ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರಿರುವ ಪುಟ್ಟಣ್ಣಗೆ ಟಿಕೆಟ್ ಕೊಡದಂತೆ ರಾಜಾಜಿ ನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಹೈಡ್ರಾಮ ನಡೆದಿತ್ತಾದರೂ, ಬಹುತೇಕ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡುವುದು ಪಕ್ಕಾ ಆಗಿದೆ.
ರಾಜಾಜಿನಗರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿ ಭವ್ಯಾ ನರಸಿಂಹಮೂರ್ತಿ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಹಿಂದುತ್ವ ಪಕ್ಷದಿಂದ ಬಂದವರಿಗಾಗಿ ಹಿಂದುತ್ವ ಶಕ್ತಿಗಳೊಂದಿಗೆ ದಿನಾ ಬಡಿದಾಡುವಂತಹ ಭವ್ಯಾರಂತಹವರಿಗೆ ಟಿಕೆಟ್ ನೀಡದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಸಿಎಎ ಎನ್ಆರ್ಸಿ ವಿರುದ್ಧ ನಡೆದಂತಹ ಪ್ರತಿಭಟನೆ ವೇಳೆ ಏಕಾಂಗಿಯಾಗಿ ಮಾಧ್ಯಮಗಳನ್ನು, ಪೊಲೀಸರನ್ನು ಎದುರಿಸಿ ಮಾಡಿದ ಭಾಷಣದಿಂದ ರಾತ್ರೋರಾತ್ರಿ ರಾಜ್ಯದ ಗಮನ ಸೆಳೆದಿದ್ದ ಭವ್ಯಾ ಅವರು ಹಿಂದುತ್ವ ರಾಜಕಾರಣವನ್ನು ದಿಟ್ಟವಾಗಿ ಎದುರಿಸಿ, ಕಾಂಗ್ರೆಸ್ ಪರ ಗಟ್ಟಿ ಯುವದನಿಯಾಗಿದ್ದರು. ಇಂತಹ ಯುವ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬುದ ಕಾಂಗ್ರೆಸ್ ಅಭಿಮಾನಿಗಳ ಕೂಗೂ ಆಗಿತ್ತು.
ಅದಾಗ್ಯೂ, ಭವ್ಯಾ ಅವರಿಗೆ ಟಿಕೆಟ್ ನೀಡದಿರುವುದು ಸಾಕಷ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ದೊಡ್ಡ ಸಂಖ್ಯೆಯಲ್ಲಿ ಅಲ್ಲದಿದ್ದರೂ, ಭವ್ಯಾ ಅವರಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದು, ಒಂದು ಕ್ಷೇತ್ರಕ್ಕೆ ಅವರು ಸೀಮಿತರಾಗಿರಲಿಲ್ಲ.
ಈ ನಡುವೆ ಭವ್ಯಾ ತಮ್ಮ ಅಭಿಮಾನಿಗಳಿಗಾಗಿ ಟ್ವೀಟ್ ಮಾಡಿದ್ದು, ನಾನು ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತೀನಿ ಎಂದಿದ್ದಾರೆ.
ನನ್ನ ಗುರುತನ್ನು ತಲುಪಲು ಮತ್ತು ಅಚಲವಾಗಿ ನಿಲ್ಲಲು ಇಲ್ಲಿದ್ದೇನೆ. ಒಂದು ಹಿನ್ನೆಡೆ ನನ್ನನ್ನು ತಡೆಯುವುದಿಲ್ಲ, ನಿಮ್ಮ ಅಭಿಮಾನ ಹಾಗೂ ಹಿತಕರವಾದ ಮಾತುಗಳಿಗೆ ಧನ್ಯವಾದ, ನಾನು ನಿಮಗಾಗಿ ನಿಲ್ಲುತ್ತೇನೆ, ನಿಮಗಾಗಿ ಹೋರಾಡುತ್ತೇನೆ, ನಿಮ್ಮ ನಂಬಿಕೆ ಉಳಿಸಲು ಕಷ್ಟಪಟ್ಟು ದುಡಿಯುತ್ತೇನೆ, ನೀವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
I am here to stay and will make my mark. One setback cannot stop me.
— Bhavya Narasimhamurthy (@Bhavyanmurthy) March 25, 2023
Thanks for all your support and kind words. ❤️
I will
1. Stand for you,
2. Fight for you,
3. Work hard to keep up your trust in me
4. MAKE YOU ALL PROUD 😊 pic.twitter.com/FMvRbuCxAK
ಕೈ