ಜುಲೈ 1 ರಂದು ಜೈಪುರ ಪೊಲೀಸರು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ಇತರ 21 ಜನರನ್ನು ಬಂಧಿಸಿರುವುದನ್ನು ಮಾನವ ಹಕ್ಕುಗಳು ಮತ್ತು ದಲಿತ ಕಾರ್ಯಕರ್ತರು ಭಾನುವಾರ ಖಂಡಿದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಶುಕ್ರವಾರ ರಾತ್ರಿ, ಕೋವಿಡ್ ಆರೋಗ್ಯ ಸಹಾಯಕರು ಕರೆದ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಜೈಪುರದ ಹೋಟೆಲ್ನಿಂದ ಆಜಾದ್ ಅವರನ್ನು ಬಂಧಿಸಲಾಗಿದೆ. ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತೆಭಟನೆ ನಡೆಸುತ್ತಿದ್ದು, ಅವರನ್ನು ಬೆಂಬಲಿಸಲು ಆಜಾದ್ ಜೈಪುರಕ್ಕೆ ಬಂದಿದ್ದರು ಎಂದು ದಲಿತ ಹೋರಾಟಗಾರ ಧರ್ಮೇಂದ್ರ ಕುಮಾರ್ ಹೇಳಿದರು.
ಅಜಾದ್ ಅವರ ಬಂಧ ” ಅಭಿವ್ಯಕ್ತಿ ಸ್ವಾತಂತ್ರ್ಯದ ಅಪಹಾಸ್ಯ” ಎಂದು ಧರ್ಮೇಂದ್ರ ಖಂಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಪ್ರತಿಭಟನೆ ಸಾಂವಿಧಾನಿಕ ಹಕ್ಕು ಅಜಾದ್ ಅವರಿಂದ ಅದನ್ನು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ ಇದು ಸ್ಪಷ್ಟವಾಗಿದೆ ಕಾಣುತ್ತಿದೆ.” ಎಂದು ಕಿಡಿಕಾರಿದ್ದಾರೆ.
22 ವ್ಯಕ್ತಿಗಳನ್ನು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಂಘಟನೆ ಆರೋಪಿಸಿದೆ.
“ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಜಾದ್ ಅವರ ವಿಚಾರಣೆಗೆ ಮತ್ತು ಜಾಮೀನು ಅರ್ಜಿ ಸಲ್ಲಿಸಲು ಯಾವುದೇ ಅವಕಾಶವನ್ನು ನೀಡದೆ ನಿರಂಕುಶವಾಗಿ ಆಜಾದ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.” ಎಂದು ಸಂಘಟನೆಗಳು ಆರೋಪಿಸಿವೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.