ಕರ್ನಾಟಕದಲ್ಲಿ ಬಾದಾಮಿ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಆಳ್ವಿಕೆಯನ್ನು ನೆನಪಿಸುವ, ಸಂಭ್ರಮಿಸುವ ಟ್ವಿಟರ್ ಅಭಿಯಾನವು ‘ಒಳಗಿನವರು – ಹೊರಗಿನವರು’ ತಿರುವು ತೆಗೆದುಕೊಂಡಿದೆ.
ನವೆಂಬರ್ 28 ರಂದು ಇತಿಹಾಸದ ಬಗ್ಗೆ ಆಸಕಿಯುಳ್ಳ ಉತ್ಸಾಹಿಗಳ ಗುಂಪೊಂದು ಆರಂಭಿಸಿದ ಟ್ವಿಟರ್ ಅಭಿಯಾನವು ಕನ್ನಡ ಪ್ರಾದೇಶಿಕ ಹೆಮ್ಮೆ ಮತ್ತು ಒಕ್ಕೂಟ ತತ್ವದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಕ್ರಿ.ಪೂ. 610 ರಿಂದ 642ರವರೆಗೆ ವಾತಾಪಿಯನ್ನು (ಈಗಿನ ಬಾದಾಮಿ) ರಾಜಧಾನಿಯಾಗಿ ಇಟ್ಟುಕೊಂಡು ರಾಜ್ಯಭಾರ ಮಾಡಿದ ಇಮ್ಮಡಿ ಪುಲಕೇಶಿಯನ್ನು ಶ್ಲಾಘಿಸುವ ಸಾವಿರಾರು ಟ್ವೀಟ್ಗಳು ಬಂದಿವೆ. ಕನ್ನಡೇತರ ಪ್ರದೇಶಗಳಿಂದ “ಎರವಲು ಪಡೆದ” ಐಕಾನ್ಗಳನ್ನು ತಿರಸ್ಕರಿಸಲು ಈ ಟ್ವೀಟ್ಗಳು ಪ್ರಯತ್ನಿಸುತ್ತಿವೆ.
ಪ್ರಚಾರದಲ್ಲಿ ಭಾಗವಹಿಸುವವರು 17 ನೇ ಶತಮಾನದ ಮರಾಠ ರಾಜ ಶಿವಾಜಿಯಂತಹ “ಹೊರಗಿನವರಿಗೆ” ಬದಲಾಗಿ ಕನ್ನಡ ದೊರೆಗಳನ್ನು ಗೌರವಿಸುವ ಅಗತ್ಯವನ್ನು ಈ ಅಭಿಯಾನದ ಅನೇಕರು ಒತ್ತಾಯಿಸಿದ್ದಾರೆ, ಹಿಂದುತ್ವ ಸಂಘಟನೆಗಳು ಮತ್ತು ಬಿಜೆಪಿಯಿಂದ ಅತ್ಯಂತ ಪ್ರಮುಖ ಹಿಂದೂ ರಾಜ ಎಂದು ಶಿವಾಜಿಯನ್ನು ಕರೆಯಲಾಗುತ್ತದೆ.
ಪುಲಕೇಶಿಯ ಕುರಿತು ಸಂಶೋಧನೆಗೆ ಧನಸಹಾಯ, ಅವರ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ಒತ್ತಾಯಗಳು ರಾಜಕೀಯ ತಿರುವನ್ನೂ ಪಡೆದುಕೊಂಡಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಎರಡರಿಂದಲೂ ಕಾಮೆಂಟ್ಗಳು ಬಂದಿವೆ.
ʼಇದನ್ನು ಸ್ಪರ್ಧೆ ಮಾಡುವ ಉದ್ದೇಶ ಇರಲಿಲ್ಲ. ಅಭಿಯಾನವು ಇಮ್ಮಡಿ ಪುಲಕೇಶಿ, ಆತನ ‘ಕರ್ನಾಟಕ ಬಲ’ ಸೈನ್ಯ ಮತ್ತು ಉತ್ತರ ಭಾರತದ ವಿಶಾಲವಾದ ಪ್ರದೇಶಗಳನ್ನು ಹೊಂದಿದ್ದ 7ನೇ ಶತಮಾನದ ಆಡಳಿತಗಾರ ಹರ್ಷವರ್ಧನನ ಮೇಲಿನ ವಿಜಯವನ್ನು ಒಳಗೊಂಡಂತೆ ಆತನ ವಿಜಯಗಳನ್ನು ಶ್ಲಾಘಿಸುತ್ತದೆ.
