ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಪ್ರತಿಗಾಮಿ ಶಕ್ತಿಗಳು ಕಾರಣವಿಲ್ಲದೆ ಹಾಗೇ ಸುಮ್ಮಸುಮ್ಮನೆ ಯಾರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಲಿˌಅವರ ಬಗ್ಗೆ ಅಪಪ್ರಚಾರ ಮಾಡುವುದಾಗಲಿ ಮಾಡುವುದಿಲ್ಲ. ಹಾಗೊಂದು ವೇಳೆ ಅದು ಯಾರನ್ನಾದರೂ ಗುರಿಯಾಗಿಸಿಕೊಂಡು ಸಾಂಘಿಕ ದಾಳಿ ಮಾಡುತ್ತದೆ ಎಂದರೆ ಅದು ಅವರ ಬಗ್ಗೆ ವಿಪರಿತ ಭಯ ಹೊಂದಿದೆ ಎಂದರ್ಥ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಸಿದ್ಧರಾಮಯ್ಯನವರ ಕುರಿತು ಇರುವಷ್ಟು ಭಯ ಮತ್ತಾರಿಂದಲೂ ಇಲ್ಲ. ಆ ಕಾರಣದಿಂದಲೇ ಬಿಜೆಪಿಯ ಸಿಂಬಳು ಒರೆಸಿಕೊಳ್ಳಲಾಗದ ಅತ್ಯಂತ ಅಪ್ರಸ್ತುತ ಪುಢಾರಿಗಳು ಕೂಡ ಸಿದ್ಧರಾಮಯ್ಯನವರನ್ನು ಕಾರಣವಿಲ್ಲದಿದ್ದರೂ ಟೀಕಿಸುತ್ತವೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹೆದರುವುದು ನೆಹರು-ಗಾಂಧಿ ಕುಟುಂಬಕ್ಕೆ ಮಾತ್ರ. ಆ ಕುಟುಂಬವನ್ನು ರಾಜಕೀಯದಲ್ಲಿ ಅಪ್ರಸ್ತುತಗೊಳಿಸಿದರೆ ಮಾತ್ರ ತಮ್ಮ ಅಸ್ತಿತ್ವ ಎನ್ನುವುದು ಬಿಜೆಪಿಯ ಬಲವಾದ ನಂಬಿಕೆ. ಆ ಕಾರಣದಿಂದಲೇ ಮೋದಿ ಮುನ್ನೆಲೆಗೆ ಬರುತ್ತಲೆ ರಾಹುಲ್ ಗಾಂಧಿಯನ್ನು ಒಬ್ಬ ಬೇಜವಾಬ್ಧಾರಿ ನಾಯಕನೆಂದು ಬಿಂಬಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಪ್ರತಿಗಾಮಿ ಶಕ್ತಿಗಳು ಕಾರಣವಿಲ್ಲದೆ ಹಾಗೇ ಸುಮ್ಮಸುಮ್ಮನೆ ಯಾರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಲಿˌ ಅವರ ಬಗ್ಗೆ ಅಪಪ್ರಚಾರ ಮಾಡುವುದಾಗಲಿ ಮಾಡುವುದಿಲ್ಲ. ಹಾಗೊಂದು ವೇಳೆ ಅದು ಯಾರನ್ನಾದರೂ ಗುರಿಯಾಗಿಸಿಕೊಂಡು ಸಾಂಘಿಕ ದಾಳಿ ಮಾಡುತ್ತದೆ ಎಂದರೆ ಅದು ಅವರ ಬಗ್ಗೆ ವಿಪರಿತ ಭಯ ಹೊಂದಿದೆ ಎಂದರ್ಥ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಸಿದ್ಧರಾಮಯ್ಯನವರ ಕುರಿತು ಇರುವಷ್ಟು ಭಯ ಮತ್ತಾರಿಂದಲೂ ಇಲ್ಲ. ಆ ಕಾರಣದಿಂದಲೇ ಬಿಜೆಪಿಯ ಸಿಂಬಳು ಒರೆಸಿಕೊಳ್ಳಲಾಗದ ಅತ್ಯಂತ ಅಪ್ರಸ್ತುತ ಪುಢಾರಿಗಳು ಕೂಡ ಸಿದ್ಧರಾಮಯ್ಯನವರನ್ನು ಕಾರಣವಿಲ್ಲದಿದ್ದರೂ ಟೀಕಿಸುತ್ತವೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹೆದರುವುದು ನೆಹರು-ಗಾಂಧಿ ಕುಟುಂಬಕ್ಕೆ ಮಾತ್ರ. ಆ ಕುಟುಂಬವನ್ನು ರಾಜಕೀಯದಲ್ಲಿ ಅಪ್ರಸ್ತುತಗೊಳಿಸಿದರೆ ಮಾತ್ರ ತಮ್ಮ ಅಸ್ತಿತ್ವ ಎನ್ನುವುದು ಬಿಜೆಪಿಯ ಬಲವಾದ ನಂಬಿಕೆ. ಆ ಕಾರಣದಿಂದಲೇ ಮೋದಿ ಮುನ್ನೆಲೆಗೆ ಬರುತ್ತಲೆ ರಾಹುಲ್ ಗಾಂಧಿಯನ್ನು ಒಬ್ಬ ಬೇಜವಾಬ್ಧಾರಿ ನಾಯಕನೆಂದು ಬಿಂಬಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಅದಕ್ಕಾಗಿ ಬಿಜೆಪಿ ಐಟಿ ಸೆಲ್ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ ಎನ್ನುವ ಸುದ್ದಿಗಳಿವೆ. ಮೋದಿ ಪಟಾಲಂನ ಆಟಾಟೋಪಗಳನ್ನು ಕಳೆದ ಏಳೆಂಟು ವರ್ಷಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹಾಗು ಅಷ್ಟೇ ನಿರ್ಭಯವಾಗಿ ಟೀಕಿಸಿದ ಭಾರತದ ಏಕೈಕ ರಾಜಕಾರಣಿ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಒಬ್ಬ ದುರ್ಬಲ ನಾಯಕನೆಂದು ತಮ್ಮ ಐಟಿ ಸೆಲ್ ಮೂಲಕ ಬಿಂಬಿಸುವ ಕಾರ್ಯವಷ್ಟೆ ಅಲ್ಲದೆ ಕಾಂಗ್ರೆಸ್ ಪಕ್ಷದೊಳಗಿನ ಹಿರಿಯ ನಾಯಕರ ಹಳೆಯ ಹಗರಣಗಳ ಫೈಲುಗಳನ್ನಿಟ್ಟುಕೊಂಡು ಬಿಜೆಪಿ ಆಡಳಿತ ಅವರನ್ನು ರಾಹುಲ್ ವಿರುದ್ಧ ಮಾತನಾಡುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದೆ ಎನ್ನುವ noಗುಮಾನಿಗಳಿವೆ. ಗುಲಾಮ್ ನಬಿ ಆಜಾದ್ ರಿಂದ ಹಿಡಿದು ಕಪಿಲ್ ಸಿಬಾಲ್ ವರೆಗೆ ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಬೇಕಾದರೆ ನಿರ್ಭಯವಾಗಿ ಟೀಕಿಸಿ ನಿರಾಳರಾಗಿ ಇರುತ್ತಿದ್ದರು ಆದರೆ ರಾಹುಲ್ ರನ್ನು ಟೀಕಿಸದೆ ನಿರಾಳರಾಗಿ ಇರಲು ಸಾಧ್ಯವಿಲ್ಲದಂತ ವಾತಾವರಣ ಬಿಜೆಪಿ ಸೃಷ್ಟಿಸಿದ್ದು ಸುಳ್ಳಲ್ಲ. ಇದು ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಪ್ರತಿಗಾಮಿ ಶಕ್ತಿಗಳ ಒಡೆದಾಳುವ ನೀತಿ ಎನ್ನಬಹುದಾಗಿದೆ.
