Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !

ಕರ್ಣ

ಕರ್ಣ

July 1, 2022
Share on FacebookShare on Twitter

ಇತ್ತೀಚೆಗಷ್ಟೇ ಬಿಬಿಎಂಪಿ ಹೊಸ ನಾಲ್ಕು ಫ್ಲೈ ಓವರ್ ಮಾಡ್ತೀವಿ ಎಂದಿತ್ತು. ಇದಕ್ಕಂತ ಸರ್ಕಾರ ಕೂಡ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆದರೀಗ ನಾಲ್ಕು ಮೇಲ್ಸೇತುವೆಗಳ ಪೈಕಿ ಎರಡು ಮೇಲ್ಸೇತುವೆಗಳಿಗೆ ನಿರ್ಮಾಣಕ್ಕೂ ಮೊದಲೇ ವಿಘ್ನ ಎದುರಾಗಿದೆ. ನಮ್ಮ ಮೆಟ್ರೋ ಇಲ್ಲಿ ಫ್ಲೈ ಓವರ್ ಮಾಡೋಕೆ ಕಷ್ಟಸಾಧ್ಯ ಅಂತಿದೆ. 

ಹೆಚ್ಚು ಓದಿದ ಸ್ಟೋರಿಗಳು

ಇಂದಿನಿಂದ 7 ದಿನ ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ

ಈ ಸರ್ಕಾರ ನಡೆಯುತ್ತಿಲ್ಲ, ಚುನಾವಣೆಗೆ ಏಳೆಂಟು ತಿಂಗಳಿದೆ ಅಂತ ಮ್ಯಾನೇಜ್​​ ಮಾಡುತ್ತಿದ್ದೇವೆ : ಸಚಿವ ಮಾಧುಸ್ವಾಮಿ ಆಡಿಯೋ ವೈರಲ್

ರಾಜ್ಯದ 1 ಕೋಟಿ 25 ಲಕ್ಷ ಮನೆಗಳಲ್ಲಿ ಧ್ವಜ ಹಾರಾಟ: ಸಿಎಂ ಬೊಮ್ಮಾಯಿ

ಬಿಬಿಎಂಪಿ ಎರಡು ಫ್ಲೈ ಓವರ್ ಗಳ ನಿರ್ಮಾಣಕ್ಕೆ ನಮ್ಮ ಮೆಟ್ರೋ ಕಾಮಾಗರಿ ಅಡ್ಡಿ !

ಜೆಸಿ ರಸ್ತೆ, ವೆಸ್ಟ್ ಆಫ್ ಕಾರ್ಡ್, ಸಾರಕ್ಕಿ ಜಂಕ್ಷನ್, ಕಾಮಾಕ್ಯ ಜಂಕ್ಷನ್ ಸೇರಿದ ಹೊಸ ನಾಲ್ಕು ಮೇಲ್ಸೇತುವೆಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿತ್ತು. ಇದಕ್ಕಂತಲೇ ಸರ್ಕಾರ ಅಮೃತ್ ನಗರೋತ್ಥಾನ ಯೋಜನೆ ಅಡಿಯಲ್ಲಿ ಬರೋಬ್ಬರಿ 404 ಕೋಟಿ ರೂಪಾಯಿ ಅನುದಾನ ಕೂಡ ಕೊಟ್ಟಿತ್ತು. ಆದರೀಗ ಬಿಬಿಎಂಪಿ ನಿರ್ಮಾಣ ಮಾಡಲು ಹೊರಟಿರುವ ಹೊಸ ನಾಲ್ಕು ಮೇಲ್ಸೇತುವೆಗಳ ಪೈಕಿ ಸಾರಕ್ಕಿ ಜಂಕ್ಷನ್ ಹಾಗೂ ಕಾಮಾಕ್ಯ ಜಂಕ್ಷನ್ ಫ್ಲೈ ಓವರ್ ಗೆ ನಿರ್ಮಾಣಕ್ಕೂ ಮೊದಲೇ ವಿಘ್ನ ಎದುರಾಗಿದೆ. 

