ಬೆಂಗಳೂರು ನಗರ ವಿಧಾನ ಪರಿಷತ್ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ / ಕೆಜಿಎಫ್ ಬಾಬು ಅವರು ತಮ್ಮ ಸೋಲು ಖಚಿತವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಆಟೋ ಹತ್ತಿ ಹೊರಟರು.
ಅಮಿತಾ ಬಚ್ಚನ್ ಕಾರು ಖರೀದಿ ನಂತರ ರಾಜ್ಯಾದ್ಯಂತ ಕೆಜಿಎಫ್ ಬಾಬು ಎಂದೇ ಪ್ರಸಿದ್ಧರಾಗಿರುವ ಯೂಸೂಫ್ ಷರೀಫ್ ಬೆಂಗಳೂರು ನಗರ ಜಿಲ್ಲೆ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣೆ ವೇಳೆ 1,743 ಕೊಟಿ ರು. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದ ಕೆಜಿಎಫ್ ಬಾಬು ಅವರ ಸಿರಿವಂತಿಗೆ ಕೈ ಹಿಡಿಯಲಿಲ್ಲ.
ಯೂಸೂಫ್ ಷರಿಫ್ ಅವರು ಮತ ಎಣಿಕೆ ನಡೆಯುತ್ತಿದ್ದ ಬೆಂಗಳೂರಿನ ಸರ್ಕಾರಿ ಮಹಾರಾಣಿ ವಿಜ್ಞಾನ ಕಾಲೇಜಿಗೆ ದುಬಾರಿ ಬೆಲೆಯ ಆಡಿ ಕಾರಿನಲ್ಲಿ ಆಗಮಿಸಿದ್ದರು. ಕೆಲ ಹೊತ್ತಿನಲ್ಲೇ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಅವರಿಗಿಂತ ಹೆಚ್ಚು ಮತಗಳ ಮುನ್ನಡೆ ಇದೆ ಎಂದು ತಿಳಿದ ಬಾಬು ಸೋಲು ಖಚಿತವಾದ ಕೂಡಲೇ ಎಣಿಕೆ ಕೇಂದ್ರದಿಂದ ಹೊರ ಬಂದ ಆಟೋ ಹತ್ತಿ ಹೊರಟು ಹೋದರು.
ಗೆಲ್ಲುವಿನ ನಿರೀಕ್ಷೆಯಲ್ಲಿದ್ದ ಕೆಜಿಎಫ್ ಬಾಬು ಪರಾಭವಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಅವರ 1227ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೋಟಿ ಓಡೆಯ ಕೆಜಿಎಫ್ ಬಾಬು 830 ಮತಗಳನ್ನು ಪಡೆದುಕೊಂಡು, 397 ಮತಗಳ ಅಂತರದಲ್ಲಿ ಸೋತಿದ್ದಾರೆ.