ಕೆಲವು ತಿಂಗಳುಗಳ ಹಿಂದೆ ಸಂಸತ್ತಿನಲ್ಲಿ ಆಯವ್ಯಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ಬಿಜೆಪಿಯಲ್ಲಿ ಅಪಾರ ಪ್ರಮಾಣದ ತಲ್ಲಣ ಸೃಷ್ಟಿಸಿದ ಬಗ್ಗೆ ನಾವು ತಿಳಿದಿದ್ದೇವೆ. ವೈದಿಕವ್ಯಾಧಿ ಮಾಧ್ಯಮಗಳು ಹಾಗು ಬಿಜೆಪಿಯ ಅಧಿಕೃತ ಮತ್ತು ಅನಧಿಕೃತ ಐಟಿ ಸೆಲ್ಗಳು ಮೋದಿಯನ್ನು ಒಬ್ಬ ಭಾರೀ ಮಾತುಗಾರನೆಂದು ಬಿಂಬಿಸಿವೆ. ಭಾವನಾತ್ಮಕ ಸಂಗತಿಗಳ ವೈಭವಿಕರಣದ ಹೊರತಾಗಿ ಸರಕಾರದ ಆಡಳಿತಾತ್ಮಕ ಸಂಗತಿಗಳುˌ ಅವುಗಳ ಅಂಕಿಅಂಶˌ ದೇಶದ ಮುಂದಿರುವ ಸವಾಲುಗಳು ಮುಂತಾದ ಸಂಗತಿಗಳ ಕುರಿತು ನಿರರ್ಗಳವಾಗಿ ಹಾಗು ವಿದ್ವತ್ಪೂರ್ಣವಾಗಿ ಮಾತನಾಡುವ ಪ್ರೌಢಿಮೆ ಮೋದಿಯಲ್ಲಿಲ್ಲ ಎನ್ನುವ ಸತ್ಯವನ್ನು ನಿರಂತರವಾಗಿ ಮರೆಮಾಚುತ್ತ ಬರಲಾಗುತ್ತಿದೆ. ಆದರೆˌ ಮೋದಿ ವ್ಯಕ್ತಿತ್ವದ ನ್ಯೂನ್ಯತೆ ಕಳೆದ ಏಳೆಂಟು ವರ್ಷಗಳಲ್ಲಿ ಇಡೀ ಜಗತ್ತಿನೆದುರಿಗೆ ಆಗಾಗ ಬಹಿರಂಗಗೊಂಡಿದೆ.
ಮೋದಿˌ ಬಹಿರಂಗ ಪತ್ರಿಕಾಗೋಷ್ಠಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿಲ್ಲ ಮತ್ತು ಟೆಲಿಪ್ರಾಂಪ್ಟರ್ ಇಲ್ಲದೆ ಏನನ್ನು ಮಾತನಾಡಲಾರರು ಎನ್ನುವ ಸತ್ಯವನ್ನು ಕಳೆದ ಏಳೆಂಟು ವರ್ಷಗಳಿಂದ ಬಿಜೆಪಿ ಮತ್ತು ಮೋದಿ ಮಾಧ್ಯಮಗಳು ಸತತವಾಗಿ ಮರೆಮಾಚುತ್ತ ಬರುತ್ತಿದ್ದರೂ ಕೂಡ ಆಗಾಗ ಅದು ಬೆತ್ತಲೆಗೊಳ್ಳುತ್ತಲೆ ಇದೆ. ಹಾಗಾಗಿˌ ಭಾರತವನ್ನು ಧರ್ಮದ ಹಳಹದಿಯಲ್ಲಿ ವಿಘಟಿಸುತ್ತಿರುವ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಪ್ರತಿಗಾಮಿ ಶಕ್ತಿಗಳು ಇಂದು ರಾಹುಲ್ ಗಾಂಧಿಯ ಭಾರತ ಜೋಡೊ ಪಾದಯಾತ್ರೆಯಿಂದ ಮತ್ತೊಮ್ಮೆ ಬೆಚ್ಚಿಬಿದ್ದದ್ದು ಸುಳ್ಳಲ್ಲ. ಮೋದಿ ಆಡಳಿತದ ವಿಫಲತೆಗಳು ಮತ್ತು ಮೋದಿಯಿಂದ ಆಗುತ್ತಿರುವ ದೇಶದ ಅವಸಾನವನ್ನು ರಾಹುಲ್ ಬಹಳ ಮಾರ್ಮಿಕವಾಗಿ ಅಷ್ಟೇ ಪ್ರಬುದ್ಧವಾಗಿ ಬೆತ್ತಲೆಗೊಳಿಸುತ್ತಿದ್ದಾರೆ. ರಾಹುಲ್ ಗಾಂಧಿ ನಿಜವಾಗಿಯೂ ಅಪ್ರಸ್ತುತರಾಗಿದ್ದರೆ ಬಿಜೆಪಿ ಅವರ ಮೇಲೆ ಈ ಪ್ರಮಾಣದ ವ್ಯವಸ್ಥಿತ ಸಾಂಘಿಕ ದಾಳಿ ಮಾಡುವ ಅಗತ್ಯವಿರಲಿಲ್ಲ.
ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡು ಮೂಲಕ ತನ್ನ ಮಹಾತ್ಪಾಕಾಂಕ್ಷೆಯ ಭಾರತ್ ಜೋಡೊ ಪಾದಯಾತ್ರೆ ಆರಂಭಿಸಿದ ಮರುಕ್ಷಣವೇ ಆಡಳಿತಾರೂಢ ಭಾರತೀಯ ಜನತಾ ಪಕ್ಷ ˌ ಅದರ ಅಧಿಕೃತ ಐಟಿ ಸೆಲ್ ಮತ್ತು ಅದರ ಸಾಮಾಜಿಕ ಜಾಲತಾಣದ ಅಕ್ರಮ ಐಟಿ ಸೆಲ್ಗಳು ರಾಹುಲ್ ವಿರುದ್ಧ ಸಾಮೂಹಿಕ ದಾಳಿ ಆರಂಭಿಸಿವೆ. ಅದು ಬಿಜೆಪಿಯಲ್ಲಿ ಸೃಷ್ಟಿಯಾದ ಭಯದ ತೀವ್ರತೆಯನ್ನು ಪ್ರತಿಬಿಂಬಿಸುತ್ತಿದೆ. ರಾಹುಲ್ ಪಾದಯಾತ್ರೆ ಆರಂಭಿಸಿದ್ದೆ ತಡˌ ಬಿಜೆಪಿಗೆ ಸಣ್ಣನೆಯ ನಡುಕ ಆರಂಭಗೊಂಡಂತೆ ಕಾಣುತ್ತದೆ. ಬಿಜೆಪಿ ಪಾಲಿಗೆ ರಾಹುಲ್ ಒಬ್ಬ ಪ್ರಬುದ್ಧ ರಾಜಕಾರಣಿಯೆ ಅಲ್ಲವೆಂದ ಮೇಲೆ ಆತನ ಪಾದಯಾತ್ರೆಯಿಂದ ಕಂಗಾಲಾಗಿ ಸಾಂಘಿಕವಾಗಿ ಆತನ ಮೈಮೇಲೆ ಬೀಳುತ್ತಿರುವುದು ಬಿಜೆಪಿಯ ಭಯವನ್ನಲ್ಲದೆ ಮತ್ತೇನನ್ನು ತೋರಿಸಬಲ್ಲದು!? ಕನ್ನಡದಲ್ಲಿನ ಮಹೇಶ್ ವಿಕ್ರಮ್ ಹೆಗಡೆ ಎಂಬ ಸಾಂಪ್ರದಾಯವಾದಿ ಹಾಗು ಕೋಮುವಾದಿ ನಡೆಸುವ ಪೋಸ್ಟ್ ಕಾರ್ಡ್ ಹೆಸರಿನ ಬಿಜೆಪಿಯ ಐಟಿ ಸೆಲ್ಲಂತು ರಾಹುಲ್ ಪಾದಯಾತ್ರೆಯ ಕಂಟೇನರ್ ಕಂಡು ಬೆಚ್ಚಿಬಿದ್ದದ್ದು ಆತನ ಎಂದಿನ ಶೈಲಿಯ ಅಕ್ರಮ ಹಾಗು ಕಪೋಲಕಲ್ಪಿತˌ ದ್ವೇಷ ಬಿತ್ತುವ ಸುದ್ದಿಗಳೆ ಹೇಳುತ್ತವೆ. ಹೀಗೆ ಇವು ರಾಹುಲ್ ಮೇಲೆ ಮುಗಿಬಿದ್ದದ್ದನ್ನು ನೋಡಿದರೆ ಪಾದಯಾತ್ರೆ ಬಗ್ಗೆ ಬಿಜೆಪಿಗಿರುವ ಗುಪ್ತ ಭಯದ ತೀವ್ರತೆಯನ್ನು ನಾವು ಊಹಿಸಬಹುದಾಗಿದೆ.
