ಬೆಂಗಳೂರು : ಪ್ರಿಯಕರನೊಂದಿಗೆ ಲೀವ್ ಇನ್ ರಿಲೇಷನ್ನಲ್ಲಿದ್ದ ಮಗಳೊಬ್ಬಳು ತಂದೆ – ತಾಯಿ ಹಾಗೂ ಸಹೋದರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಆಘಾತಕಾರಿ ಘಟನೆ ನಡೆದಿದೆ. ನಗರದ ಸಿಗೇಹಳ್ಳಿಯಲ್ಲಿರುವ ಡಾಮಿನಿಕ್ ಲೇಔಟ್ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್ಮೆಂಟ್ನಲ್ಲಿ ತಡರಾತ್ರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಈ ಕೃತ್ಯ ಎಸಗಿದ ಬಳಿಕ ಆರೋಪಿಗಳಾದ ಕೆನತ್ (26) ಹಾಗೂ ಶ್ವೇತಾ (25) ಪರಾರಿಯಾಗಿದ್ದಾರೆ. ತಂದೆ ಸೋಮಸುಂದರ್ (52), ತಾಯಿ ಲಕ್ಷ್ಮಿ (48) ಹಾಗೂ ಸುಪ್ರಿಯಾ (19) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಪ್ರಮುಖವಾಗಿ ಕೊಲೆಗಡುಕರಾದ ಕೆನತ್ ಹಾಗೂ ಶ್ವೇತಾ ಎರಡು ತಿಂಗಳುಗಳಿಂದ ಡಾಮಿನಿಕ್ ಲೇಔಟ್ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಇಬ್ಬರೂ ಒಟ್ಟಿಗೆ ವಾಸಿಸುತ್ತಿರುವುದಕ್ಕೆ ಶ್ವೇತಾ ಪೋಷಕರು ಒಪ್ಪಿರಲಿಲ್ಲ, ಅದನ್ನು ವಿರೋಧಿಸಿದ್ದರು. ಈ ನಡುವೆಯೇ ಕಳೆದ ಶನಿವಾರ ಸಂಜೆ ಮಗಳನ್ನು ಭೇಟಿಯಾಗಲು ಶ್ವೇತಾ ಪೋಷಕರು ಅಪಾರ್ಟ್ಮೆಂಟ್ಗೆ ಆಗಮಿಸಿದ್ದರು.
ಇದನ್ನೂ ಓದಿ : ಸಮಾಜಕ್ಕೆ 7.5 ರಷ್ಟು ಮೀಸಲಾತಿ ಸಿಗದಿದ್ದರೆ ರಾಜೀನಾಮೆ : 2028ಕ್ಕೆ ನಾನೇ ಮಂತ್ರಿ ಎಂದ ರಮೇಶ್ ಜಾರಕಿಹೊಳಿ
ಬಳಿಕ ಇದೇ ವಿಚಾರಕ್ಕೆ ನಿನ್ನೆ ಸೋಮವಾರ ರಾತ್ರಿ 7:30ರ ಸುಮಾರಿಗೆ ಪೋಷಕರು ಹಾಗೂ ಶ್ವೇತಾ ನಡುವೆ ವಾಗ್ವಾದವಾಗಿದೆ. ಅದೇ ಸಮಯದಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಈ ಕಿರಾತಕರಿಂದ, ತಪ್ಪಿಸಿಕೊಂಡು ಹೊರ ಓಡಿ ಬಂದಿದ್ದ ಸೋಮಸುಂದರ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಮಾರಕಾಸ್ರ್ರಗಳ ಬಳಕೆಯಿಂದ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೇ ಸೋಮಸುಂದರ್ ಮೃತಪಟ್ಟಿದ್ದಾರೆ.
ಇನ್ನೂ ಇಂದಿನ ಸಮಾಜದಲ್ಲಿ ಯುವ ಮನಸ್ಥಿತಿಗಳು ತೀವ್ರ ಕಲುಚಿತವಾಗುತ್ತಿದ್ದು, ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಪಾಶ್ಷಾತ್ಯ ಸಂಸ್ಖೃತಿಗೆ ಮಾರು ಹೋಗಿ ಯುವ ಸಮೂಹ ಅಪರಾಧಿಕ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದೆ. ಇದರ ಫಲವಾಗಿ ದಿನ ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಈ ತೆರನಾದ ಭೀಕರ ಘಟನೆಗಳು ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿ. ಅದೇನೇ ಇರಲಿ ಹೆತ್ತು ಹೊತ್ತು ಸಾಕಿದ ಮಗಳ ಕಿರಾತಕಿ ಮಗಳಿಂದಲೇ ತಂದೆ, ತಾಯಿ ಹಾಗೂ ರಕ್ತ ಹಂಚಿಕೊಂಡಿದ್ದ ಸಹೋದರಿಯ ದಾರುಣ ಅಂತ್ಯವಾಗಿರುವುದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ..!