ಎಲ್ಲೂ ಇಮ್ಮಡಿ ಪುಲಕೇಶಿಯ ಒಂದೇ ಒಂದು ಮೂರ್ತಿ ಇಲ್ಲ. ಬಾದಾಮಿಯಿಂದ ಅವರು ಇಡೀ ದಕ್ಷಿಣ-ಮಧ್ಯ ಭಾರತವನ್ನು ಆಳಿದರು. ಕರ್ನಾಟಕದ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಆಲೋಚನೆಯಾಗಿದೆ ಎಂದು @NamHistory ಟ್ವಿಟರ್ ಹ್ಯಾಂಡಲ್ನ ಕ್ಯುರೇಟರ್ ಮತ್ತು ಅಭಿಯಾನದ ಪ್ರಾಥಮಿಕ ಸಂಘಟಕರಲ್ಲಿ ಒಬ್ಬರಾದ ಕಿರಣ್ ಮಲೆನಾಡು ತಿಳಿಸಿದ್ದಾರೆ.
ಕಿರಣ್ ಅವರ ಜೊತೆಗೂಡಿರುವ ಇತಿಹಾಸ ಉತ್ಸಾಹಿಗಳು ಮತ್ತು ಸಾಮಾಜಿಕ ಮಾಧ್ಯಮ ಪುಟದ ಕ್ಯುರೇಟರ್ಗಳಾದ ಶಿವಾನಂದ ಗುಂಡನವರ, ಸುನೀಲ್ ಕುಮಾರ್, ವಿವೇಕ್ ಮತ್ತು ಭುವನೇಶ್ ಕೂಡ ಕನ್ನಡ ಅಸ್ಮಿತೆಗಾಗಿ ಈ ಅಭಿಯಾನ ಎಂದಿದ್ದಾರೆ,
ನವೆಂಬರ್ 28 ರಂದು 30,000 ಕ್ಕೂ ಹೆಚ್ಚು ಟ್ವೀಟ್ಗಳನ್ನು ಕಂಡ ಅಭಿಯಾನವನ್ನು ಇವರೆಲ್ಲ ಮುನ್ನಡೆಸಿದ್ದಾರೆ. ಇಮ್ಮಡಿ ಪುಲಕೇಶಿ ಕುರಿತ ಟ್ವೀಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಜಾಗವನ್ನು ಪಡೆದುಕೊಳ್ಳುತ್ತಲೇ ಇವೆ.
ನಾವೆಲ್ಲರೂ ಕರ್ನಾಟಕದ ಇತಿಹಾಸದಲ್ಲಿ ನಮ್ಮ ಸಾಮಾನ್ಯ ಆಸಕ್ತಿಯಿಂದ ಸಂಪರ್ಕ ಹೊಂದಿದ ಸಾಮಾನ್ಯ ನಾಗರಿಕರು. ನಾವು ಅದನ್ನು ಯಾರದೇ ‘ವಿರುದ್ಧ’ ಎಂದು ಉದ್ದೇಶಿಸಿಲ್ಲ. ನಮಗೆ ಶಿವಾಜಿಯಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಕಿರಣ್ ಹೇಳಿದ್ದಾರೆ. ಎಲ್ಲ ಸರ್ಕಾರಗಳು ಕರ್ನಾಟಕದ ಐತಿಹಾಸಿಕ ಐಕಾನ್ಗಳನ್ನು ನಿರ್ಲಕ್ಷಿಸಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಅಭಿಯಾನದ ಬೆಂಬಲಿಗರಲ್ಲಿ ಕನ್ನಡದ ಜನಪ್ರಿಯ ನಟ ಧನಂಜಯ್ ಕೂಡ ಸೇರಿದ್ದಾರೆ. “ಪ್ರತಿಮೆ ವಿಷಯದಲ್ಲಿ ನನಗೆ ಆಸಕ್ತಿ ಇಲ್ಲ. ಆದರೆ ನಾನು ‘ಕನ್ನಡತನ (ಕನ್ನಡದ ಅಸ್ಮಿತೆ)’ ಸಂಭ್ರಮಿಸಲು ಹಾತೊರೆಯುತ್ತೇನೆ. ನಾವು ನಮ್ಮ ಅಸ್ಮಿತೆಯನ್ನು ಹೊರತುಪಡಿಸಿ ಎಲ್ಲರನ್ನೂ ಮತ್ತು ಎಲ್ಲವನ್ನೂ ಸಂಭ್ರಮಿಸುತ್ತೇವೆ ” ಎಂದು ಧನಂಜಯ್ ಹೇಳಿದ್ದಾರೆ.
