ರಾಜ್ಯ ರಾಜಕೀಯದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ತೀವ್ರ ಗದ್ದಲ ಎಬ್ಬಿಸುತ್ತಿದ್ದು ಮೈಸೂರಿನಲ್ಲಿ ತುಸು ಹೆಚ್ಚು ಎಂದು ಹೇಳಬಹುದು. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗು ವಿವಿಧ ಕಾರ್ಯಕ್ರಮಗಳ ಶಿಲನ್ಯಾಸದ ವಿಚಾರವಾಗಿ ರಾಜ್ಯಕ್ಕೆ ಬೇಟಿ ನೀಡಿದ್ದರು.
ಇದೀಗ ಪ್ರಧಾನಿ ಬೇಟಿ ಕಾಂಗ್ರೆಸ್ ಹಾಗು ಮೈಸೂರು ಸಂಸದ ಪ್ರತಾಪ್ ಸಿಂಹ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು ಸಂಸದರ ಪಂಥಾಹ್ವಾನಕ್ಕೆ ಕಾಂಗ್ರೆಸ್ ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಡೇಟ್ ಫಿಕ್ಸ್ ಮಾಡಿ ಸವಾಲು ಸ್ವೀಕರಿಸಲು ಸಿದ್ದ ಎಂದು ಹೇಳಿದೆ.
ಜೂನ್ 29 ಬುಧವಾರ ಮಧ್ಯಾಹ್ನ 12 ಘಂಟೆಗೆ ಸಂಸದರ ಕಚೇರಿಯಲ್ಲಿ ಸಭೆ ನಿಗದಿಪಡಿಸಲಾಗಿದ್ದು ನಾನು ರಾಜ್ಯ ಕಾಂಗ್ರೆಸ್ ವಕ್ತಾರನಾಗಿ ಆಗಮಿಸುತ್ತಿದ್ದೇನೆ. ಎರಡನೇ ಭಾರೀ ಈ ರೀತಿ ಬಹಿರಂಗ ಸವಾಲು ಸ್ವೀಕರಿಸಿದ್ದು ಕಳೆದ ಭಾರಿ ಪಲಾಯನ ಮಾಡಿದ ಹಾಗೆ ಈ ಭಾರೀ ಒಡಿಹೋಗಬೇಡಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಪಕ್ಷದ ಚಿಹ್ನೆ ಇಲ್ಲದೆ ಸ್ಪರ್ಧಿಸೋಣ ಬನ್ನಿ ಯಾರು ಗೆಲ್ಲುತ್ತಾರೆ ನೋಡೋಣ ಮೋದಿ ಹೆಸರಲ್ಲಿದೆ ನೀವು ಗ್ರಾಮ ಪಂಚಾಯಿತಿ ಸದಸ್ಯನಾಗಲು ಸಾಧ್ಯವಿಲ್ಲ ನಾನು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ಬರುತ್ತೇನೆ. ಮುಂದಿನ ಚುನಾವಣೆ ವೇಳೆ ನೀವು ಎಲಿರುತ್ತೀರೋ ಎಂದು ನಿಮ್ಮಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಮೋದಿ ಎರಡು ದಿನದ ರಾಜ್ಯ ಪ್ರವಾಸದ ಖರ್ಚು 42 ಕೋಟಿ ರೂಪಾಯಿಗಳು ಇವರು ಜನರ ತೆರಿಗೆ ದುಡ್ಡನನ್ನು ಖರ್ಚು ಮಾಡಿ ಹೋಗಿದ್ದಾರೆ. ಮೈಸೂರಿನಲ್ಲಿ 19 ಕೋಟಿ ರೂಪಾಯಿ, ಬೆಂಗಳೂರಿನಲ್ಲಿ 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಇದರಿಂದ ರಾಜ್ಯಕ್ಕೆ ಏನು ಲಾಭವಾಯಿತ್ತು 20 ನಿಮಿಷಗಳ ಕಾಲ ಯೋಗ ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡು ಹೋದರು. ರಾಜ್ಯದಲ್ಲಿ ಸದ್ಯ ಯಾವುದೇ ಚುನಾವಣೆ ನಡೆಯದ ಕಾರಣ ಯಾವುದೇ ಅನುದಾನವನ್ನು ನೀಡಿಲ್ಲ. ಮೋದಿ ಸುಮ್ಮನೆ ಪಿಕ್ನಿಕ್ ಮುಗಿಸಿಕೊಂಡು ಹೋಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.