ರಾಜಕಾರಣಿಗಳು, ಮಂತ್ರಿಗಳು, ಶಾಸಕರನ್ನ ಕರೆದುಕೊಂಡು ಹೋಗಬೇಡಿ. ಅಧಿಕಾರಿಗಳಷ್ಟೆ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಮಗಳೂರಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ
ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ಗದಗದಲ್ಲಿ ಹೆಚ್ಚಿನ ಬೆಳೆ ಹಾನಿಯಾಗಿದ್ದು. ಬೆಳಗಾವಿಯಲ್ಲಿ 76 ಸಾವಿರ ರೈತರ ಬೆಳೆ ಹಾನಿ, ಬಾಗಲಕೋಟೆಯಲ್ಲಿ 20 ಸಾವಿರ ರೈತರ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಇಂದು ಹಣ ಬಿಡುಗಡೆ ಮಾಡಬೇಕಿತ್ತು, ಆ ಫೈಲ್ ನನ್ನ ಬಳಿ ಬಂದಿದೆ ನೀತಿ ಸಂಹಿತೆ ಇರೋದ್ರಿಂದ ಅನುಮತಿ ಕೇಳಿದ್ದೇನೆ, ಇಂದು-ನಾಳೆಯಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕೊಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಬೇಕು, ಅನುಮತಿ ಸಿಕ್ಕರೆ ಮಾಡುತ್ತೇನೆ ಎಲ್ಲೆಲ್ಲಿ ಫ್ಲಡ್, ಬೆಳೆಹಾನಿಯಾಗಿದೆ ಅವರಿಗೆಲ್ಲಾ 100 ಪರ್ಸೆಂಟ್ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರೋ ನಾಟಕದ ಕಂಪನಿ ಈ ಕಂಪನಿಗೆ ಅವರೇ ಡೈರಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಜನ ಬಂದು ನೋಡಲಿ ಎಂದು ಹೇಳುತ್ತಿದ್ದಾರೆ, ಆದ್ರೆ, ಜನ ಯಾರು ಬರ್ತಿಲ್ಲ ಎಂದು ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಪ್ರಾರಂಭ ಮಾಡಿದ್ದು ಅವರೇ, ಅಂತ್ಯ ಹಾಡಬೇಕಿರೋದು ಅವರೇ ಹೆಸರನ್ನೂ ಅವರೇ ಹೇಳಬೇಕು ನಿಮಗೆ ಹೆಸರು ನೀಡಲು ಆಗಲ್ಲ ಅಂದ್ರೆ ನೀವು ಯಾವ ಸೀಮೆ ವಿರೋಧ ಪಕ್ಷದ ನಾಯಕರು ಎಂದು ಟೀಕಿಸಿದ್ದಾರೆ.
ಇದೆಲ್ಲಾ ಕಾಂಗ್ರೆಸ್ಸಿಗರ ನಾಟಕ, ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತ ನಾಟಕ ಮಾಡ್ತಿದ್ದಾರೆ ಅವರು ಯಾವುದೇ ಹಳ್ಳಿಗೆ ಹೋಗಿ ಹಾವು ಬಿಡಲಿ, ಹಾವು ಹಿಡಿಯಲು ನಮ್ಮ ಬಳಿ ಜನ ಇದ್ದಾರೆ ಎಂದು ಹೇಳಿದ್ದಾರೆ.
ಹಾವು ಬಿಟ್ಟ ಮೇಲೆ ಕರಿದೋ, ಬಿಳಿದೋ, ನಾಗರಹಾವೋ, ಹೆಬ್ಬಾವೋ ಹೇಳ್ತೀನಿ ಹಾವು ಬಿಡದೆ ನಾವು ಯಾವ ಹಾವೆಂದು ಹೇಗೆ ಪರೀಕ್ಷೆ ಮಾಡೋದು ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಇದು ಕಾಂಗ್ರೆಸ್ಸಿಗರ ಸುಳ್ಳಿನ ಕಂತೆ, ಮುಂದಿನ ಚುನಾವಣೆಗೆ ತೊಂದರೆಯಾಗುತ್ತೆಂದು ಕಾಂಗ್ರೆಸ್ಸಿಗರು ಕಳ್ಳ ನಾಟಕ ಆಡುತ್ತಿದ್ದಾರೆ. ಅವರ ಬಳಿ ಹಾವು ಇದ್ದಿದ್ರೆ ಯಾವಾಗ್ಲೋ ಬಿಡೋರು, ಖಾಲಿ ಬುಟ್ಟಿ ಇಟ್ಕೊಂಡು ಆಟ ಆಡಿಸ್ತಿದ್ದಾರೆ ಎಂದು ಚಿಕ್ಕಮಗಳೂರಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ಪಕ್ಷವನ್ನ ಟೀಕಿಸಿದ್ದಾರೆ.