿಸಿದ್ದಾರೆ.