ದೇಶಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದ ನೂರು ವರ್ಷ ಹಳೆಯದಾದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ( SAIL) ನಿರ್ಣಯ ಕೈಗೊಂಡ ಬೆನ್ನಲ್ಲೇ ಶಿವಮೊಗ್ಗ ರಾಜಕಾರಣ ಚಿಗುರುಡೆದುಕೊಂಡಿದೆ. ನಿನ್ನೆ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮ ಕೈ ಮೀರಿ ಹೋಯ್ತು ಎಂದಿದ್ದು ಕಾಂಗ್ರೆಸ್ ಮುಖಂಡರನ್ನ ಕೆರಳಿಸಿದೆ. ಯಡಿಯೂರಪ್ಪ ಹಾಗೂ ಪುತ್ರ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಈ ತನಕ ಕಾರ್ಖಾನೆ ಉಳಿಸುತ್ತೇವೆಂದು ಬಡಾಯಿ ಕೊಚ್ಚಿಕೊಂಡು ಚುನಾವಣಾ ಅಸ್ತ್ತ ಮಾಡಿಕೊಂಡು ಬಂದು ಜನರಿಗೆ ಮೋಸ ಮಾಡಿದ್ರು ಎಂದು ಭದ್ರಾವತಿ ಶಾಸಕ ಸಂಗಮೇಶ್ವರ್ ಹರಿಹಾಯ್ದಿದ್ದಾರೆ.
ಭದ್ರಾವತಿಯಲ್ಲಿಂದು ಮಾತನಾಡಿ, ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ ಯಾಕಂದ್ರೆ. ಐದು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಗಣಿ ನೀಡಿತ್ತು. ವಿ ಐ ಎಸ್ ಎಲ್ ಫ್ಯಾಕ್ಟರಿಯನ್ನ ವ್ಯವಸ್ಥಿತವಾಗಿ ನಡೆಸುವುದಾಗಿ ಕೇಂದ್ರ ಭರವಸೆ ನೀಡಿತ್ತು ಎಂದರು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಮಣದುರ್ಗದಲ್ಲಿ ಗಣಿ ನೀಡಿತ್ತು ಆದರೆ ಕೇಂದ್ರ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಇಲ್ಲ. ಈತನಕ ಮೂರು ಜನ ಕೇಂದ್ರ ಮಂತ್ರಿಗಳು ಬಂದು ಇಲ್ಲಿ ಬೊಗಳಿದ್ರು. ಒಬ್ಬರು 6,000 ಕೋಟಿ ಅಂದ್ರು ಇನ್ನೊಬ್ರು 3000 ಕೋಟಿ ಅಂದ್ರು. ಒಂದು ರೂಪಾಯಿ ಕೂಡ ಬಂದು ತಲುಪಿಲ್ಲ. ಬಿಜೆಪಿ ನಾಯಕರು ಈ ಕಾರ್ಖಾನೆಯನ್ನ ಮುಚ್ಚಲು ಬಿಡುವುದಿಲ್ಲ ಅಂತ ಹೇಳಿ ಈಗ ಮೋಸ ಮಾಡಿದರು. ಭದ್ರಾವತಿ ಜನರಿಗೆ ದ್ರೋಹ ಮಾಡಿದ್ದಾರೆ ನಾನಿದ್ದೇನೆ ನಾನಿದ್ದೇನೆ ಎಂದು ಹೇಳುತ್ತಾ ಜನರಿಗೆ ದ್ರೋಹ ಬಗೆದರು.
ನಾನೀಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ಬಳಿ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೇನೆ ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯರು ಹಾಗೂ ಸಂಸದ ಡಿಕೆ ಸುರೇಶ್ ಕಾರ್ಖಾನೆಯ ಗೇಟಿನ ಎದುರು ಪ್ರತಿಭಟನೆಗೆ ಹಾಜರಾಗಲಿದ್ದಾರೆ. ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಉಗ್ರ ಹೋರಾಟವನ್ನು ಮಾಡುತ್ತೇವೆ ಯಾವುದೇ ಕಾರಣಕ್ಕೂ ಮುಚ್ಚುವುದಕ್ಕೆ ಬಿಡೋದಿಲ್ಲ ಎಂದರು. ಬಿಜೆಪಿ ನಾಯಕರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ.ಬೇರೆ ಕಡೆ ಹೋಗಿ ಕಲಿತುಕೊಂಡು ಬರಲಿ. ಉತ್ತರ ಭಾರತದಲ್ಲಿ ಎಲ್ಲಾ ಕಾರ್ಖಾನೆಗಳನ್ನು ಆರಂಭ ಮಾಡುತಿದ್ದಾರೆ. ಪುನರಾರಂಭ ಮಾಡ್ತಿದ್ದಾರೆ. ಆದರೆ ಇಲ್ಲಿ ಮುಚ್ಚುತ್ತಿದ್ದಾರೆ. ಈತರದ ರಾಜಕಾರಣ ನಾನು ನೋಡಿಲ್ಲ. ಸರ್ಕಾರಿ ಸೌಮ್ಯದ ಕಾರ್ಖಾನೆಗಳನ್ನು ಆರಂಭಿಸಿದ್ದೆ ಇಂದಿರಾಗಾಂಧಿಯವರು. ಕಾಂಗ್ರೆಸ್ ಸರ್ಕಾರದಲ್ಲಿ ಆರಂಭವಾದ ಕಾರ್ಖಾನೆಗಳನ್ನೂ ಮುಚ್ಚುತ್ತಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಬಿಜೆಪಿಯವರು ಚುನಾವಣೆ ಗೆಲ್ಲುವ ಉದ್ದೇಶದಿಂದ ಇವೆಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ನೂರು ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರು ಆರಂಭಿಸಿದ ಕಾರ್ಖಾನೆ, ದೇಶದಲ್ಲೇ ಹೆಮ್ಮೆ ಪ್ರತಿಕ ಬಿಜೆಪಿ ಬಂದ ಮೇಲೆ ಮುಚ್ಚಿದ್ರು. ಈ ಕಾರ್ಖಾನೆಯನ್ನು ಮುಚ್ಚಲು ಹೊರಟಿದ್ದಾರೆ ಜನ ಭದ್ರಾವತಿ ಜನರೆಲ್ಲ ಉಗ್ರವಾಗಿ ಖಂಡಿಸುತ್ತೇವೆ. ಜನರ ಶಾಪ ಉದ್ಯೋಗಿಗಳ ಶಾಪ ಈ ಬಿಜೆಪಿ ಮುಖಂಡರಿಗೆ ತಟ್ಟುತ್ತೆ ಎಂದು ಸಂಗಮೇಶ್ವರ್ ಹೇಳಿದರು.