ಕಳೆದ ವರ್ಷ ಎಡಬಿಡದೆ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳು ವಾಹನಗಳು ಸಂಚರಿಸದ ರೀತಿಯಲ್ಲಿ ಹಾಳಾಗಿದ್ದವು. ಈ ಕುರಿತು ಜನಪ್ರತಿನಿಧಿಗಳಿಗೆ ತಿಳಿಸಿದ್ದರು ಸಹ ಯಾರೂ ಅಷ್ಟಾಗಿ ಕಿವಿಕೊಡದ ಕಾರಣ ಜನರು ರಸ್ತೆಯಲ್ಲಿ ಭತ್ತದ ಪೈರನ್ನು ನೆಡುವ ಮೂಲಕ ಹಾಗೂ ಗುಂಡಿ ಬಿದ್ದ ರಸ್ತೆಗಳಿಗೆ ಪೂಜೆಯನ್ನು ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಈ ವರ್ಷದ ಪ್ರಾರಂಭದಿಂದಲೇ ರಸ್ತೆಗಳ ವಿಚಾರದಲ್ಲಿ ಆದ ಲೋಪದೋಷಗಳನ್ನು ಸರಿ ಪಡಿಸಬೇಕು ಮತ್ತು ಇದುವೇ ಮೊದಲ ಆದ್ಯತೆಯಾಗಿರಬೇಕು ಎಂದು ನಗರದ ಹಲವಾರು ಕ್ಷೇಮಾಭಿವೃದ್ಧಿ ಸಂಘಗಳ ಮುಖಂಡು ಒತ್ತಾಯಸಿದ್ದಾರೆ. ಆದರೆ, 2020ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಉಸ್ತುವಾರಿಯನ್ನು ವಹಿಸಿದ್ದ ಮುಖ್ಯಮಂತ್ರಿ ಬಸವಾರಜ್ ಬೊಮ್ಮಾಯಿ ರಸ್ತೆಗಳಿಗಾಗಿ 20,060 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು ಎಂದು ತಿಳಿಸಿದ್ದರು. ಆದರೆ, ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
ನಗರವು ಸುಮಾರು 13,000 ಕಿ.ಮೀ ಉದ್ದದ ರಸ್ತೆಗಳನ್ನು ಹೊಂದಿದೆ ಮತ್ತು ಖರ್ಚು ಮಾಡಿದ ಈ ಮೊತ್ತಕ್ಕೆ ನಗರದ ರಸ್ತೆಗಳೆಲ್ಲವೂ ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತಿಸಬಹುದಿತ್ತು. ಆದರೆ, ಅದು ಆಗಿಲ್ಲ ಮತ್ತು ಮುಖ್ಯಮಂತ್ರಿಗಳು ಕಳೆದ ವಾರ 191 ಕಿ.ಮೀ ಉದ್ದದ ರಸ್ತೆಯ ನಿರ್ವಹಣೆಗೆ ಕರೆದಿದ್ದ ಟೆಂಡರ್ ಅನ್ನು ರದ್ದುಗೊಳಿಸುವ ಮೂಲಕ ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ ಎಂದು ತೋರಿಸುತ್ತಿದೆ. ರಸ್ತೆಗಳ ದುಸ್ಥಿತಿ ಬಗ್ಗೆ ಗಮನ ಹರಿಸದ ಅಧಿಕಾರಿಗಳ ತಲೆದಂಡಕ್ಕು ಸಹ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಬೆಂಗಳೂರು ಪ್ರಜಾ ವೇದಿಕೆಯ ಅಧ್ಯಕ್ಷ ಎನ್.ಎಸ್.ಮುಕುಂದ್, ಇಂತಹ ವ್ಯರ್ಥ ವೆಚ್ಚಗಳು ಹಾಗೂ ಭ್ರಷ್ಟಾಚಾರವನ್ನು ತಪ್ಪಿಸಲು ಸರ್ಕಾರ ಜನರಿಗೆ ರಸ್ತೆಗಳ ನಿರ್ವಹಣೇಯನ್ನು ನೀಡಬೇಕು ಮತ್ತು ರಸ್ತೆಗಳ ನಿರ್ವಹಣೆಗಾಗಿ ಒಂದು ನಿಯಮವನ್ನು ಅನಿಷ್ಠಾನಗೊಳಿಸುವಲ್ಲಿ ವಿಫಲವಾಗಿವೆ ಎಂದು ಹೇಳುತ್ತಾರೆ.
ಈ ಕುರಿತು ಗುತ್ತಿಗೆದಾರನನ್ನು ವಿಚಾರಿಸಿದರೆ, ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಮಾತನಡುತ್ತಾರೆ. ಈ ಬಗ್ಗೆ ಗುತ್ತಿಗೆದಾರರ ಸಂಘವು ಈಗಾಗಲೇ ಪ್ರಧಾನಿಗೆ ಶೇ.40ರಷ್ಟು ಕಿಕ್ಬ್ಯಾಕ್ ಪಡೆದಿರುವ ಕುರಿತು ಪತ್ರ ಬರೆದಿದ್ದೇವೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಾರೆ.
ಈ ಕುರಿತು ಮಾತನಾಡಿರುವ ಓಲಾ-ಉಬರ್ ಚಾಲಕಾರ ಸಂಘದ ಅದ್ಯಕ್ಷ ಮಾತನಾಡಿ, ನಗರದಲ್ಲಿ ರಸ್ತೆಗುಂಡಿಗಳು ಹೆಚ್ಚಾಗಿದ್ದು ಅಲ್ಲಲ್ಲಿ ಹಗೆದು ಹಾಗೆಯೇ ಬಿಡಲಾಗಿದೆ. ಸಮಸ್ಯೆಯನ್ನು ಸರಿದೂಗಿಸಲು ರಸ್ತೆ ಗುಂಡಿಗಳನ್ನು ಮುಚ್ಚಬೇಕು ಮತ್ತು ಕಾಂಕ್ರೀಟ್ ರಸ್ತೆಗಳ ಕಾಮಗಾರಿಯನ್ನು ಬೇಗ ಮುಗಿಸಬೇಕು ಎಂದು ಹೇಳುತ್ತಾರೆ.