ರಾಹುಲ್ ಗಾಂಧಿ ಪಾದಯಾತ್ರೆ ˌ ಅವರು ಅದಕ್ಕಾಗಿ ಬಳಸುತ್ತಿರುವ ಕಂಟೇನರ್ˌˌ ಅವರು ತೊಟ್ಟ ಟೀ-ಷರ್ಟ್ ಕುರಿತು ಕುಚ್ಯೋದ್ಯ ಮಾಡುತ್ತಿರುವ ಬಿಜೆಪಿಯ ಕೇಂದ್ರ ಮಾಧ್ಯಮ ಘಟಕˌ ಐಟಿ ಸೆಲ್ ಹಾಗು ಪೋಸ್ಟ್ ಕಾರ್ಡ್ ನಂತಹ ಬಿಜೆಪಿ ಅಕ್ರಮ ಐಟಿ ಸೆಲ್ಗಳು ರಾಹುಲ್ ಬಗ್ಗೆ ತಮಗಿರುವ ಭಯವನ್ನು ಈ ರೀತಿ ವ್ಯಕ್ತಪಡಿಸುತ್ತಿವೆ. ವಿರೋಧಿಗಳನ್ನು ಅಪಸಾಹ್ಯಕಾರಿ ಹಾಗು ಅನಾಗರಿಕವಾಗಿ ಟ್ರೋಲ್ ಮಾಡುವುದೇ ಸನಾತನ ಸಂಸ್ಕೃತಿ ಎಂದು ಇವು ತಿಳಿದಂತಿದೆ. ರಾಹುಲ್ ವ್ಯಕ್ತಿತ್ಱ ಭಂಜಕತೆಯ ಈ ವಿಕೃತ ಅಭಿಯಾನದಲ್ಲಿ ಮೋದಿ ಸಂಪುಟದ ಅನೇಕ ಮಂತ್ರಿಗಳು, ಬಿಜೆಪಿ ಆಡಳಿತ ನಡೆಸುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗು ರಾಜ್ಯ ಘಟಕದ ನಾಯಕರುಗಳು ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ. ಮಾಮೂಲಿನಂತೆ ಬಿಜೆಪಿಯ ಬೌದ್ಧಿತ ಅದಃಪತನದ ಸಂಕೇತವೆನ್ನುವಂತೆ ರಾಹುಲರನ್ನು ಪಪ್ಪು ಎಂದು ಅನಾಗರಿಕವಾಗಿ ಜರೆಯುವುದು ಜಾರಿಯಲ್ಲಿದೆ. ರಾಹುಲ್ ಗಾಂಧಿಯನ್ನು ರಾಜಕೀಯವಾಗಿ ಅಪ್ರಸ್ತುತವೆಂದು ಬಿಂಬಿಸುವ ಈ ನಿರಂತರ ಪ್ರಯತ್ನದ ಹಿಂದೆ ರಾಹುಲ್ ವಾಸ್ತವದಲ್ಲಿ ತಾನು ಬಿಂಬಿಸಿದಂತೆ ಇಲ್ಲ ಎನ್ನುವ ಅವ್ಯಕ್ತ ಭಯ ಬಿಜೆಪಿಗೆ ಸದಾ ಕಾಡುತ್ತಿರುತ್ತದೆ. ರಾಹುಲ್ ಗಾಂಧಿಯವರ ಮೇಲಿನ ದಾಳಿಯ ಪ್ರಮಾಣ ಬಿಜೆಪಿ ರಾಹುಲ್ ಗಾಂಧಿಯ ಸಾಮರ್ಥ್ಯದ ಬಗೆಗೆ ಹೊಂದಿರುವ ಹೆದರಿಕೆಯನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ರಾಹುಲ್ ಗಾಂಧಿ ಇಂದಿನ ಮೋದಿ ಆಡಳಿತದ ವಿಷಮ ಕಾಲಘಟ್ಟದಲ್ಲಿ ರಾಜಕೀಯವಾಗಿ ಎಷ್ಟೊಂದು ಪ್ರಸ್ತುತವಾಗಿದ್ದಾರೆ ಎಂಬುದನ್ನು ಕೂಡ ಈ ಘಟನೆ ಸಾಬೀತುಪಡಿಸಿದೆ.
ರಾಹುಲ್ ಮಾಡುತ್ತಿರುವ ಪಾದಯಾತ್ರೆಯ ಪರಿಣಾಮಗಳು ಮುಂದಿನ ದಿನಗಳಲ್ಲಿ ತನಗೆ ಮಾಡಹಬುದಾದ ಹಾನಿಯನ್ನು ಮನಗಂಡ ಬಿಜೆಪಿ ಅದಾಗದಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ರಾಷ್ಟ್ರದ ಪ್ರಮುಖ ಪ್ರತಿಪಕ್ಷದ ಮೇರು ನಾಯಕನನ್ನು ‘ಪಪ್ಪು’ ಎಂದು ಬಿಂಬಿಸಿದಾಗ ಮಾತ್ರ ಮೋದಿ ಮತ್ತು ಅವರ ಪಕ್ಷ ಅಧಿಕಾರದಲ್ಲಿ ಉಳಿಯಲು ಸಾಧ್ಯ. ವಿಶೇಷವಾಗಿ ಪ್ರಗತಿ ವರದಿಯಲ್ಲಿ ತೋರಿಸಲು ಗಣನೀಯವಾಗಿ ಮೋದಿ ಸರಕಾರದ ಯಾವ ಸಾಧನೆಯೂ ಇಲ್ಲದಿರುವಾಗ ರಾಹುಲ್ ಪಾದಯಾತ್ರೆಯಿಂದ ಬಿಜೆಪಿಗೆ ಮೂಡಿದ ಭಯ ಸಹಜವಾದದ್ದೆ. ಆದ್ದರಿಂದ, ಮೋದಿ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಹಾಗು ಅದು ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಘಟಿಸುತ್ತಿರುವುದರ ಬಗ್ಗೆ ಜನಾಭಿಪ್ರಾಯ ಮೂಡಿಸಲು ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಪಾದಯಾತ್ರೆಯ ಬಗ್ಗೆ ಅಪಪ್ರಚಾರ ಮಾಡಲೇಬೇಕೆಂದು ಬಿಜೆಪಿ ನಿರ್ಧರಿಸಿದಂತಿದೆ. ಪ್ರಸ್ತುತ ದಿನಗಳಲ್ಲಿ ರಾಹುಲ್ ಗಾಂಧಿಯವರು ಕೈಕೊಂಡಿರುವ ಭಾರತ್ ಜೋಡೊ ಪಾದಯಾತ್ರೆಯು ದೇಶದ ಸಾಂಪ್ರದಾಯಿಕ ಮಾಧ್ಯಮ ಮತ್ತು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಶೇಷ ಆಸಕ್ತಿ ಹಾಗು ಚರ್ಚೆಯನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಏಕೆಂದರೆ ಬಿಜೆಪಿಯ ತಿರುಚು ತಂತ್ರಜ್ಞರು ತಮಗೆ ಭಯವಾದಾಗ ಮಾತ್ರ ಎತ್ತರದ ಧ್ವನಿಯಲ್ಲಿ ಅರಚುವುದು ವಾಡಿಕೆ.