ಹರ್ಷನ ವಿರುದ್ಧ ಜಯ ಗಳಿಸಿದ ಇಮ್ಮಡಿ ಪುಲಕೇಶಿ ಯೋಧರಲ್ಲಿ ಮೊದಲಿಗನಾಗಿ ನಿಲ್ಲುತ್ತಾನೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ತಮ್ಮ ಇಲಾಖೆಯು “ಬೇಡಿಕೆಯನ್ನು ಗಮನಿಸಿದೆ” ಎಂದು ತಿಳಿಸಿದ್ದಾರೆ.
“ನಾವು ಇತಿಹಾಸಕಾರರು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸುತ್ತೇವೆ ಮತ್ತು ಬೇಡಿಕೆಯನ್ನು ಪರಿಗಣಿಸುತ್ತೇವೆ. ನಮ್ಮ ಎಲ್ಲಾ ಕನ್ನಡದ ಪ್ರತಿಮೆಗಳನ್ನು ಗೌರವಿಸಬೇಕಿದೆಎಂದು ಸಚಿವರು ಹೇಳಿದ್ದಾರೆ.
‘ಅರಾಜಕೀಯ’ ಅಭಿಯಾನವಾಗಿ ಉದ್ದೇಶಿಸಲಾಗಿದ್ದರೂ, ಕನ್ನಡ ರಾಜನನ್ನು ಸಾಂಸ್ಕೃತಿಕ ಐಕಾನ್ ಆಗಿ ಆಯ್ಕೆ ಮಾಡುವ ಒತ್ತಡವು ರಾಜಕೀಯ ತಿರುವು ಪಡೆದುಕೊಂಡಿದೆ. ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯಸ್ಥ ಸಿದ್ದರಾಮಯ್ಯ ಅವರು ಕನ್ನಡಿಗರ ಬೇಡಿಕೆಗೆ ಅನುಮೋದನೆ ನೀಡಿದ್ದಾರೆ.
“ಚಾಲುಕ್ಯ ಚಕ್ರವರ್ತಿ #ಇಮ್ಮಡಿಪುಲಕೇಶಿ ಕುರಿತು ಸರ್ಕಾರವು ಹೆಚ್ಚಿನ ಸಂಶೋಧನೆಯನ್ನು ಪ್ರಾರಂಭಿಸಬೇಕು. ನಮ್ಮ ಮಕ್ಕಳು ಭವ್ಯ ಕರ್ನಾಟಕವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಅವರ ಸಾಧನೆಗಳನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು” ಎಂದು ಹೇಳಿದ ಸಿದ್ದರಾಮಯ್ಯ, ಚಾಲುಕ್ಯ ರಾಜ “ಕರ್ನಾಟಕದ ಹೆಮ್ಮೆ” ಎಂದು ಟ್ವೀಟ್ ಮಾಡಿದ್ದಾರೆ, ಕಾಂಗ್ರೆಸ್ ರಾಜ್ಯಸಭಾ ಸಂಸದ ಜಿ.ಸಿ. ಚಂದ್ರಶೇಖರ್ ಕೂಡ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಂಡರು.
ಆದರೆ, ಶಿವಾಜಿ ಮತ್ತು ಇಮ್ಮಡಿ ಪುಲಕೇಶಿ ನಡುವಿನ ಹೋಲಿಕೆಗಳು ಬಿಜೆಪಿಯ ಕೆಲವು ಸದಸ್ಯರಿಗೆ ಇಷ್ಟವಾಗಿಲ್ಲ.