ಹೌದು, ನಾಲ್ಕು ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಪಾಲಕೆ ಭರ್ಜರಿ ಅನುದಾನ ಸಿಕ್ಕಿತ್ತು. ಆದರೆ ಸರ್ಕಾರದಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಸಿಕ್ಕರೂ ಬಿಬಿಎಂಪಿಗೆ ಫ್ಲೈ ಓವರ್ ನಿರ್ಮಾಣ ಅಷ್ಟು ಸುಲಭವಾಗಿಲ್ಲ. ಈ ಮೂಲಕ ನಗರದ ನಾಲ್ಕು ಜಂಕ್ಷನ್ ಗಳ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮುಂದಾದ ಬಿಬಿಎಂಪಿಗೆ ಮತ್ತೊಂದು ತಲೆನೋವು ಎದುರಾಗಿದೆ. ನಮ್ಮ ಮೆಟ್ರೋದ ಮೂರನೇ ಹಂತದ ಮಾರ್ಗದ ಪಿಲ್ಲರ್ ಬರುವ ಜಾಗದಲ್ಲೇ ಪಾಲಿಕೆಯಿಂದ ಫ್ಲೈ ಓವರ್ ಗೆ ಸ್ಕೆಚ್ ಹಾಕಲಾಗಿತ್ತು. ಸಾರಕ್ಕಿ ಜಂಕ್ಷನ್ ಹಾಗೂ ಕಾಮಾಕ್ಯ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ ನಮ್ಮ ಮೆಟ್ರೋ ಹೊಸ ಮಾರ್ಗ ತೊಡಕಾಗಿ ನಿಂತಿದೆ. ಈ ಎರಡೂ 1.2 km ಉದ್ದದ ಫ್ಲೈ ಓವರ್ ಆಗಿದ್ದು ನಮ್ಮ ಮೆಟ್ರೋ 3ನೇ ಹಂತದ ಮಾರ್ಗ ಇದೇ ಜಾಗದಲ್ಲಿ ಹಾದುಹೋಗಲಿದೆ. ಈ ಬಗ್ಗೆ ಮಾತನಾಡಿದ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಬಿಬಿಎಂಪಿ ಮಾಡಲು ಉದ್ದೇಶಿಸಿರುವ ಎರಡು ಫ್ಲೈ ಓವರ್ ಜಾಗದಲ್ಲೇ ನಮ್ಮ ಮೆಟ್ರೋ ಪಿಲ್ಲರ್ ಬರಲಿದೆ. ಮೊದಲ ಹಂತದ ಸಭೆಯಾಗಿದೆ. ಬಿಬಿಎಂಪಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಅವರು ಮೇಲ್ಸೇತುವೆಗೆ ಗುರುತು ಮಾಡಿರುವ ಜಾಗದಿಂದಲೇ ನಮ್ಮ ಮಾರ್ಗವೂ ಹಾದು‌ ಹೋಗುತ್ತಿದೆ. ಹೀಗಾಗಿ ಸಮನ್ವಯ ಸಾಧಿಸಿ ಯಾವ ರೀತಿ ಮತ್ತು ಹೇಗೆ ನಿರ್ಮಾಣ ಎಂಬ ವಿಷಯದ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ ಎಂದಿದ್ದಾರೆ.

ನಮ್ಮ ಮೆಟ್ರೋದ ಫೇಸ್ 3ಯ ಮಾರ್ಗದ ಕಾಮಾಗರಿ ಹಿನ್ನೆಲೆ ಪಾಲಿಕೆಯ ಹೊಸ ಫ್ಲೈ ಓವರ್ ಗೆ ಅನುದಾನ ಸಿಕ್ಕರೂ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಈಗಾಗಲೇ ಪಾಲಿಕೆ ಹಾಗೂ ನಮ್ಮ ಮೆಟ್ರೋ ಸಭೆ ನಡೆಸಿದೆಯಾದರೂ ಯಾವುದೇ ರೀತಿಯ ತಾರ್ಕಿಕ ಅಂತ್ಯ ಕಾಣದೆ ಸಭೆ ಮುಕ್ತಾಯಗೊಂಡಿದೆ. ನಮ್ಮ ಮೆಟ್ರೋ ಜೆಪಿನಗರ 4ನೇ ಹಂತದಿಂದ ಹೆಬ್ಬಾಳ ಮಾರ್ಗದ ಮೂರನೇ ಹಂತದ ಕಾಮಾಗರಿಗೆ ಕೈಗೆತ್ತಿಕೊಂಡಿದೆ. ಆದರೆ ಇದೇ ಮಾರ್ಗದ ಎರಡು ಪ್ರಮುಖ ಜಂಕ್ಷನ್ ಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಪಾಲಿಕೆಯೂ ಮುಂದಾಗಿದೆ. ಎರಡೂ ಕಾಮಾಗರಿಗಳು ಒಂದೊಕ್ಕೊಂದು ಹೊಂದಾಣಿಕೆ ಆಗದೆ ಹೋದರೆ ಬಿಬಿಎಂಪಿ ಫ್ಲೈ ಓವರ್ ನಿರ್ಮಾಣ ಸಾಧ್ಯ ಇಲ್ಲ. ಹೀಗಾಗಿ ಸರ್ಕಾರದಿಂದ ಅನುದಾನ ಸಿಕ್ಕರೂ ಹೊಸ ಫ್ಲೈ ಓವರ್ ನಿರ್ಮಾಣ ಮಾಡಲು ಪಾಲಿಕೆ ಪರದಾಡುತ್ತಿದೆ. ಈ ಬಗ್ಗೆ BMRCL ಅಧಿಕಾರಿಗಳು ಹಾಗೂ ನಮ್ಮ ಅಧಿಕಾರಿಗಳ ಸೇರಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸುತ್ತೇವೆ. ಎರಡೂ ಕಾಮಾಗರಿ ಆಗುವಂತೆ ಇಂಟಿಗ್ರೇಟೆಡ್ ಫ್ಲೈ ಓವರ್ ನಿರ್ಮಾಣದ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಚೀಫ್ ಇಂಜಿನಿಯರ್ ಲೋಕೇಶ್ ಹೇಳಿದ್ದಾರೆ.

