ಎರಡನೇ ಅಲೆ ಬಂದು ಹೋಗಿದೆ, ಸಾವು ನೋವುಗಳಾಗಿವೇ, ಹೆಚ್ಚೆಚ್ಚು ಸೋಂಕು ಹರಿಡುವಿಕೆಯಾಗಿದೆ, ಈಗ ಕರೋನ ಕಡಿಮೆ ಆಯ್ತು ಎಂದು ಯಾರು ತಿಳಿಯಬಾರದು ಡಿಸೆಂಬರ್ ವರೆಗೂ ಕರೋನದಿಂದ ಎಚ್ಚರಿಕೆಯಿಂದಿರಬೇಕು. ನಾವು ಗುಂಪು ಸೇರುವುದನ್ನು ನಿಲ್ಲಿಸಬೇಕು ಎಂದು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮಂಜುನಾಥ್ ಎಚ್ಚರಿಸಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಮಾತಾಡಿದ ಅವರು, ಈಗ ರಾಜ್ಯದಲ್ಲಿ ಮೂರು ಮೂರುವರೆ ಸಾವಿರ ಪ್ರಕರಣಗಳು ಪ್ರತಿದಿನ ಬರುತ್ತಿದೆ. ಈ ಪ್ರಕರಣಗಳು ಇನ್ನೂ ಕಡಿಮೆಯಾದರು ಮುನ್ನೆಚ್ಚರಿಕೆಯಿಂದ ಪ್ರತಿ ದಿನ ಮಾಸ್ಕ್ ಕಡ್ಡಾಯವಾಗಿ ಹಾಕಲೇಬೇಕು. ಮಾಸ್ಕ್ ಹಾಕುವುದು ನಮ್ಮ ದಿನಚರಿಯೇ ಆಗಬೇಕಿದೆ ಎಂದಿದ್ದಾರೆ.
ಎಲ್ಲಾ ತರಹದ ಸಮಾಜಿಕ ಸಮಾವೇಶ,
ಊರು ಜಾತ್ರೆಗಳು, ಹಬ್ಬಗಳೆಲ್ಲವನ್ನು ನಿರ್ಬಂಧ ಮಾಡಬೇಕು. ಮದುವೆಗಳಿಗೆ ಈಗಾಗಲೇ ಗುಂಪು ಸೇರದಂತೆ ನಿರ್ಬಂಧ ಮಾಡಿದ್ದಾರೆ, ಆದರು ನಾವು ಡಿಸೆಂಬರ್ ವರೆಗೂ ಗುಂಪು ಸೇರದಂತೆ ಪ್ರತಿದಿನ ಮಾಸ್ಕ್ ಹಾಕಿ ಸುರಕ್ಷಿತವಾಗಿರುವುದು ಒಳ್ಳೆಯದು ಎಂದಿದ್ದಾರೆ.
ಈಗಾಗಲೇ ಡಾ. ಮಂಜುನಾಥ್ ಅವರು ಹೇಳಿರುವಂತೆ, ಡೆಲ್ಟಾ ರೂಪಾಂತರ ವೈರಸ್ ಹರಡುವಿಕೆಯ ವೇಗ ತೀವ್ರತೆ ಅಧಿಕವಾಗಿದ್ದು ಈ ವರ್ಷ ಪೂರ್ತಿ ಮುನ್ನೆಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದಿದ್ದಾರೆ. ಪ್ರತಿ ನಾಲ್ಕು ಐದು ತಿಂಗಳಿಗೆ ವೈರಸ್ ರೂಪಾಂತರ ಆಗುವುದು ಸಾಮಾನ್ಯವಾದದ್ದು ಹಾಗಾಗಿ ಅನಗತ್ಯವಾಗಿ ಆತಂಕ ಪಡಬೇಕಿಲ್ಲ ಎಂದಿದ್ದರು.
ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರ ಸೇವಾವಧಿಯನ್ನು ಒಂದು ವರ್ಷ ಕಾಲ ವಿಸ್ತರಿಸಲಾಗಿದೆ.
ಡಾ. ಮಂಜುನಾಥ್ ಅವರ ಸೇವಾವಧಿ ಜೂನ್ 30 ಕ್ಕೆ ಕೊನೆಯಾಗಬೇಕಿತ್ತು. ಕೋವಿಡ್ ಸಂದರ್ಭದಲ್ಲಿ ಅವರು ಸರ್ಕಾರಕ್ಕೆ ಉಪಯುಕ್ತವಾದ ಸಲಹೆ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಅವರ ಸಲಹೆ ಅಗತ್ಯವಾಗಿರುವುದರಿಂದ ಅವರ ಸೇವೆಯನ್ನು ವಿಸ್ತರಿಸಬೇಕೆಂದು ಹಲವು ಪ್ರಮುಖರು ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಾ. ಮಂಜುನಾಥ್ ಅವರ ಸೇವಾವಧಿಯನ್ನು 2022 ರ ಜೂನ್ ವರೆಗೆ ವಿಸ್ತರಿಸಲಾಗಿದೆ.