“ಅವರು ಸಮಕಾಲೀನರೇ? ಏಕೆ ಹೋಲಿಕೆ ಇರಬೇಕು? ಅಭಿಯಾನದವರು ಅದನ್ನು ಪ್ರಾದೇಶಿಕತೆ ಎಂದು ಕರೆಯುತ್ತಾರೆ, ಆದರೆ ಇದು ರಾಷ್ಟ್ರೀಯತೆಗೆ ವಿರುದ್ಧವಾಗಿದೆ. ಆಗ ಭಾಷೆಯ ಬಗ್ಗೆ ಹೋರಾಟ ಇರಲಿಲ್ಲ. ಹರ್ಷ ಯುದ್ಧದಲ್ಲಿ ಗೆದ್ದಿರಲಿ ಅಥವಾ ಪುಲಕೇಶಿಯಿರಲಿ, ಇಬ್ಬರೂ ದೇವಾಲಯಗಳನ್ನು ನಿರ್ಮಿಸಿದರು, ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. “ಅವರು ಮುಸ್ಲಿಂ ದಾಳಿಕೋರರಂತೆ ಸಂಸ್ಕೃತಿಯನ್ನು ನಾಶ ಮಾಡಲಿಲ್ಲ. ಈ ಜನರು ನಿಜವಾಗಿಯೂ ಕನ್ನಡವನ್ನು ಪ್ರೀತಿಸುತ್ತಿದ್ದರೆ, ಅವರು ಪರ್ಷಿಯನ್ ಹೇರಿದ ಟಿಪ್ಪು ಸುಲ್ತಾನ್ ಅನ್ನು ವಿರೋಧಿಸುತ್ತಿದ್ದರು ” ಎಂದು ಬಿಜೆಪಿ ನಾಯಕ ಹೇಳಿದ್ದಾರೆ. “ಅವರು ‘ತುಕ್ಡೆ ಗ್ಯಾಂಗ್’ ಮನಸ್ಥಿತಿಯನ್ನು ಹೊಂದಿದ್ದಾರೆ. ಅವರು ಮರಾಠರು ಮತ್ತು ಕನ್ನಡಿಗರು, ತಮಿಳರು ಮತ್ತು ಕನ್ನಡಿಗರ ನಡುವೆ ಸಣಘರ್ಷವನ್ನು ಬಯಸುತ್ತಾರೆ, ಆದರೆ ಕನ್ನಡ-ಉರ್ದು-ಹೋರಾಟವನ್ನು ಬಯಸುವುದಿಲ್ಲ ಎಂದು ಆ ನಾಯಕ ಹೇಳಿದ್ದಾರೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಅಂಡ್ ಗವರ್ನೆನ್ಸ್ನ ರಾಜಕೀಯ ವಿಶ್ಲೇಷಕ ಮತ್ತು ಅಧ್ಯಾಪಕ ಎ. ನಾರಾಯಣ, “ಐಕಾನ್ ಅನ್ನು ಆವಿಷ್ಕರಿಸುವ ಅಥವಾ ಮರು-ಆವಿಷ್ಕರಿಸುವ ಕಲ್ಪನೆಯು ಆಸಕ್ತಿದಾಯಕವಾಗಿದೆ. ಏಕೆಂದರೆ ಪ್ರಾದೇಶಿಕತೆ ಸಾಕಷ್ಟು ಪ್ರಬಲವಾಗಿರುವ ಇತರ ರಾಜ್ಯಗಳಲ್ಲಿ ಹಾಗಿದೆ.”. “ಪ್ರಸ್ತುತ, ಕರ್ನಾಟಕವು ಪ್ರಬಲವಾದ ಪ್ಯಾನ್-ಸ್ಟೇಟ್ ಐಕಾನ್ ಅನ್ನು ಹೊಂದಿಲ್ಲ ಮತ್ತು ಆದ್ದರಿಂದ ಈ ಪ್ರವೃತ್ತಿ ಪ್ರಾರಂಭವಾದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.