
ಬಸವಣ್ಣನವರ ಅಂತ್ಯ ಕಾಲದ ಬಗ್ಗೆ ಮಾತನಾಡಿದ್ದ ಮಾತು ವಿವಾದ ಸ್ವರೂಪ ಪಡೆದು ಟೀಕೆ ವ್ಯಕ್ತವಾಗಿದ್ದಕ್ಕೆ ಬಾಗಲಕೋಟೆಯ ಬನಹಟ್ಟಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ. ಬಸವಣ್ಣನವರ ಬಗ್ಗೆ ಇವರಿಗೆ ಏನು ಗೊತ್ತಿದೆ. ವಿಭೂತಿ ಹಚ್ಕೊಂಡು ಓಡಾಡುವವರು ಬಸವಣ್ಣನಿಗೆ ಏನಾದರೂ ಮಾಡಿದಾರಾ..? ವೀರಶೈವ ಮಹಾಸಭಾದಲ್ಲಿ ಏನು ಮಾಡಿದ್ದಾರೆ. ಮೊದಲು ಶಿವಾನುಭವ ಮಂಟಪದ ಬಗ್ಗೆ ಹೋರಾಟ ಮಾಡಿ ಅಂತ ಹೇಳಿದ್ದಾರೆ.
ಒಬ್ಬರೂ ಬಾಯಿ ತೆರೆಯೋದಿಲ್ಲ. ಬಸವಣ್ಣನವರ ಶಿವಾನುಭವ ಮಂಟಪದಲ್ಲೇ ದನ ಕಡಿಯುತ್ತಿದ್ದಾರೆ.. ಈಶ್ವರ ಖಂಡ್ರೆ ಏನು ಮಾಡ್ತಿದಾನೆ.? ಅಖಿಲಭಾರತ ವೀರಶೈವ ಮಹಾಸಭಾದಾಗ..? ಎಲ್ಲ ಡೊಂಗಿ ನಾಟಕ ಮಾಡ್ತಾ ಬಂದಿದ್ದಾರೆ.. ಬಸವಣ್ಣನವರ ಇತಿಹಾಸ ಏನಿದೆ..? ಗಾಂಧಿನ ಯಾರು ಹೊಡೆದರು..? ಬಸವಣ್ಣನವರರನ್ನು ಯಾರು ಹೊಡೆದರು..? ಅಂಬೇಡ್ಕರ್ಗೆ ಎಷ್ಟು ಅಪಮಾನ ಮಾಡಿದರು..? ಎಲ್ಲ ಚರ್ಚೆ ಇದೆ ಚರ್ಚೆಗೆ ಬಾ ಅಂತ ಹೇಳಿ ಎಂದು ಸವಾಲು ಎಸೆದಿದ್ದಾರೆ.

ನಾ ಏನು ಎಲ್ಲರು ಅಂಜುವ ಹಾಗೆ ಅಂಜುವ ಮಗನಲ್ಲ.. ಕ್ಷಮೆ, ವಿಷಾಧ ಏನು ಇಲ್ಲ ಸತ್ಯ ಏನಿದೆ ಅನ್ನೋದು ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರಿಗೆ ಗೊತ್ತಿದೆ.. ಬಸವಣ್ಣನವರಿಗೆ ಕೊನೆಗೆ ಏನಾಗಿತ್ತು..? ಅಂತ ನಮಗೆ ಗೊತ್ತಿದೆ. ಯಾಕೆಂದರೆ ಸಾವಿರಾರು ವರ್ಷದಿಂದ ನಮ್ಮ ಹಿರಿಯರು ಹೇಳ್ತಾ ಬಂದಿದಾರೆ.. ಇವಕ್ಕೇನು ಗೊತ್ತಿದೆ ಸುಮ್ಮನೆ ಒಂದು ಬುಕ್ ಬರೆಯೋದು. ಈಶ್ವರ ಖಂಡ್ರೆ ಮನೆ ಮುಂದೆ ಶಾಮನೂರ ಮನೆ ಮುಂದ ಓಡಾಡೋದು, ಯಡಿಯೂರಪ್ಪ ಮನೆ ಮುಂದೆ ಓಡಾಡುವ ಗಿರಾಕಿ ಇವೆ ಅಂತ ಬುದ್ಧಿಜೀವಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.