ಆದರೆ ಇಂಟಿಗ್ರೇಟೆಡ್ ಫ್ಲೈಓವರ್ ಮಾಡಲು ಇರುವ ಸಾಧ್ಯಾಸಾದ್ಯತೆಗಳ ಬಗ್ಗೆ ಪ್ಲ್ಯಾನ್ ರೂಪಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಮೊದಲು ಪಾಲಿಕೆಯ ಫ್ಲೈ ಓವರ್ ನಿರ್ಮಿಸಿ ಆ ಮೇಲ್ಸೇತುವೆಯ ಮೇಲೆಯಿಂದಲೇ ಮೆಟ್ರೋ ಪಿಲ್ಲರ್ ಹಾಕಬಹುದಾದ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಕೋವಿಡ್‌-19; 16,047 ಸೋಂಕು ಪತ್ತೆ, 54 ಸಾವು!
ದೇಶ

ಕೋವಿಡ್‌-19; 16,047 ಸೋಂಕು ಪತ್ತೆ, 54 ಸಾವು!

by ಪ್ರತಿಧ್ವನಿ
August 10, 2022
ಕಾಮನ್‌ವೆಲ್ತ್‌ ; ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚು ಗೆದ್ದ ಭಾರತದ ಮಹಿಳಾ ಹಾಕಿ ತಂಡ
ಕ್ರೀಡೆ

ಕಾಮನ್‌ವೆಲ್ತ್‌ ; ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚು ಗೆದ್ದ ಭಾರತದ ಮಹಿಳಾ ಹಾಕಿ ತಂಡ

by ಪ್ರತಿಧ್ವನಿ
August 7, 2022
ಕೆಜಿಎಫ್-‌2 ಸಿನಿಮಾ ವೀಕ್ಷಿಸುವಾಗ ಶೂಟೌಟ್! ಯುವಕನಿಗೆ ಗಾಯ
ಕರ್ನಾಟಕ

ಕೋರ್ಟ್‌ ಆವರಣದಲ್ಲೇ ಕುತ್ತಿಗೆ ಕೊಯ್ದು ಪತ್ನಿ ಕೊಂದ ಪತಿ!

by ಪ್ರತಿಧ್ವನಿ
August 13, 2022
ಶುರುವಾಗುತ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಲೀಗ್ ಟಿಪಿಎಲ್
ಸಿನಿಮಾ

ಶುರುವಾಗುತ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಲೀಗ್ ಟಿಪಿಎಲ್

by ಪ್ರತಿಧ್ವನಿ
August 11, 2022
BJPಯ 9 ಮತ್ತು JDS ಪಕ್ಷದ 11 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ : ಲಕ್ಷ್ಮಣ್
ವಿಡಿಯೋ

BJPಯ 9 ಮತ್ತು JDS ಪಕ್ಷದ 11 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ : ಲಕ್ಷ್ಮಣ್

by ಪ್ರತಿಧ್ವನಿ
August 12, 2022
Next Post
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ ; ಹೊಸ ದರ ಇಂದಿನಿಂದ ಜಾರಿ

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ ; ಹೊಸ ದರ ಇಂದಿನಿಂದ ಜಾರಿ

ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌

ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌

ಬಿಜೆಪಿಗರು ನಮ್ಮ ಸಂವಿಧಾನವನ್ನೇ ಅಪಾಯಕ್ಕೆ ಸಿಲುಕಿಸಿದ್ದಾರೆ : ಡಿ.ಕೆ. ಶಿವಕುಮಾರ್

ಅಕ್ರಮ ಹಣ ವರ್ಗಾವಣೆ ಪ್ರಕರಣ : ಡಿಕೆ ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist