ಕಳೆದ ವರ್ಷ ಹರಿಯಾಣದಲ್ಲಿ ನಡೆದ ʻಧರ್ಮ ಸಂಸದ್ʼ ಸಭೆಯಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯೆಗೆ ಕರೆ ನೀಡಿದ್ದರ ವಿರುದ್ದ ದೇಶಾದ್ಯಂತ ತೀವ್ರ ಆಕ್ಷೇಪಗಳು ಕೇಳಿ ಬಂದಿದ್ದವು. ಈ ಮಧ್ಯೆ ಸೋಮವಾರ ರಾಜಸ್ಥಾನ ಹಾಗೂ ಉತ್ತರಾಖಂಡದ ಮಾಜಿ ರಾಜ್ಯಪಾಲೆ, ಕೇಂದ್ರ ಸಚಿವೆ ಮತ್ತು ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಈ ಬಗ್ಗೆ ಪ್ರಧಾನಿ ಮೋದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ನಿವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಗೌರವಾನ್ವಿತ ನಾಯಕ. ರೋಮ್ನಲ್ಲಿರುವ ಹೋಲಿನೆಸ್ ಪೋಪ್ಗೆ ಭಾರತ ಪ್ರಜಾಸತಾತ್ಮಕ ರಾಜ್ಯ ಎಂದು ಹೇಳಿಕೊಳ್ಳುತ್ತೀರಿ. ನಿಮ್ಮ ಭಾಷಣಗಳಿಗೆ ಪ್ರಪಂಚದಾದ್ಯಂತ ಮೆಚ್ಚುಗೆಯನ್ನು ಸಹ ಪಡೆಯುತ್ತೀರಿ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಖ್ಯಾತಿ ಪಡೆದಿದ್ದೀರಿ. ಆದರೆ, ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಜಾತ್ಯಾತೀತತೆ ಬಗ್ಗೆ ನೀವು ಜಾಗತಿಕ ಮಟ್ಟದಲ್ಲಿ ಹೇಳಿರುವ ಹೇಳಿಕೆಗೂ ಇಲ್ಲೊಯ ಚಿತ್ರಣಕ್ಕೂ ಸಂಪೂರ್ಣ ವಿರುದ್ದವಾಗಿದೆ ಎಂದು ತಾವು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿಗೆ ಹರಿದ್ವಾರದಲ್ಲಿ ನಡೆದ ʻಧರ್ಮ ಸಂಸದ್ʼ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಪರಿಕಲ್ಪನೆ ಬಗ್ಗೆ ಮಾತನಾಡಿದ್ದರು ಮತ್ತು ಹಿಂದೂಯೇತರರ ಸಾಮೂಹಿಕ ನರಮೇಧಕ್ಕೆ ಕರೆ ನೀಡಿದ್ದರು. ಇದನ್ನು ಕೇಳಿದ ಕ್ಷಣದಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ಹಾಗೂ ಇತರೆ ಸಮುದಾಯಗಳ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದ್ದರು ಸಹ ನಿವು ಮಾತನಾಡದೆ ಮೌನ ವಹಿಸಿರುವುದನ್ನು ನೋಡಿದರೆ ಇದಕ್ಕೆ ನಿಮ್ಮ ಪ್ರೋತ್ಸಾಹ ಇದೆ ಎಂದು ನಾವು ಅರಿತುಕೊಳ್ಳಬೇಕೆ ಎಂದು ತಾವು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚಿಗೆ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತಂದಿದ್ದ ಧಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಪತ್ರದಲ್ಲಿ ಮಾತನಾಡಿರುವ ಅವರು, ಇದು ಸಂವಿಧಾನ ವಿರೋಧಿಯಾಗಿದ್ದು ಇದು ಅಲ್ಪಸಂಖ್ಯಾತರನ್ನು ಅವಮಾನಿಸಲು ಜಾರಿಗೆ ತಂದಿರುವ ಕಾಯ್ದೆ ಎಂದು ಹೇಳಿದ್ದಾರೆ.
ಪತ್ರದ ಕೊನೆಯಲ್ಲಿ ʻಏಸು ಕ್ರಿಸ್ತನ್ನು ನಮ್ಮ ಪ್ರಧಾನ ಮಂತ್ರಿಗಳನ್ನು ಆರ್ಶೀವದಿಸಲಿ ಮತ್ತು ನಿಮ್ಮಗೆ ಮಾರ್ಗದರ್ಶನವನ್ನು ನೀಡಲಿ. ಕ್ರಿಸ್ಮಸ್ನ ಸಂತೋಷ ಹಾಗೂ ಪ್ರೀತಿ ಇಡೀ ವರ್ಷ ನಮ್ಮ ಜೊತೆಯಲ್ಲಿರಲಿ ಎಂದು ಆಶಿಸುತ್ತೇನೆʼ ಎಂದು ಬರೆದಿದ್ದಾರೆ.