2014ರಿಂದ ದೇಶದಲ್ಲಿ ಒಂದು ಬಗೆಯ ಅರಾಜಕ ಆಡಳಿತ ಮಾಡುತ್ತಿರುವ ಮೋದಿ ಸರಕಾರದ ಮೇಲೆ ರಾಹುಲ್ ಬಹಳ ಪರಿಣಾಮಾಕಾರಿಯಾಗಿ ಮುಗಿಬಿದ್ದಿದ್ದಾರೆ. ಸಾರ್ವಜನಿಕರ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ ಅನೇಕ ಕಠಿಣವಾದ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ನೈಜ ಧನಿಯಾಗುತ್ತಿದ್ದಾರೆ. ೨೦೧೭ ರಲ್ಲಿ ಬಿಜೆಪಿ ಐಟಿ ಸೆಲ್ ಟ್ವಿಟರ್ನಲ್ಲಿ “ಎರಡು ವಾಕ್ಯಗಳನ್ನು ಎಡವದೆ ರಚಿಸಲು” ಸಾಧ್ಯವಾಗದ ವ್ಯಕ್ತಿ ಎಂದು ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿತ್ತು. ರಾಹುಲ್ ಗಾಂಧಿಯವರ ಪ್ರತಿಯೊಂದು ಭಾಷಣಗಳಿಂದ ಅದೇ ಬಿಜೆಪಿ ಐಟಿ ಸೆಲ್ ಸದಾ ಅಕ್ಷರಶಃ ನಿದ್ರೆ ಕಳೆದುಕೊಂಡು ಕಂಗಾಲಾಗುತ್ತದೆ. ರಾಹುಲ್ ಗಾಂಧಿಯವರನ್ನು ಹೇಗಾದರೂ ಮಾಡಿ ಕಟ್ಟಿಹಾಕಲು ಬಿಜೆಪಿ ಮತ್ತು ಪ್ರತಿಗಾಮಿ ಶಕ್ತಿಗಳ ಕ್ಷಿಪ್ರಪಾಕ ವಿಧಾನದ ಅನುಸಾರ ಅವರನ್ನು ರಾಷ್ಟ್ರವಿರೋಧಿ ಎಂದು ಬಿಂಬಿಸುವ ತನ್ನ ಹಳಸಲು ಮಂತ್ರಕ್ಕೆ ಮಾರುಹೋಗಿವೆ. ಭಾರತವು ಧರ್ಮದ ಆಧಾರದಲ್ಲಿ ಒಡೆಯಲಾಗುತ್ತಿದೆ ಎಂಬ ರಾಹುಲ್ ಗಾಂಧಿಯವರ ಪ್ರಬುದ್ಧ ಮಾತನ್ನು ಜೀರ್ಣಿಸಿಕೊಳ್ಳಲಾಗದ ಬಿಜೆಪಿ ಅವರನ್ನು ರಾಷ್ಟ್ರದ್ರೋಹಿ ಎಂದು ಬಿಂಬಿಸುವ ಖೊಟ್ಟಿ ಸ್ಕ್ರಿಪ್ಟ್ ಒಂದನ್ನು ತಯ್ಯಾರಿಸಿ ಸಾಮೂಹಿಕವಾಗಿ ಏಕರೂಪದ ಟ್ವೀಟ್ಗಳು ಕಾಣಿಸಿಕೊಳ್ಳುವಂತೆ ಕಾರ್ಯತಂತ್ರ ಹೆಣೆಯುವಲ್ಲಿ ಆಗಾಗ ನಿರತವಾಗುತ್ತದೆ.
ಸಹಜವಾಗಿಯೇ ಈಗ ಬಿಜೆಪಿಗೆ ಕಠಿಣ ಚುನಾವಣಾ ಕಾಲವನ್ನು ಎದುರಿಸುವ ಸಮಯ. ಮುಂದಿನ ವರ್ಷದ ಆರಂಭದಲ್ಲಿ ಕರ್ನಾಟಕವು ಸೇರಿದಂತೆ ಹಲವು ರಾಜ್ಯಗಳ ನಿರ್ಣಾಯಕ ಚುನಾವಣಾ ಸಂದರ್ಭದಲ್ಲಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿಯ ಸಮರ್ಥ ವಾಗ್ದಾಳಿ ಮತ್ತು ಬಿಜೆಪಿಯ ಕಳಪೆ ರಿಪೋರ್ಟ್ ಕಾರ್ಡ್ ಆ ಚುನಾವಣೆಗಳ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ಊಹಿಸಿದ ಬಿಜೆಪಿ, ಅವರ ಮೇಲೆ ಸಾಂಘಿಕ ದಾಳಿಗಿಳಿದಂತಿದೆ. ಅಷ್ಟೇ ಅಲ್ಲದೆˌ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಮೋದಿ ಸರ್ಕಾರದ ಗಂಭೀರ ಪ್ರಯತ್ನಗಳ ಬಗ್ಗೆ ಮಾತನಾಡುತ್ತಿರುವ ರಾಹುಲ್ ಬಿಜೆಪಿ ಅಂಗಾಂಗದ ಅತ್ಯಂತ ಆಯಕಟ್ಟಿನ ಕಚ್ಚಾ ನರವನ್ನು ಗಂಭೀರವಾಗಿಯೆ ಹಿಚುಕುತ್ತಿದ್ದಾರೆ. ವಿಶೇಷವಾಗಿ ಕಾರ್ಯಾಂಗˌ ಶಾಸಕಾಂಗˌ ನ್ಯಾಯಾಂಗ, ಚುನಾವಣಾ ಆಯೋಗˌ ರಿಜರ್ವ್ ಬ್ಯಾಂಕ್ˌ ಪತ್ರಿಕಾರಂಗ ಮುಂತಾದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯಕಲಾಪದಲ್ಲಿ ಹಸ್ತಕ್ಷೇಪ ಮಾಡಿ ಅವುಗಳನ್ನು ಮೋದಿ ಸರಕಾರ ದುರ್ಬಲಗೊಳಿಸುತ್ತಿರುವ ಕುರಿತು ರಾಹುಲ್ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ.
