ಕಳೆದ ದಿನಗಳಿಂದ ಸಿಎಂ ರಾಜೀನಾಮೆಯ ವಿಷಯ ಮುನ್ನೆಲೆಗೆ ಬಂದಿದ್ದು ಸಾಲು ಸಾಲು ದೂರನ್ನು ವರಿಷ್ಠರಿಗೆ ನೀಡುತ್ತಾ ಮಾಧ್ಯಮಗಳಿಗೆ ಸಿಎಂ ಯಡಿಯೂಪ್ಪನ ವಿರುದ್ದ ಹೇಳಿ ನೀಡುತ್ತಲೇ ಬಂದಿರುವ ಸಚಿವ ಸಿಪಿ ಯೋಗೇಶ್ವರ್ ಇಂದು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದು, ರಾಜಿನಾಮೆ ಕುರಿತು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮುಖ್ಯಮಂತ್ರಿಗಳೇ ಮಾತನಾಡಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ನಂದಿಬೆಟ್ಟದಲ್ಲಿ ಸಚಿವರು ಸುದ್ದಿಗಾರರಿಗೆ ಮಾಡನಾಡಿದ ಸಚಿವ ಸಿಪಿ ಯೋಗೇಶ್ವರ್, ರಾಜ್ಯದಲ್ಲಿ ಮುಖ್ಯ ಮಂತ್ರಿಗಳ ಬದಲಾವಣೆಗೆ ಸಂಭಂದಿಸಿದಂತೆ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ . ಯಡಿಯೂರಪ್ಪ ಅವರು ಹಿರಿಯರಿದ್ದಾ .ಈ ನಿಟ್ಟಿನಲ್ಲಿ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಮುಖ್ಯ ಮಂತ್ರಿಗಳೇ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟಪಡಿಸುತ್ತಿದ್ದಾರೆ ಎಂದಿದ್ದಾರೆ.
ನನ್ನ ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಾಗೂ ನನಗೆ ಇತರ ಪಕ್ಷಗಳು ನೀಡಿರುವ ತೊಂದರೆ ಬಗ್ಗೆ ಮಾತನಾಡಿದ್ದೇನೆ. ನಮ್ಮ ವರಿಷ್ಠರು ಹಾಗೂ ಹಿರಿಯರು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ನಾಯಕತ್ವ ಬದಲಾವಣೆ ಆದಮೇಲೆ ಕಾಂಗ್ರೆಸ್ ನಿಂದ ಬಂದಿರುವ ಹತ್ತಕ್ಕೂ ಹೆಚ್ಚು ಶಾಸಕರಿಗೆ ಹೊಸ ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನ ಕೊಡುವುದಿಲ್ಲ ಎಂಬ ಮಾಹಿತಿಯಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ ಊಹಾಪೋಹಗಳಿಗೆ ಉತ್ತರ ನೀಡುವ ಹಕ್ಕು ನನಗಿಲ್ಲ .
ಯಾರಿಗೂ ಮಂತ್ರಿ ಸ್ಥಾನ ಶಾಶ್ವತವಲ್ಲ ಎಂದು ಸಚಿವ ಯೋಗೇಶ್ವರ್:
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನನ್ನ ರಾಜಕೀಯ ವಿರೋಧಿ ಅವರ ನಿಲುವಿನಲ್ಲಿ ಸದಾ ದ್ವಂದ್ವ ಇರುತ್ತದೆ. ಬೆಳಿಗ್ಗೆ ಮುಖ್ಯಮಂತ್ರಿಗಳ ಮನೆಗೆ ಹೋಗಿ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ನಂತರ ಮುಖ್ಯಮಂತ್ರಿಗಳನ್ನೇ ದೂರುತ್ತಾರೆ ಹೀಗಾಗಿ ಕುಮಾರಸ್ವಾಮಿಯವರನ್ನು ದೂರ ಇಡಿ ಅವರನ್ನು ನಂಬಬೇಡಿ ಅವರನ್ನು ಹತ್ತಿರ ಇಟ್ಟುಕೊಳ್ಳಬೇಡಿ ಎಂದು ನಾನು ಹೇಳಿದ್ದೇನೆ ಹಾಗೂ ಪಕ್ಷವೂ ಹೇಳಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲ ಕೆಲಸ ಮಾಡಿಸಿಕೊಂಡು ಮತ್ತೆ ಅವರನ್ನೇ ಟೀಕಿಸುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಇನ್ನು ಮುಂದೆ ಒಂದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿರುತ್ತದೆ ಎನ್ನು ಮೂಲಕ ಕುಮಾರಸ್ವಾಮಿಕ ಟಾಂಗ್ ನೀಡಿದ್ದಾರೆ ಮತ್ತು ಸಿಎಂ ಬದಲಾವಣೆ ಆಗೊದು ಪಕ್ಕ ಎಂಬಂತ ಸುಳಿವು ನೀಡಿದ್ದಾರೆ.
ಲೋಕಸಭಾ ಸದಸ್ಯ ಡಿಕೆ ಸುರೇಶ್ ನಿಮ್ಮನ್ನ ಸಿಡಿ ಯೋಗೆಶ್ವರ ಎಂದು ಕರೆದಿದ್ದಾರೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಸುರೇಶ್ ಅವರಿಗೆ ನಾನು ಸಹ ಕೆಡಿ ಸುರೇಶ್ ಎಂದು ಕರೆಯಬಹುದು .
ಈ ತರಹದ ವಿರೋಧ ನಾನು ಎದುರಿಸುತ್ತೇನೆ . ನನಗೆ ಕಪ್ಪುಚುಕ್ಕೆ ತರಲು ಸುರೇಶ್ ಅವರು ಬಯಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಅಧಿಕಾರವನ್ನು ಹಿಡಿಯಲು ಹೊಸ ಬಟ್ಟೆಗಳನ್ನು ಒಲಿಸಿಕೊಂಡಿದ್ದರು ಇದೀಗ ರಾಜ್ಯದಲ್ಲಿ ರಾಜಕೀಯ Reallinment ಆಗುತ್ತಿದೆ. ಈಗಾಗಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಡಿ.ಕೆ. ಸುರೇಶ್ ಹೇಳಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ .
ಮಠಾಧೀಶರುಗಳು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರಲ್ಲ ಎಂಬ ಪ್ರಶ್ನೆಗೆ ಮಠಾಧೀಶರು ತುಂಬಾ ದೊಡ್ಡವರು ಅದರ ಬಗ್ಗೆ ನನಗೆ ಗೊತ್ತಿಲ್ಲ ನಾನು ಈ ನಿಟ್ಟಿನಲ್ಲಿ ಮಾತನಾಡುವುದಿಲ್ಲ ಎಂದು ಯೋಗೀಶ್ವರ್ ತಿಳಿಸಿದ್ದಾರೆ.