ವಯನಾಡ್ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರ ಕಚೇರಿಯನ್ನು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಕಾರ್ಯಕರ್ತರು ಧ್ವಂಸಗೊಳಿಸಿದ್ದು, ಸಿಪಿಐ-ಎಂನ ಉನ್ನತ ನಾಯಕರ ಕೈವಾಡವಿದೆ ಎಂದು ಕಾಂಗ್ರೆಸ್ ಕೇರಳ ಘಟಕ ಶನಿವಾರ ಆರೋಪಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತಾನಡಿ, ಇದು ಸಿಪಿಐ-ಎಂ ಉನ್ನತ ನಾಯಕತ್ವದ ಸಂಪೂರ್ಣ ತಿಳುವಳಿಕೆಯೊಂದಿಗೆ ನಡೆದಿದೆ, ಇಲ್ಲದಿದ್ದರೆ, ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ಉನ್ನತ ಅಧಿಕಾರಿ ಕೇವಲ ಪ್ರೇಕ್ಷಕರಾಗಿ ಉಳಿಯುತ್ತಾರೆಯೇ? ಎಂದು ಆರೋಪಿಸಿದ್ದಾರೆ.
“ಆರ್ಎಸ್ಎಸ್ನಂತೆ ಸಿಪಿಐ-ಎಂ ಕೂಡ ಗಾಂಧಿಯನ್ನು ಇಷ್ಟಪಡುವುದಿಲ್ಲ . ಅದಕ್ಕಾಗಿಯೇ ಎಸ್ಎಫ್ಐ ಕಾರ್ಯಕರ್ತರು ಮಹಾತ್ಮ ಗಾಂಧಿಯವರ ಚಿತ್ರವನ್ನು ಧ್ವಂಸಗೊಳಿಸಿದ್ದಾರೆ” ಎಂದು ವೇಣುಗೋಪಾಲ್ ಹೇಳಿದರು.
ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ತಮ್ಮ ಮತ್ತು ಅವರ ಕುಟುಂಬದ ವಿರುದ್ ಚಿನ್ನದ ಕಳ್ಳಸಾಗಣೆ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ರೂಪಿಸಿರುವ “ಗೇಮ್ ಪ್ಲಾನ್” ಎಂದು ಕಾಂಗ್ರೆಸ್ ಹಿರಿಯ ಲೋಕಸಭಾ ಸಂಸದ ಕೆ. ಮುರಳೀಧರನ್ ಹೇಳಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಪಕ್ಷದ ಇತರ ಪ್ರಮುಖ ನಾಯಕರು ಶುಕ್ರವಾರ ತಡರಾತ್ರಿ ಎಸ್ಎಫ್ಐ ದಾಳಿಯನ್ನು ಖಂಡಿಸಿದರೆ, ವಯನಾಡ್ನ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಘಟನೆಯ ಆರೋಪಿತ 19 ಎಸ್ಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.