Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ಭದ್ರಾವತಿ ಕಾರ್ಖಾನೆ ಮುಚ್ಚಿದ್ರು: ಯಡಿಯೂರಪ್ಪ ವಿರುದ್ಧ ಸಂಗಮೇಶ್ವರ್ ವಾಗ್ದಾಳಿ

ಪ್ರತಿಧ್ವನಿ

ಪ್ರತಿಧ್ವನಿ

January 21, 2023
Share on FacebookShare on Twitter

ದೇಶಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದ ನೂರು ವರ್ಷ ಹಳೆಯದಾದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ( SAIL) ನಿರ್ಣಯ ಕೈಗೊಂಡ ಬೆನ್ನಲ್ಲೇ ಶಿವಮೊಗ್ಗ ರಾಜಕಾರಣ ಚಿಗುರುಡೆದುಕೊಂಡಿದೆ. ನಿನ್ನೆ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮ ಕೈ ಮೀರಿ ಹೋಯ್ತು ಎಂದಿದ್ದು ಕಾಂಗ್ರೆಸ್ ಮುಖಂಡರನ್ನ ಕೆರಳಿಸಿದೆ. ಯಡಿಯೂರಪ್ಪ ಹಾಗೂ ಪುತ್ರ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಈ ತನಕ ಕಾರ್ಖಾನೆ ಉಳಿಸುತ್ತೇವೆಂದು ಬಡಾಯಿ ಕೊಚ್ಚಿಕೊಂಡು ಚುನಾವಣಾ ಅಸ್ತ್ತ ಮಾಡಿಕೊಂಡು ಬಂದು ಜನರಿಗೆ ಮೋಸ ಮಾಡಿದ್ರು ಎಂದು ಭದ್ರಾವತಿ ಶಾಸಕ ಸಂಗಮೇಶ್ವರ್ ಹರಿಹಾಯ್ದಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಭದ್ರಾವತಿಯಲ್ಲಿಂದು ಮಾತನಾಡಿ, ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ ಯಾಕಂದ್ರೆ. ಐದು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಗಣಿ ನೀಡಿತ್ತು. ವಿ ಐ ಎಸ್ ಎಲ್ ಫ್ಯಾಕ್ಟರಿಯನ್ನ ವ್ಯವಸ್ಥಿತವಾಗಿ ನಡೆಸುವುದಾಗಿ ಕೇಂದ್ರ ಭರವಸೆ ನೀಡಿತ್ತು ಎಂದರು

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಮಣದುರ್ಗದಲ್ಲಿ ಗಣಿ ನೀಡಿತ್ತು ಆದರೆ ಕೇಂದ್ರ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಇಲ್ಲ. ಈತನಕ ಮೂರು ಜನ ಕೇಂದ್ರ ಮಂತ್ರಿಗಳು ಬಂದು ಇಲ್ಲಿ ಬೊಗಳಿದ್ರು. ಒಬ್ಬರು 6,000 ಕೋಟಿ ಅಂದ್ರು ಇನ್ನೊಬ್ರು 3000 ಕೋಟಿ ಅಂದ್ರು. ಒಂದು ರೂಪಾಯಿ ಕೂಡ ಬಂದು ತಲುಪಿಲ್ಲ. ಬಿಜೆಪಿ ನಾಯಕರು ಈ ಕಾರ್ಖಾನೆಯನ್ನ ಮುಚ್ಚಲು ಬಿಡುವುದಿಲ್ಲ ಅಂತ ಹೇಳಿ ಈಗ ಮೋಸ ಮಾಡಿದರು. ಭದ್ರಾವತಿ ಜನರಿಗೆ ದ್ರೋಹ ಮಾಡಿದ್ದಾರೆ ನಾನಿದ್ದೇನೆ ನಾನಿದ್ದೇನೆ ಎಂದು ಹೇಳುತ್ತಾ ಜನರಿಗೆ ದ್ರೋಹ ಬಗೆದರು‌.

 ನಾನೀಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ಬಳಿ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೇನೆ ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯರು ಹಾಗೂ ಸಂಸದ ಡಿಕೆ ಸುರೇಶ್ ಕಾರ್ಖಾನೆಯ ಗೇಟಿನ ಎದುರು ಪ್ರತಿಭಟನೆಗೆ ಹಾಜರಾಗಲಿದ್ದಾರೆ. ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಉಗ್ರ ಹೋರಾಟವನ್ನು ಮಾಡುತ್ತೇವೆ ಯಾವುದೇ ಕಾರಣಕ್ಕೂ ಮುಚ್ಚುವುದಕ್ಕೆ ಬಿಡೋದಿಲ್ಲ ಎಂದರು. ಬಿಜೆಪಿ ನಾಯಕರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ.ಬೇರೆ ಕಡೆ ಹೋಗಿ ಕಲಿತುಕೊಂಡು ಬರಲಿ. ಉತ್ತರ ಭಾರತದಲ್ಲಿ ಎಲ್ಲಾ ಕಾರ್ಖಾನೆಗಳನ್ನು ಆರಂಭ ಮಾಡುತಿದ್ದಾರೆ. ಪುನರಾರಂಭ ಮಾಡ್ತಿದ್ದಾರೆ. ಆದರೆ ಇಲ್ಲಿ ಮುಚ್ಚುತ್ತಿದ್ದಾರೆ. ಈತರದ ರಾಜಕಾರಣ ನಾನು ನೋಡಿಲ್ಲ. ಸರ್ಕಾರಿ ಸೌಮ್ಯದ ಕಾರ್ಖಾನೆಗಳನ್ನು ಆರಂಭಿಸಿದ್ದೆ ಇಂದಿರಾಗಾಂಧಿಯವರು. ಕಾಂಗ್ರೆಸ್ ಸರ್ಕಾರದಲ್ಲಿ ಆರಂಭವಾದ ಕಾರ್ಖಾನೆಗಳನ್ನೂ ಮುಚ್ಚುತ್ತಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಬಿಜೆಪಿಯವರು ಚುನಾವಣೆ ಗೆಲ್ಲುವ ಉದ್ದೇಶದಿಂದ ಇವೆಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ನೂರು ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರು ಆರಂಭಿಸಿದ ಕಾರ್ಖಾನೆ, ದೇಶದಲ್ಲೇ ಹೆಮ್ಮೆ ಪ್ರತಿಕ ಬಿಜೆಪಿ ಬಂದ ಮೇಲೆ ಮುಚ್ಚಿದ್ರು. ಈ ಕಾರ್ಖಾನೆಯನ್ನು ಮುಚ್ಚಲು ಹೊರಟಿದ್ದಾರೆ ಜನ ಭದ್ರಾವತಿ ಜನರೆಲ್ಲ ಉಗ್ರವಾಗಿ ಖಂಡಿಸುತ್ತೇವೆ. ಜನರ ಶಾಪ ಉದ್ಯೋಗಿಗಳ ಶಾಪ ಈ ಬಿಜೆಪಿ ಮುಖಂಡರಿಗೆ ತಟ್ಟುತ್ತೆ ಎಂದು ಸಂಗಮೇಶ್ವರ್ ಹೇಳಿದರು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  
ಸಿನಿಮಾ

ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  

by ಪ್ರತಿಧ್ವನಿ
January 29, 2023
KHENDADA SERAGU | ಹೀರೋ ಆಗಬೇಕು ಅಂತಾನೆ ಬಂದು PRO ಆದೆ..ಆದರೆ ಈಗ..? | Harish Arasu PRO | Actor
ಸಿನಿಮಾ

KHENDADA SERAGU | ಹೀರೋ ಆಗಬೇಕು ಅಂತಾನೆ ಬಂದು PRO ಆದೆ..ಆದರೆ ಈಗ..? | Harish Arasu PRO | Actor

by ಪ್ರತಿಧ್ವನಿ
January 24, 2023
ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ
Top Story

ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ

by ಪ್ರತಿಧ್ವನಿ
January 24, 2023
YASH | RASHMIKA MANDANNA | RACHITHA RAM | ಈ ಹಿಂದೆ ಹೇಳಿದ ನಟ ನಟಿಯರ ಭವಿಷ್ಯ ಸತ್ಯವಾಗಿದೆ ನೋಡಿ!
ಸಿನಿಮಾ

YASH | RASHMIKA MANDANNA | RACHITHA RAM | ಈ ಹಿಂದೆ ಹೇಳಿದ ನಟ ನಟಿಯರ ಭವಿಷ್ಯ ಸತ್ಯವಾಗಿದೆ ನೋಡಿ!

by ಪ್ರತಿಧ್ವನಿ
January 28, 2023
Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah
ರಾಜಕೀಯ

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

by ಪ್ರತಿಧ್ವನಿ
January 31, 2023
Next Post
HDK ಕೆಣಕುವುದು, ಬಿಜೆಪಿಗೆ ಮುಜುಗರ ಮಾಡುವುದು.. ಬಿಜೆಪಿಯದ್ದೇ ಲೆಕ್ಕಾಚಾರ..

HDK ಕೆಣಕುವುದು, ಬಿಜೆಪಿಗೆ ಮುಜುಗರ ಮಾಡುವುದು.. ಬಿಜೆಪಿಯದ್ದೇ ಲೆಕ್ಕಾಚಾರ..

B K Sangameshwar : ಸರ್ಕಾರ ನೆಡೆಸೋಕೆ ಯೋಗ್ಯತೆ ಇಲ್ಲ | Pratidhvani

B K Sangameshwar : ಸರ್ಕಾರ ನೆಡೆಸೋಕೆ ಯೋಗ್ಯತೆ ಇಲ್ಲ | Pratidhvani

siddaramaiah: ಲಾಯರ್​ ನಾನು ನಂಗಿಂತ ಗೊತ್ತಾ ನಿಂಗೆ | Congress | Pratidhvani

siddaramaiah: ಲಾಯರ್​ ನಾನು ನಂಗಿಂತ ಗೊತ್ತಾ ನಿಂಗೆ | Congress | Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist