ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದ ದಿನದಿಂದ ದಿನಕ್ಕೆ ಭುಗಿಲೇಳುತ್ತಿದ್ದು ಉಭಯ ರಾಜ್ಯದ ರಾಜಕೀಯ ನಾಯಕರು ಹೇಳಿಕೆಗಳು ನೀಡುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಪುಂಡರ ದಾಧಲೆ ಹೆಚ್ಚಾಗುತ್ತಿದೆ.
ಕರ್ನಾಟಕದ ಬಸ್ಸಯ ಹಾಗೂ ಕಾರುಗಳ ಮೇಲೆ ಪುಂಡರು ಕಪ್ಪು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ. ಪುಣೆ, ರಾಯಗಢ ಮುಂಬೈನಲ್ಲಿ ರಾಜ್ಯದ ಸಾರಿಗೆ ಬಸ್ಸುಗಳಿಗೆ ಕಪ್ಪು ಮಸಿ ಬಳಿಯಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಉಭಯ ರಾಜ್ಯಗಳ ಸರ್ಕಾರಗಳು ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರವನ್ನ ನಿರ್ಬಂಧಿಸಿವೆ.