ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಜಾತಿ ಜನಗಣತಿ (Caste census) ವಿಚಾರ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.ಈ ಮಧ್ಯೆ ಇಂದು ಜಾತಿಗಣತಿ ವರದಿ ಸಂಪುಟ ಸಭೆಯಲ್ಲಿ (Cabinet meeting) ಮಂಡನೆಯಾಗಲಿದೆ.

ಈ ಜಾತಿ ಜನಗಣತಿ ಜಾರಿಯ ಬಗ್ಗೆ ಸ್ವತಃ ಕಾಂಗ್ರೆಸ್ (Congress) ಪಕ್ಷದ ನಾಯಕರಲ್ಲೇ ಅಸಮಾಧಾನ ಇದೆ. ಹೀಗಾಗಿ ಯಾರೂ ಕೂಡ ಈ ಬಗ್ಗೆ ತುಟಿ ಬಿಚ್ಚಬಾರದು ಎಂದು ಖುದ್ದು ರಾಹುಲ್ ಗಾಂಧಿ (Rahul gandhi) ಪಕ್ಷದ ನಯಾಜರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ವರದಿ ಮಂಡನೆಗೆ ವಿರೋಧ ಪಕ್ಷಗಳಾದ ಬಿಜೆಪಿ(Bjp) ಮತ್ತು ಜೆಡಿಎಸ್ (Jds) ಕೂಡ ವಿರೋಧ ವ್ಯಕ್ತಪಡಿಸಿವೆ.ಈ ಗಣತಿ ವೈಜ್ಞಾನಿಕವಾಗಿ ಆಗಿಲ್ಲ ಎನ್ನುವುದು ಜೆಡಿಎಸ್ ನವರ ವಾದ. ಇನ್ನೊಮ್ಮೆ ವೈಜ್ಞಾನಿಕದ ಅದ್ಯಯನ ಮಾಡಿ ಬಿಡುಗಡೆ ಮಾಡಲಿ.ನಮ್ಮ ನಿವಾಸಗಳಿಗೆ ಬಂದು ಸಮೀಕ್ಷೆ ಮಾಡಿಲ್ಲ ಎಂದು ಜೆಡಿಎಸ್ ಪ್ರತಿಪಾದಿಸಿದೆ.

ಹೀಗಾಗಿ ವರದಿ ಬಿಡುಗಡೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದು, ಜೊತೆಗೆ ದಳಪತಿ ಒಕ್ಕಲಿಗ ಸಮುದಾಯ ಸಂಖ್ಯೆ ಕಡಿಮೆ ಆಗುವ ಆತಂಕವಿದೆ. ಹೀಗಾಗಿ ಜಾತಿಗಣತಿ ಮಂಡನೆಗೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.