ನಟ ಹಾಗೂ ಸ್ವಾಮೀಜಿ ರಿಷಿಕುಮಾರ ಸ್ವಾಮೀಜಿ ಇತ್ತೀಚಿಗೆ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ರೀತಿಯಲ್ಲಿ ಶ್ರೀರಂಗಪಟ್ಟಣದಲ್ಲಿರುವ ಮಸೀದಿ ಧ್ವಂಸ ಮಾಡಬೇಕು ಎಂದು ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಈ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದ್ದವು. ಈ ಕುರಿತು ಸಮಾಜದ ಕೋಮು ಸೌಹಾರ್ದ ಕದಡುವ ಪ್ರಯತ್ನ ಎಂದು ಚಿಕ್ಕಮಗಳೂರಿನಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇಂದು ಬೆಳಗ್ಗೆ ಸ್ವಾಮೀಜಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ವಿಡಿಯೋದಲ್ಲಿ ಮಸೀದಿ ಮುಂದೆ ನಿಂತು ಈ ಹಿಂದೆ ಇಲ್ಲಿ ಹಿಂದೂಗಳ ದೇವಸ್ಥಾನ ಇತ್ತು ಮತ್ತು ಹಿಂದೂಗಳು ಜಾಗರೂಕರಾಗಿ ಈ ಕೂಡಲೇ ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದ್ದರು. ಪೊಲೀಸರು ರಿಷಿಕುಮಾರನನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆತರುತ್ತಿದ್ದಾರೆ.