ಶನಿವಾರ ಸಂಜೆ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುವ ಬೈರಾಗಿ ಚಿತ್ರ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮ ನಿಮಿತ್ತ ಚಾಮರಾಜನಗರಕ್ಕೆ ಆಗಮಿಸಿದ ಚಿತ್ರ ತಂಡಕ್ಕೆ ಅದೂರಿ ಸ್ವಾಗತ ದೊರೆತಿದೆ.
ಚಾಮರಾಜನಗರಕ್ಕು ಆಗಮಿಸುವ ಮುನ್ನ ಚಿತ್ರತಂಡ ರಾಮನಗರ, ಮಂಡ್ಯ ಹಾಗು ಮೈಸೂರಿನಲ್ಲಿ ಪ್ರೀ ರಿಲೀಸ್ ಯಾತ್ರಯನ್ನ ಹಮ್ಮಿಕೊಂಡಿತ್ತು. ಈ ವೇಳೆ ಚಿತ್ರತಂಡಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ.
ದೊಡ್ಡ ದೊಡ್ಡ ಸೇಬಿನ ಹಾರ ತುರಾಯಿಗಳನ್ನು ನೆಚ್ಚಿನ ನಟನ ಮೇಲೆ ಹಾಕಿ ಅಭಿಮಾನಿಗಳು ಅಭಿಮಾನವನ್ನ ಮೆರೆದಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡುವ ವೇಳೆ ಶಿವರಾಜಕುಮಾರ್ ಇದು ನಮ್ಮ ಊರು ಎಂದು ಹೇಳಿದಾಕ್ಷಣ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ವೇಳೆ ಶಿವಣ್ಣ ಸ್ಟೆಪಸ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದರು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು ಮತ್ತು ಲಘು ಲಾಠಿ ಪ್ರಹಾರವನ್ನ ನಡೆಸಿದ್ದರು.