ಸದ್ಯ ಕರ್ನಾಟಕದಲ್ಲಿ ಪನ್ಡ್ರೈವ್ ಪ್ರಕರಣ (pendrive case) ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸ್ತಿದ್ರೆ, ಇದೀಗ ಇದೇ ವಿಚಾರ ಸ್ಯಾಂಡಲ್ವುಡ್ (Sandalwood) ನಲ್ಲೂ ಸದ್ದು ಮಾಡುವಂತೆ ಕಾಣಿದೆ. ಹೊಸ ತಂಡವೊಂದು ಸಿಂಹಗುಹೆ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿ ಟೀಸರ್ (Teaser) ರಿಲೀಸ್ ಮಾಡಿದೆ. ಈ ಟೀಸರ್ ನೋಡಿದ ಜನರಲ್ಲಿ ನೂರಾರು ಪ್ರಶ್ನೆಗಳು ಉದ್ಭವವಾಗಿದೆ.

ಇದು ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಪೆನ್ ಡ್ರೈವ್ ಕೇಸ್ ಸಂಬಂಧಿತ ಕಥೆಯನ್ನೇ ಇಡ್ಕೊಂಡು ಸಿನಿಮಾ ಮಾಡಲಾಗಿದ್ಯಾ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಪ್ರಜ್ವಲ್ ಕೇಸ್ಗೆ ಈ ಸಿನಿಮಾ ಲಿಂಕ್ ಮಾಡ್ತಿರೋದಕ್ಕೆ ಕಾರಣವೂ ಇದೆ. ಈ ಸಿನಿಮಾದ ಚಿತ್ರೀಕರಣ ನಡೆದಿರೋದು ಹಾಸನ (Hassan), ಹೊಳೆನರಸೀಪುರ, ಅರಕಲಗೂಡು ಭಾಗದಲ್ಲಿ. ನಿರ್ಮಾಪಕ ಕೃಷ್ಣ ಕೂಡ ಹಾಸನ ಮೂಲದವರು, ವಿಶೇಷ ಅಂದ್ರೆ ಈ ಕೃಷ್ಣ (Krishna) ಪ್ರಜ್ವಲ್ ರೇವಣ್ಣ ಸ್ನೇಹಿತ ಕೂಡ ಹೌದು.

ಪೆನ್ ಡ್ರೈವ್ ಕಥೆಯಂತೆ ಟೀಸರ್ ಕಾಣಿದೆ ಎಂಬ ಹೋಲಿಕೆ ಶುರುವಾಗಿದೆ. ಈ ಚರ್ಚೆ ಬೆನ್ನಲ್ಲೇ ಸಿಂಹಗುಹೆ ತಂಡ ಸ್ಪಷ್ಟನೆ ಕೂಡ ನೀಡಿದೆ. ಸಿನಿಮಾ ಕಥೆ ಹಾಗೂ ಪೆನ್ ಡ್ರೈವ್ ಕೇಸ್ಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದ್ದೇ ಸಸ್ಪೆನ್ಸ್ ಸ್ಟೋರಿ (Suspense story) ಅಂತಾ ನಿರ್ಮಾಪಕರು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಸಿನಿಮಾಗೂ, ಪೆನ್ಡ್ರೈವ್ ಪ್ರಕರಣಕ್ಕೂ ಲಿಂಕ್ ಇಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ. ಆದರೆ, ತೋಟದ ಮನೆ ರಹಸ್ಯ ಅಶ್ಲೀಲ ವಿಡಿಯೋ ವಿಚಾರಗಳು ಚಿತ್ರದಲ್ಲಿರೋದು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇದಕ್ಕೆಲ್ಲಾ ಸಿನಿಮಾ ತೆರೆಕಂಡ ಬಳಿಕವೇ ಉತ್ತರ ಸಿಗಲಿದೆ.