ತಮ್ಮ ವಿನೂತನ ಮತ್ತು ಸಕಾಲಿಕ ಭಾರತ್ ಜೋಡೊ ಪಾದಯಾತ್ರೆಯ ಮೂಲಕ ರಾಹುಲ್ ಗಾಂಧಿಯವರು ಮೋದಿ ಸರಕಾರದ ವಿರುದ್ಧ ಮಾಡುತ್ತಿರುವ ಆರೋಪಗಳು ಮತ್ತು ಎತ್ತುತ್ತಿರುವ ಗಂಭೀರ ಪ್ರಶ್ನೆಗಳಿಗೆ ಸೂಕ್ತವಾದ ಸಮಜಾಯಿಷಿಗಳ ಮೂಲಕ ಉತ್ತರಿಸುವುದು ಕಷ್ಟಕರ ಮತ್ತು ದುರ್ಗಮವಾದ ಆಯ್ಕೆ ಎನ್ನುವುದು ಸ್ವತಃ ಮೋದಿˌ ಮೋದಿ ಸಂಪುಟದ ಮಂತ್ರಿಗಳುˌ ಮೋದಿ ಸರಕಾರವನ್ನು ನಿಯಂತ್ರಿಸುತ್ತಿರುವ ಅಸಂವಿಧಾನಿಕ ಪ್ರತಿಗಾಮಿ ಶಕ್ತಿಗಳು ಹಾಗು ಮೋದಿ ರಕ್ಷಣಾ ನಿರತ ಮಾಧ್ಯಮಗಳಿಗೆ ಚನ್ನಾಗಿ ಗೊತ್ತಿರುವ ಸಂಗತಿಯಾಗಿದೆ. ಆದ್ದರಿಂದ, ಅತ್ಯುತ್ತಮ ರಕ್ಷಣೆಯ ಮಾರ್ಗವೆಂದರೆ ರಾಹುಲ್ ಗಾಂಧಿಯವರನ್ನು ರಾಷ್ಟ್ರದ್ರೋಹಿಯಾಗಿ ಬಿಂಬಿಸುತ್ತ ಅವರೆತ್ತಿದ ಗಂಭೀರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದು ಮತ್ತು ಅವರನ್ನು ಸಾರ್ವಜನಿಕವಾಗಿ ಅಪ್ರಬುದ್ಧ ನಾಯಕ ಅಥವಾ ಖಳನಾಯಕನೆಂಬಂತೆ ಬಿಂಬಿಸುವುದು ಬಿಜೆಪಿಗೆ ಉಳಿದಿರುವ ಏಕೈಕ ಬಳಸು ಹಾಗು ಅಕ್ರಮ ಮಾರ್ಗವಾಗಿದೆ. ಆ ಬಳಸು ಹಾಗು ಅಕ್ರಮ ಮಾರ್ಗದಲ್ಲಿ ಬಿಜೆಪಿ ಅತ್ಯುತ್ತಮ ಚಾಂಪಿಯನ್ ಎನ್ನುವು ಬಗ್ಗೆ ಪ್ರತ್ಯೇಕ ಟಿಪ್ಪಣಿಯ ಅಗತ್ಯವಿಲ್ಲವೆಂದು ನಾನಂತು ಭಾವಿಸಿದ್ದೇನೆ.