ಥಾಮಸ್ ಕಪ್ – 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನ ಗೆದ್ದ ಭಾರತ ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇಡೀ ದೇಶವೇ ಈ ಗೆಲುವಿನ ಅಲೆಯಲ್ಲಿ ಸಂಭ್ರಮಿಸುತ್ತಿದೆ. ನಿಮ್ಮ ಅಪ್ರತಿಮ ಆಟ ಹಾಗೂ ಛಲ ಶ್ಲಾಘನೀಯ. ದೇಶದ ಯುವಜನತೆ ಹಾಗೂ ಕ್ರೀಡಾ ಪಟುಗಳಿಗೆ ಸ್ಪೂರ್ತಿ ತುಂಬುವಲ್ಲಿ ಈ ಗೆಲುವು ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಗಳು ಟ್ವೀಟ್ ಮಾಡಿದ್ದಾರೆ.